ಕರ್ನಾಟಕ

karnataka

ETV Bharat / state

ಚಿಕ್ಕೋಡಿಯಲ್ಲಿ ಪೌರತ್ವ ಕಾಯ್ದೆಯ ಬಗ್ಗೆ ಜನಜಾಗೃತಿ ಅಭಿಯಾನ..

ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನಲ್ಲಿ ಪೌರತ್ವ ತಿದ್ದುಪಡಿ ಮಸೂದೆ ಬಗ್ಗೆ ಜಾಗೃತಿ ಮೂಡಿಸಲಾಯಿತು. ವಿವಿಧ ಬಡಾವಣೆ, ಮಾರುಕಟ್ಟೆಯಲ್ಲಿ ವಿಧಾನಸಭಾ ಮುಖ್ಯಸಚೇತಕ ಮಾಂತೇಶ ಕವಟಗಿಮಠ ಕರಪತ್ರ ವಿತರಿಸಿದರು.

By

Published : Jan 5, 2020, 10:04 PM IST

Citizenship Bill Campaign in chikkodi
ವಿಧಾನಸಭಾ ಮುಖ್ಯಸಚೇತಕ ಮಾಂತೇಶ ಕವಟಗಿಮಠ

ಚಿಕ್ಕೋಡಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಸೂಚನೆಯಂತೆ ರಾಜ್ಯಾದ್ಯಂತ ಸಿಎಎ (ಪೌರತ್ವ ತಿದ್ದುಪಡಿ ಮಸೂದೆ) ಬಗ್ಗೆ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಕಾಂಗ್ರೆಸ್​ ಸೇರಿ ಕೆಲ ಪಕ್ಷಗಳು ಅಪಪ್ರಚಾರ ಮಾಡುತ್ತಿವೆ ಅಂತಾ ವಿಧಾನಸಭಾ ಮುಖ್ಯಸಚೇತಕ ಮಾಂತೇಶ ಕವಟಗಿಮಠ ಆರೋಪಿಸಿದರು.

ವಿಧಾನಸಭಾ ಮುಖ್ಯಸಚೇತಕ ಮಾಂತೇಶ ಕವಟಗಿಮಠ..

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ‌ ಬಿಜೆಪಿ ಹಾಗೂ ಆರ್​ಎಸ್​ಎಸ್ ವತಿಯಿಂದ ಮನೆ ಮನೆಗೆ ಭೇಟಿ ನೀಡುವ ಮೂಲಕ‌ ಜನಜಾಗೃತಿ ಮೂಡಿಸಲಾಯಿತು. ನೂತನ ಪೌರತ್ವ ಮಸೂದೆ ಜಾರಿಗೊಳಿಸಲಾಗಿದೆ. ಕರಪತ್ರದಲ್ಲಿ ಸಂಪೂರ್ಣ ವಿವರವನ್ನು ಜನರಿಗೆ ನೀಡಲಾಗಿದೆ. ಎಲ್ಲ ಧರ್ಮ, ಜಾತಿಯವರು ಒಂದೇ ತಾಯಿಯ ಮಕ್ಕಳಂತಿದ್ದೇವೆ ಎಂದರು.

For All Latest Updates

TAGGED:

ABOUT THE AUTHOR

...view details