ಕರ್ನಾಟಕ

karnataka

By

Published : Jul 3, 2019, 3:56 PM IST

ETV Bharat / state

ಬಾರದ ಮಳೆಗೆ ಬಿತ್ತನೆ ಕಾಣದ ಭೂಮಿ: ಆತಂಕದಲ್ಲಿ ರೈತರು

ಮಹಾರಾಷ್ಟ್ರ, ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಬಹುತೇಕ ಕಡೆ ಮಳೆಯಾಗುತ್ತಿದ್ದು, ಅಥಣಿ ಹಾಗೂ ಕಾಗವಾಡ ತಾಲೂಕಿನಲ್ಲಿ ಮಾತ್ರ ಮಳೆಯಾಗದಿರುವುದು ರೈತ ಸಂಕಷ್ಟಕ್ಕೆ ಸಿಲುಕಿದಂತಾಗಿದೆ. ಯಾವುದೇ ಬೆಳೆ ಬೆಳೆಯಲಾರದೆ ಬೇಸರಗೊಂಡಿದ್ದಾನೆ ಅನ್ನದಾತ.

ಮಳೆಯಿಲ್ಲದೆ ಬರಿದಾದ ಭೂಮಿ


ಚಿಕ್ಕೋಡಿ:ಮಹಾರಾಷ್ಟ್ರ, ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಹಲವೆಡೆ ಧಾರಾಕಾರ ಮಳೆಯಾಗುತ್ತಿದೆ. ಆದರೆ, ಅಥಣಿ, ಕಾಗವಾಡ ತಾಲೂಕಿನಾದ್ಯಂತ ಜುಲೈ ತಿಂಗಳು ಆಗಮಿಸಿದರೂ ಮಳೆಯಾಗದೆ ಮೋಡ ಕವಿದ ವಾತಾವರಣ ಮಾತ್ರ ಇದೆ. ಇದರಿಂದ ಅಥಣಿ ಹಾಗೂ ಕಾಗವಾಡ ತಾಲೂಕಿನ ಪೂರ್ವ ಮತ್ತು ಉತ್ತರ ಭಾಗದ ಗ್ರಾಮಗಳ ರೈತರ ಮೊಗದಲ್ಲಿ ವರುಣರಾಯ ನಿರಾಸೆ ಮೂಡಿಸಿದ್ದಾನೆ.

ಮಳೆಯಿಲ್ಲದೆ ಬರಿದಾದ ಭೂಮಿ

ಬೆಳಗಾವಿ ಜಿಲ್ಲೆಯ ಅಥಣಿ, ಕಾಗವಾಡ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರಿಗಾಗಿ ರೈತರು ಪರದಾಡುವಂತಾಗಿದ್ದು, ಟ್ಯಾಂಕರ್ ಮೂಲಕವೇ ಕುಡಿಯುವ ನೀರು ಪೂರೈಸಲಾಗುತ್ತಿದೆ. ಕೊಂಕಣ ಪ್ರದೇಶದಲ್ಲಿ ಮಳೆಯಾದ ಪರಿಣಾಮ ತಂಪು ವಾತಾವರಣ ಇದ್ದು, ತಂಪು ವಾತಾವರಣ ಬಿಟ್ಟರೆ ಯಾವುದೇ ತರಹದ ಪ್ರಾಕೃತಿಕ ಬದಲಾವಣೆಯಾಗಿಲ್ಲ. ದನಕರುಗಳಿಗೆ ಮೇವಿನ ಕೊರತೆ ಎದುರಾಗಿದೆ. ತೋಟಗಾರಿಕೆ ಬೆಳೆಗಳಾದ ದ್ರಾಕ್ಷಿ, ದಾಳಿಂಬೆ ಹಾಗೂ ಕಬ್ಬಿನ ಬೆಳೆ ನೀರಿಲ್ಲದೆ ಒಣಗಿ ಹೋಗಿವೆ. ರೈತರು ಈ ವರ್ಷವಾದರೂ ರೋಹಿಣಿ, ಮೃಗಶಿರಾ ಹಾಗೂ ಆರಿದ್ರಾ ಮಳೆಯಾಗಿ ಬಿತ್ತನೆ ಮಾಡಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ. ಭೂಮಿ ಹದಗೊಳಿಸಿ ಬಿತ್ತನೆ ಮಾಡುವ ಹಂಬಲ ರೈತರದ್ದಾಗಿತ್ತು. ಆದರೆ, ಮಳೆ ಮಾತ್ರ ರೈತನ ಜೀವನ ಜೊತೆ ಚೆಲ್ಲಾಟ ಆಡಿ ರೈತನ ಮುಖದಲ್ಲಿ ಮಂದಹಾಸ ಮುಡದಂತೆ ಮಾಡಿದೆ.

ಮಹಾರಾಷ್ಟ್ರದಲ್ಲಿ ಮಳೆಯಾದ ಪರಿಣಾಮ ಕೃಷ್ಣಾ ನದಿಗೆ ಈಗ 20,000 ಕ್ಯೂಸೆಕ್​​ಗಿಂತ ಹೆಚ್ಚಿನ ನೀರು ಹರಿದು ಬರುತ್ತಿದೆ. ಆದರೆ, ಈಗ ಹರಿದು ಬರುವ ನೀರನ್ನೆಲ್ಲ ಹಿಪ್ಪರಗಿ ಅಣೆಕಟ್ಟಿನಿಂದ ಹೊರಕ್ಕೆ ಬಿಡಲಾಗುತ್ತಿದೆ. ಈ ನೀರು ಅಥಣಿ, ಕಾಗವಾಡ ಭಾಗದ ರೈತರ ಉಪಯೋಗಕ್ಕೆ ಬಾರದಂತಿದ್ದು, ರೈತ ಯಾವ ಬಿತ್ತನೆ ಕಾರ್ಯಕ್ಕೂ ಮುಂದಾಗುತ್ತಿಲ್ಲ. ಈ ಭಾಗದಲ್ಲಿ ಮಳೆಯಾಗದ ಕಾರಣ ತೊಗರಿ, ಹೆಸರು, ಮೆಕ್ಕೆಜೋಳ ಈ ವರ್ಷ ಇನ್ನೂ ಬಿತ್ತನೆ ಆಗಿಲ್ಲ. ಇದರಿಂದ ಮಳೆಯಾಶ್ರಿತ ಭೂಮಿ ಸಂಪೂರ್ಣ ಬರಡಾಗಿದೆ.

For All Latest Updates

TAGGED:

ABOUT THE AUTHOR

...view details