ಕರ್ನಾಟಕ

karnataka

ಜೀವಬೆದರಿಕೆಗೆ ಹೆದರುವ ವ್ಯಕ್ತಿ ನಾನಲ್ಲ: ಸಚಿವ ಈಶ್ವರಪ್ಪ

ಕೆಲ ದಿನಗಳ ಹಿಂದೆ ಸಚಿವ ಈಶ್ವರಪ್ಪನವರಿಗೆ ಅಪರಿಚಿತ ವ್ಯಕ್ತಿಯೋರ್ವ ಕರೆ ಮಾಡಿ ಬೆದರಿಕೆ ಹಾಕಿದ್ದ. ಅದಕ್ಕೆ ಪ್ರತಿಕ್ರಿಯಿಸಿರುವ ಸಚಿವರು, ಬೆದರಿಕೆ ಕರೆ ಇಟಲಿಯಿಂದ ಬರಲಿ, ಬೇರೆ ಎಲ್ಲಿಂದ ಬಂದರೂ ನಾನು ಯೋಚಿಸುವುದಿಲ್ಲ. ನಾನು ಯಾವುದೇ ಕಾರಣಕ್ಕೂ ಹೆದರುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.

By

Published : Jan 6, 2020, 12:35 PM IST

Published : Jan 6, 2020, 12:35 PM IST

ಸಚಿವ ಈಶ್ವರಪ್ಪ
Minister Eshwarappa

ಬೆಳಗಾವಿ:ಜೀವಬೆದರಿಕೆಗಳಿಗೆ ಹೆದರುವ ವ್ಯಕ್ತಿ ನಾನಲ್ಲ. ಎಂತಹ ಬೆದರಿಕೆ ಬಂದರೂ ನಾನು ಇದೇ ರೀತಿ ಉತ್ತರ ಕೊಡುವೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ಸಚಿವ ಕೆ.ಎಸ್.ಈಶ್ವರಪ್ಪ

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆದರಿಕೆ ಕರೆ ಇಟಲಿಯಿಂದ ಬರಲಿ, ಬೇರೆ ಎಲ್ಲಿಂದ ಬಂದರೂ ನಾನು ಯೋಚಿಸುವುದಿಲ್ಲ. ನಾನು ಯಾವುದೇ ಕಾರಣಕ್ಕೂ ಹೆದರುವ ಪ್ರಶ್ನೆಯೇ ಇಲ್ಲ. ಈ ಸಂಬಂಧ ಈಗಾಗಲೇ ದೂರು ನೀಡಿದ್ದೇನೆ. ಹಿಂದೆಯೂ ಒಂದು ಬಾರಿ ಹೀಗೆ ಜೀವಬೆದರಿಕೆ ಬಂದಿತ್ತು. ಆಗಲೂ ದೂರು ನೀಡಿದ್ದೆ. ಶಿವಮೊಗ್ಗ ಎಸ್​ಪಿಗೆ, ಗೃಹ ಮಂತ್ರಿ ಬೊಮ್ಮಾಯಿಯವರಿಗೆ ತಿಳಿಸಿದ್ದೇನೆ ಎಂದರು.

ನನ್ನ ಧ್ವನಿ ಇಡೀ ದೇಶದ ರಾಷ್ಟ್ರ ಭಕ್ತರ ಧ್ವನಿ. ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಲುವ ವಿಶ್ವಾಸ ಇದೆ. ಕೆಲವು ದೇಶದ್ರೋಹಿ ಚಟುವಟಿಕೆ ಮಾಡುತ್ತಿರುವ ಸಂಘಟನೆಗಳಿಗೆ ಕಾಂಗ್ರೆಸ್ ಬೆಂಬಲ ಕೊಡುತ್ತಿರುವುದು ಬೇಸರ ತರಿಸಿದೆ. ಕಾಂಗ್ರೆಸ್ ದೇಶಕ್ಕೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದರು.

ABOUT THE AUTHOR

...view details