ಕರ್ನಾಟಕ

karnataka

ಅಂಬೇಡ್ಕರ್​ ಅಂತ್ಯಕ್ರಿಯೆಗೂ ಕಾಂಗ್ರೆಸ್​ ಜಾಗ ಕೊಡಲಿಲ್ಲ: ಕೈ ವಿರುದ್ಧ ಕಟೀಲ್​ ಗುಡುಗು

By

Published : Nov 26, 2019, 3:19 PM IST

ಭಾರದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಂಬೇಡ್ಕರ್ ಅವರ ಕೊಡುಗೆ ಅಪಾರ ಹಾಗೂ ವಿಶ್ವದಲ್ಲಿ ಭಾರತ ಸಂವಿಧಾನ ತನ್ನದೇ ವಿಶಿಷ್ಟ ರೀತಿಯಲ್ಲಿ ಗುರುತಿಸಿಕೊಂಡಿದೆ, ಆದರೆ ಡಾ. ಅಂಬೇಡ್ಕರ್ ಸಾವಿನಲ್ಲೂ ಕಾಂಗ್ರೆಸ್, ಅವರಿಗೆ ಅಪಮಾನ ಮಾಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ ಕುಮಾರ್​ ಕಟೀಲ್​ ಆರೋಪಿಸಿದರು.

atn
ಅಥಣಿಯಲ್ಲಿ ನಳೀನ್ ಕುಮಾರ್ ಕಟೀಲು ಮಾತನಾಡಿದರು.

ಅಥಣಿ:ಅಥಣಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಕಾವು ದಿನೇ ದಿನೇ ಹೆಚ್ಚುತ್ತಿದೆ. ಇಂದೂ ಕೂಡ ಅಥಣಿ ವಿಧಾನಸಭಾ ಕ್ಷೇತ್ರದ ಕೈ ಅಭ್ಯರ್ಥಿ ಪರವಾಗಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಅಥಣಿ ಆಗಮಿಸಿದ್ದಾರೆ. ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರವಾಗಿ ಬಿಜೆಪಿ ಪಕ್ಷದ ಅಧ್ಯಕ್ಷ ನಳೀನ್​ ಕುಮಾರ್ ಕಟೀಲ್ ಪ್ರಚಾರಕ್ಕಾಗಿ ಆಗಮಿಸಿದರು.

ಅಥಣಿಯಲ್ಲಿ ಬಿಜೆಪಿಯಿಂದ ಭರ್ಜರಿ ಪ್ರಚಾರ ಮಾಡಿದರು.

ಅಥಣಿಗೆ ಮೊದಲಬಾರಿ ಆಗಮಿಸಿದ ನಳೀನ್ ಕುಮಾರ್ ಕಟೀಲು ಅವರನ್ನು ಅದ್ಧೂರಿಯಾಗಿ ಮೆರವಣಿಗೆ ಮುಖಾಂತರ ಬಿಜೆಪಿ ಕಾರ್ಯಕರ್ತರು ಬರಮಾಡಿಕೊಂಡರು.

ಸಂವಿಧಾನ ದಿನಾಚರಣೆ ಅಂಗವಾಗಿ ಮೊದಲಿಗೆ ಅಂಬೇಡ್ಕರ್ ಪೋಟೋಗೆ ಪೂಜೆ ಸಲ್ಲಿಸಿದ ಕಟೀಲು, ಡಿಸಿಎಂ ಲಕ್ಷ್ಮಣ್ ಸವದಿ, ಗೋವಿಂದ ಕಾರಜೋಳ, ಭಗವಂತ ಕುಬಾ ಕಟೀಲ್​ಗೆ ಸಾತ್ ನೀಡದ್ದರು.

ಭಾರದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಂಬೇಡ್ಕರ್ ಅವರ ಕೊಡುಗೆ ಅಪಾರ ಹಾಗೂ ವಿಶ್ವದಲ್ಲಿ ಭಾರತ ಸಂವಿಧಾನ ತನ್ನದೇ ವಿಶಿಷ್ಟ ರೀತಿಯಲ್ಲಿ ಗುರುತಿಸಿಕೊಂಡಿದೆ, ಆದರೆ ಡಾ. ಅಂಬೇಡ್ಕರ್ ಸಾವಿನಲ್ಲೂ ಕಾಂಗ್ರೆಸ್, ಅವರಿಗೆ ಅಪಮಾನ ಮಾಡಿದೆ. ಅಂತ್ಯಕ್ರಿಯೆಗೆ ಜಾಗವನ್ನೂ ನೀಡಲಿಲ್ಲ. ಕಾಂಗ್ರೆಸ್ ಡಾ. ಅಂಬೇಡ್ಕರ್ ಅವರ ಹೆಸರು ದುರ್ಬಳಕೆ ಮಾಡಿಕೊಂಡಿದೆ. ಸಂವಿಧಾನ ವಿರೋಧಿ ಕೆಲಸ ಮಾಡಿದೆ ಕಾಂಗ್ರೆಸ್ ಸರ್ಕಾರ ಮಧ್ಯ ರಾತ್ರಿ ತುರ್ತು ಪರಿಸ್ಥಿತಿ ಹೇರುವ ಮುಖಾಂತರ ಸಂವಿಧಾನ ಕಗ್ಗೊಲೆ ಮಾಡಿದೆ ಎಂದು ಕಾಂಗ್ರೆಸ್ ವಿರುದ್ಧ ಟೀಕಿಸಿದರು.

ABOUT THE AUTHOR

...view details