ಕರ್ನಾಟಕ

karnataka

By

Published : Jun 29, 2019, 7:39 PM IST

ETV Bharat / state

ಆಡಳಿತಯಂತ್ರಕ್ಕೆ ಚುರುಕು ಮುಟ್ಟಿಸಿದ ಸರ್ಕಾರ.. ಐಎಎಸ್, ಐಪಿಎಸ್ ಅಧಿಕಾರಿಗಳ ವರ್ಗಾವಣೆ

ಐಎಎಸ್‌ನ 14, ಐಪಿಎಸ್‌ 11, ಐಎಫ್‌ಎಸ್ 5 ಹಾಗೂ ಕೆಎಎಸ್‌ನ 21 ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.

ವಿಧಾನಸೌಧ

ಬೆಂಗಳೂರು : ಭಾರಿ ವರ್ಗಾವಣೆ ಮಾಡುವ ಮೂಲಕ ಮೈತ್ರಿ ಸರ್ಕಾರ ಆಡಳಿತಯಂತ್ರವನ್ನು ಮತ್ತಷ್ಟು ಚುರುಕುಗೊಳಿಸಿದೆ. ಐಪಿಎಸ್, ಐಎಎಸ್, ಐಎಫ್‌ಎಸ್ ಹಾಗೂ ಕೆಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಇಂದು ಸರ್ಕಾರ ಆದೇಶ ಹೊರಡಿಸಿದೆ. ಐಎಎಸ್‌ನ 14, ಐಪಿಎಸ್11, ಐಎಫ್‌ಎಸ್ 5 ಹಾಗೂ ಕೆಎಎಸ್‌ನ 21 ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.

ಐಎಎಸ್ ಅಧಿಕಾರಿಗಳು :

  • ಪರಮೇಶ್ ಪಾಂಡೆ - ಹೆಚ್ಚುವರಿ ಮುಖ್ಯಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ
  • ವಿ. ಮಂಜುಳಾ - ಹೆಚ್ಚುವರಿ ಮುಖ್ಯಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ
  • ಸಂದೀಪ್ ದಾವೆ - ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಇಲಾಖೆ
  • ರಾಜ್ ಕುಮಾರ್ ಕತ್ರಿ - ಹೆಚ್ಚುವರಿ ಮುಖ್ಯಕಾರ್ಯದರ್ಶಿ, ಕಂದಾಯ ಇಲಾಖೆ
  • ಹರ್ಷಗುಪ್ತ - ಕಾರ್ಯದರ್ಶಿ, ವಸತಿ ಇಲಾಖೆ
  • ಪಿ.ಮಣಿವಣ್ಣನ್ - ಕಾರ್ಯದರ್ಶಿ, ಕಾರ್ಮಿಕ ಇಲಾಖೆ
  • ಪಿ. ಹೇಮಲತಾ - ಕಾರ್ಯದರ್ಶಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ
  • ಏಕ್ ರೂಪ್ ಕೌರ್ - ಕಾರ್ಯದರ್ಶಿ, ಆರ್ಥಿಕ ಇಲಾಖೆ (ಸಂಪನ್ಮೂಲ ಮತ್ತು ಅಯವ್ಯಯ)
  • ಜೆ. ರವಿಶಂಕರ್ - ಎಂ.ಡಿ., ಕೃಷ್ಣಭಾಗ್ಯ ಜಲ ನಿಗಮ
  • ಪಿ.ಸಿ. ಜಾಫರ್ - ಕಾರ್ಯದರ್ಶಿ, ಆರ್ಥಿಕ ಇಲಾಖೆ (ವೆಚ್ಚ)
  • ಕೆ.ಫಹೀಮ್- ಎಂ.ಡಿ., ಆಹಾರ ಮತ್ತು ನಾಗರಿಕ ಪೂರೈಕೆ ನಿಗಮ
  • ಎಸ್. ಜೀಯಾವುಲ್ಲಾ- ನಿರ್ದೇಶಕ, ಅತಿ ಸಣ್ಣ, ಸಣ್ಣ, ಮಧ್ಯಮ ಕೈಗಾರಿಕೆ
  • ಆರ್. ವಿನೋಥ್ ಪ್ರಿಯ- ಆಯುಕ್ತರು, ಕಾರ್ಮಿಕ ಇಲಾಖೆ
  • ಆರ್. ಗಿರೀಶ್ - ಜಿಲ್ಲಾಧಿಕಾರಿ, ಚಿತ್ರದುರ್ಗ ಜಿಲ್ಲೆ

ಐಪಿಎಸ್ ಅಧಿಕಾರಿಗಳು :

  • ಸೀಮಂತ್ ಕುಮಾರ್ ಸಿಂಗ್ - ಐಜಿಪಿ, ಆಡಳಿತ ವಿಭಾಗ ಪ್ರಧಾನ ಕಚೇರಿ ಬೆಂಗಳೂರು
  • ಎಸ್.ಮುರುಗನ್ - ಹೆಚ್ಚವರಿ ಪೊಲೀಸ್ ಆಯುಕ್ತ, ಬೆಂಗಳೂರು ಪೂರ್ವ ವಿಭಾಗ
  • ಎಸ್.ಎನ್.ಸಿದ್ದರಾಮಪ್ಪ - ಡಿಐಜಿ, ಅಗ್ನಿಶಾಮಕ ವಿಭಾಗ
  • ಎಂ.ಎನ್.ಅನುಚೇತ್ - ಡಿಸಿಪಿ, ವೈಟ್ ಫೀಲ್ಡ್ ವಿಭಾಗ
  • ಅಭಿನವ್ ಖರೆ - ಕಮಾಂಡೆಂಟ್ ಕೆಎಸ್ ಆರ್ ಪಿ 4 ನೇ ಬೆಟಾಲಿಯನ್ ಬೆಂಗಳೂರು
  • ಡಿ. ಕಿಶೋರ್ ಬಾಬು - ಡಿಸಿಪಿ, ಕಲಬುರಗಿ
  • ಲೋಕೇಶ್ - ಬಾಗಲಕೋಟೆ ಎಸ್ಪಿ
  • ಅಬ್ದುಲ್ ಅಹಾದ್ - ಎಸ್ಪಿ ಎಸಿಬಿ ಬೆಂಗಳೂರು
  • ಡಾ. ಸಂಜೀವ್ ಪಾಟೀಲ್ - ಎಸ್ಪಿ ರೈಲ್ವೆ ವಿಭಾಗ ಬೆಂಗಳೂರು
  • ಕೆ.ಜಿ.ದೇವರಾಜು - ಎಸ್ಪಿ ಹಾವೇರಿ ಜಿಲ್ಲೆ
  • ಕೆ. ಪರುಷುರಾಮ್ - ಎಸ್ಪಿ, ನಾಗರಿಕ ಜಾರಿ ನಿರ್ದೇಶನಾಲಯ ಬೆಂಗಳೂರು

ಐಎಫ್​ಎಸ್ ಅಧಿಕಾರಿಗಳು :

  • ವಿಜಯಕುಮಾರ್- ಎಂ.ಡಿ ಕರ್ನಾಟಕ ಸೋಪ್ ಅಂಡ್ ಡಿಟರ್ಜಂಟ್ ಲಿ
  • ಅಜಿತ್ ಕುಲಕರ್ಣಿ- ಉಪ ಅರಣ್ಯ ಸಂರಕ್ಷಣಾಧಿಕಾರಿ, ದಾವಣಗೆರೆ ವಿಭಾಗ
  • ಕಮಲಾ ಕೆ.- ಉಪ ಅರಣ್ಯ ಸಂರಕ್ಷಣಾಧಿಕಾರಿ, ಕುಂದಾಪುರ ವಿಭಾಗ
  • ಎಸ್. ಪ್ರಭಾಕರನ್- ಉಪ ಅರಣ್ಯ ಸಂರಕ್ಷಣಾಧಿಕಾರಿ, ಮಡಿಕೇರಿ ವಿಭಾಗ
  • ಕೆ. ಚಂದ್ರಶೇಖರ್ ನಾಯಕ- ಉಪ ಅರಣ್ಯ ಸಂರಕ್ಷಣಾಧಿಕಾರಿ, ಚಿತ್ರದುರ್ಗ ವಿಭಾಗ

For All Latest Updates

TAGGED:

ABOUT THE AUTHOR

...view details