ಚಿಕ್ಕೋಡಿ: ರಮೇಶ್ ಜಾರಕಿಹೊಳಿ ಅಳಿಯ ಅಂಬಿರಾವ ಪಾಟೀಲ್ರ ವಾಹನ ಚಾಲಕ ಪೊಲೀಸರ ಮೇಲೆ ದರ್ಪ ತೋರಿಸಿದ್ದಾರೆ.
ಕಾರು ತಡೆದಿದ್ದಕ್ಕೆ ಪೊಲೀಸರ ಜೊತೆ ವಾಗ್ವಾದ ನಡೆಸಿದ ರಮೇಶ್ ಜಾರಕಿಹೊಳಿ ಅಳಿಯ
ಪೊಲೀಸರ ಜೊತೆ ಅಂಬಿರಾವ ಅವರ ಕಾರು ಚಾಲಕ ದರ್ಪ ಮೆರೆದಿದ್ದು, ಇದಕ್ಕೆ ಅಂಬಿರಾವ ಕೂಡ ಸಾಥ್ ನೀಡಿದ್ದಾರೆ. ಈ ವೇಳೆ ಪೊಲೀಸರ ವಿರುದ್ಧ ಅವರು ವಾಗ್ದಾಳಿ ನಡೆಸಿದ್ದಾರೆ.
ಪೊಲೀಸರ ಜೊತೆ ವಾಗ್ವಾದ ನಡೆಸಿದ ರಮೇಶ್ ಜಾರಕಿಹೊಳಿ ಅಳಿಯ
ಸಂಕೇಶ್ವರ ಪಟ್ಟಣದ ಚನ್ನಮ್ಮ ವೃತ್ತದಲ್ಲಿ ಪೊಲೀಸರ ಜೊತೆ ಅಂಬಿರಾವ ಅವರ ಕಾರು ಚಾಲಕ ದರ್ಪ ಮೆರೆದಿದ್ದು, ಇದಕ್ಕೆ ಅಂಬಿರಾವ ಕೂಡ ಸಾಥ್ ನೀಡಿದ್ದಾರೆ. ಇವರ ವಾಹನವನ್ನು ತಡೆದ ಎಎಸ್ಐ ಹಾಗೂ ಪೊಲೀಸರ ಮೇಲೆ ವಾಗ್ದಾಳಿ ನಡೆಸಿದ್ದಾರೆ.
ನಾನು ಯಾರು ಅನ್ನೋದು ಗೊತ್ತಿಲ್ವಾ? ಎಂದು ಹೇಳಿ ಅಂಬಿರಾವ ಪೊಲೀಸರನ್ನು ಬೆದರಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Last Updated : Dec 31, 2019, 6:38 PM IST