ಕರ್ನಾಟಕ

karnataka

ETV Bharat / state

ಇನ್ನೂ ನನಗೆ ಕಾಂಗ್ರೆಸ್ ಪಕ್ಷದ ಮೇಲೆ ಅಭಿಮಾನ ಇದೆ: ಮಹೇಶ್​ ಕುಮಟಳ್ಳಿ

ಲಕ್ಷ್ಮಣ್​ ಸವದಿ ಅವರು ಮೂರು ಬಾರಿ‌ ಶಾಸಕರಾದವರು, ಹಿರಿಯರು, ಸಚಿವರೂ ಆದವರು. ಈಗ ರಾಜ್ಯದ ಉಪಮುಖ್ಯಮಂತ್ರಿ ಆಗಿದ್ದಾರೆ. ಅವರ ಮಾರ್ಗದರ್ಶನದಲ್ಲಿ ನಾವು ಚುನಾವಣೆ ಎದುರಿಸುತ್ತೇವೆ ಎಂದು ಅಥಣಿ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಹೇಶ್​ ಕುಮಟಳ್ಳಿ ಸ್ಪಷ್ಟನೆ‌ ನೀಡಿದರು. ಅಲ್ಲದೆ, ಇನ್ನೂ ಕೂಡ ಕಾಂಗ್ರೆಸ್​ ಪಕ್ಷದ ಮೇಲೆ ಅಭಿಮಾನ ಇದೆ ಅಂತಾ ಕುಮಟಳ್ಳಿ ಹೇಳಿದ್ದಾರೆ.

By

Published : Nov 17, 2019, 9:49 AM IST

ಇನ್ನು ನನಗೆ ಕಾಂಗ್ರೆಸ್ ಪಕ್ಷದ ಮೇಲೆ ಅಭಿಮಾನವಿದೆ: ಮಹೇಶ ಕುಮಟಳ್ಳಿ

ಅಥಣಿ:ಇನ್ನೂ ಕೂಡಾ ನನಗೆ ಕಾಂಗ್ರೆಸ್ ಪಕ್ಷದ ಮೇಲೆ ಅಭಿಮಾನವಿದೆ ಎಂದು ಅಥಣಿ ಮತ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಹೇಶ್​ ಕುಮಟಳ್ಳಿ ಹೇಳಿದ್ದಾರೆ.

ಇನ್ನೂ ನನಗೆ ಕಾಂಗ್ರೆಸ್ ಪಕ್ಷದ ಮೇಲೆ ಅಭಿಮಾನವಿದೆ: ಮಹೇಶ ಕುಮಟಳ್ಳಿ

ಪಟ್ಟಣದ ತಮ್ಮ ಸ್ವಗೃಹದಲ್ಲಿ ಮಾತನಾಡಿದ ಅವರು, ರಮೇಶ್​ ಜಾರಕಿಹೊಳಿ ಜೊತೆಗೆ ಬಂದಿರುವ ನಾವು 17 ಶಾಸಕರೂ ಬಿಜೆಪಿ ತೆಗೆದುಕೊಳ್ಳುವ ನಿರ್ಣಯಕ್ಕೆ ಬದ್ಧರಾಗಿದ್ದು, ಬಿಜೆಪಿ ಪರ ಕೆಲಸ ಮಾಡುತ್ತೇವೆ ಎಂದರು.

ಇನ್ನು ಲಕ್ಷ್ಮಣ್​ ಸವದಿ ಅವರು ಮೂರು ಬಾರಿ‌ ಶಾಸಕರಾದವರು, ಹಿರಿಯರು, ಸಚಿವರೂ ಆದವರು. ಈಗ ರಾಜ್ಯದ ಉಪಮುಖ್ಯಮಂತ್ರಿ ಆಗಿದ್ದಾರೆ. ಅವರ ಮಾರ್ಗದರ್ಶನದಲ್ಲಿ ನಾವು ಚುನಾವಣೆ ಎದುರಿಸುತ್ತೇವೆ ಎಂದು ಕುಮಟಳ್ಳಿ ಸ್ಪಷ್ಟನೆ‌ ನೀಡಿದ್ರು.

ಕ್ಷೇತ್ರದ ಋಣ ತೀರಿಸಬೇಕಾದರೆ ಕ್ಷೇತ್ರದ ಜನಕ್ಕಾಗಿ ಕೆಲಸ ಮಾಡಬೇಕು. ಅದಕ್ಕಾಗಿಯೇ ಪಕ್ಷ ತೊರೆದು ರಮೇಶ್​ ಜಾರಕಿಹೊಳಿ ಮತ್ತು ನಾವು ಹೊರ ಬಂದಿದ್ದೇವೆ. ನಮಗೆ ಬಿಜೆಪಿ‌ ಮುಖ್ಯವೇ ವಿನಃ ಯಾವ ವ್ಯಕ್ತಿಯೂ ಅಲ್ಲವೆಂದು ಮಹೇಶ್​ ಕುಮಟಳ್ಳಿ ಸ್ಪಷ್ಟಪಡಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details