ಕರ್ನಾಟಕ

karnataka

By

Published : Nov 20, 2019, 1:15 PM IST

ETV Bharat / state

ಎಸ್​ಡಿಪಿಐ ನಿಷೇಧಿಸಲು ಕೇಂದ್ರಕ್ಕೆ ಶಿಫಾರಸು ಮಾಡುತ್ತೇವೆ: ಸಚಿವ ಆರ್.ಅಶೋಕ್

ಎಸ್​ಡಿಪಿಐ ಸಂಘಟನೆ ಮೇಲೆ ಹಲವು ಆರೋಪಗಳಿದ್ದು, ಈ ಹಿಂದೆ ಸಿದ್ದರಾಮಯ್ಯ ಅವರು ಎಸ್​ಡಿಪಿಐ ಮೇಲಿನ ಕೇಸ್ ವಾಪಸ್ ಪಡೆದಿದ್ದರು. ಈಗ ಅದಕ್ಕೆ ಬೆಲೆ ತೆರಬೇಕಾಗಿದೆ ಎಂದು ಸಚಿವ ಆರ್.ಅಶೋಕ್ ವಾಗ್ದಾಳಿ ನಡೆಸಿದರು.

ಎಸ್​ಡಿಪಿಐ ನಿಷೇಧಿಸಲು ಕೇಂದ್ರಕ್ಕೆ ಶಿಫಾರಸು ಮಾಡುತ್ತೇವೆ: ಸಚಿವ ಆರ್.ಅಶೋಕ್

ಬೆಂಗಳೂರು: ತನ್ವೀರ್ ಸೇಠ್​ ಮೇಲಿನ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಸೌಧದಲ್ಲಿ ಮಾತನಾಡಿದ ಸಚಿವ ಆರ್​ ಅಶೋಕ್​, ತನ್ವೀರ್ ಸೇಠ್ ಅಟ್ಯಾಕ್ ಹಿಂದೆ ಎಸ್​ಡಿಪಿಐ ಸಂಘಟನೆ ಕೈವಾಡದ ಶಂಕೆ ವ್ಯಕ್ತಪಡಿಸಿದರು.

ಎಸ್​ಡಿಪಿಐ ನಿಷೇಧಿಸಲು ಕೇಂದ್ರಕ್ಕೆ ಶಿಫಾರಸು ಮಾಡುತ್ತೇವೆ: ಸಚಿವ ಆರ್.ಅಶೋಕ್

ತನ್ವೀರ್ ಸೇಠ್ ಮೇಲೆ ಹಲ್ಲೆಯಲ್ಲ, ಹತ್ಯೆ ಯತ್ನವೇ ನಡೆದಿದೆ. ಹೀಗಾಗಿ ಎಸ್​ಡಿಪಿಐ ಸಂಘಟನೆ ಬ್ಯಾನ್ ಮಾಡಬೇಕು. ಕೇಂದ್ರ, ರಾಜ್ಯದಲ್ಲಿ ನಮ್ಮ ಸರ್ಕಾರವೇ ಇದೆ. ಕೇಂದ್ರ ಗೃಹ ಸಚಿವರ ಜೊತೆ ಮಾತನಾಡುತ್ತೇವೆ. ಬ್ಯಾನ್ ಮಾಡೋಕೆ ಶಿಫಾರಸು ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.

ಸಿದ್ದರಾಮಯ್ಯ ಕೂಡ ಪಕ್ಷಾಂತರಿ:

ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಪಕ್ಷಾಂತರಿ ಎಂದು ಕಿಡಿಕಾರಿದ ಆರ್.ಅಶೋಕ್, ಅವರು, ಜೆಡಿಎಸ್ ಪಕ್ಷ ಬದಲಾಯಿಸಿ ಬಂದವರು. ಅನರ್ಹರನ್ನ ಟೀಕೆ ಮಾಡುವ ಮುನ್ನ ನಿಮ್ಮದು ನೋಡಿಕೊಳ್ಳಿ ಎಂದು ವಾಗ್ದಾಳಿ ನಡೆಸಿದರು.

ABOUT THE AUTHOR

...view details