ಚಿಕ್ಕೋಡಿ: ಹಣ್ಣು ಮಾರಾಟ ಮಾಡುತ್ತಿದ್ದ ಮಹಿಳೆ ಮೇಲೆ ಆ್ಯಸಿಡ್ ದಾಳಿ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ಪಟ್ಟಣದ ಝಂಡಾ ಕಟ್ಟೆ ಬಳಿ ನಡೆದಿದೆ.
ರಾಯಬಾಗ: ಹಣ್ಣು ಮಾರುತ್ತಿದ್ದ ಮಹಿಳೆ ಮೇಲೆ ಅಪರಿಚಿತನಿಂದ ಆ್ಯಸಿಡ್ ದಾಳಿ
ಝಂಡಾ ಕಟ್ಟೆ ಬಳಿ ಬಾಳೆಹಣ್ಣು ಮಾರಾಟ ಮಾಡುವ ವೇಳೆ ಅಪರಿಚಿತನೋರ್ವ ಯಾಸ್ಮೀನ್ ಮೇಲೆ ಆ್ಯಸಿಡ್ ಚೆಲ್ಲಿ ಪರಾರಿಯಾಗಿದ್ದಾನೆ. ಪರಿಣಾಮ ಮಹಿಳೆಯ ಹೊಟ್ಟೆ ಹಾಗೂ ಕುತ್ತಿಗೆ ಭಾಗದಲ್ಲಿ ತೀವ್ರ ಗಾಯಗಾಳಾಗಿವೆ.
ಪಟ್ಟಣದ ಯಾಸ್ಮೀನ್ ತಹಶಿಲ್ದಾರ (35) ಆ್ಯಸಿಡ್ ದಾಳಿಗೆ ತುತ್ತಾದ ಮಹಿಳೆ. ಇಲ್ಲಿನ ಝಂಡಾ ಕಟ್ಟೆ ಬಳಿ ಹಣ್ಣು ಮಾರಾಟ ಮಾಡುವ ವೇಳೆ ಅಪರಿಚಿತನೋರ್ವ ಯಾಸ್ಮೀನ್ ಮೇಲೆ ಆ್ಯಸಿಡ್ ಚೆಲ್ಲಿ ಪರಾರಿಯಾಗಿದ್ದಾನೆ. ಪರಿಣಾಮ ಮಹಿಳೆಯ ಹೊಟ್ಟೆ ಹಾಗೂ ಕುತ್ತಿಗೆ ಭಾಗದಲ್ಲಿ ತೀವ್ರ ಗಾಯಗಾಳಾಗಿವೆ.
ಈಕೆಯ ನರಳಾಟ ಕೇಳಿದ ಸ್ಥಳೀಯರು ನೀರು ಸಿಂಪಡಿಸಿ, ಚಿಕಿತ್ಸೆಗಾಗಿ ಆ್ಯಂಬುಲೆನ್ಸ್ನಲ್ಲಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಸಂಬಂಧ ರಾಯಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಶೋಧ ಕಾರ್ಯ ಮುಂದುವರೆದಿದೆ.