ಕರ್ನಾಟಕ

karnataka

ETV Bharat / state

ಪಾಸ್ ಇದೆ ಅಂತ ರಸ್ತೆಯಲ್ಲಿ ಸುತ್ತುತ್ತಿದ್ದೀರಾ? ದಂಡ ಕಟ್ಟೋಕೆ ರೆಡಿಯಾಗಿರಿ

ಪಾಸ್ ಇದೆ ಅಂತ ರಸ್ತೆಯಲ್ಲಿ ಬೇಕಾಬಿಟ್ಟಿ ಸುತ್ತಿದ್ರೆ ದಂಡ ವಿಧಿಲಾಸಲಾಗುವುದು ಎಂದು ಪೊಲೀಸ್​ ಮಹಾ ನಿರ್ದೇಶಕ ಪ್ರವೀಣ್ ಸೂದ್​​ ಟ್ವೀಟ್ ಮಾಡಿದ್ದಾರೆ.

By

Published : Apr 19, 2020, 1:50 PM IST

dsd
ಪೊಲೀಸ್​ ಮಹಾ ನಿರ್ದೇಶಕ ಪ್ರವೀಣ್ ಸೂದ್​​

ಬೆಂಗಳೂರು: ಲಾಕೌಡೌನ್ ಹಿನ್ನೆಲೆ ಅಗತ್ಯ ಸೇವೆ ಹೆಸರಲ್ಲಿ ಓಡಾಡುವವರಿಗೆ ಪೊಲೀಸ್​ ‌ಇಲಾಖೆಯಿಂದ ಪಾಸ್ ವ್ಯವಸ್ಥೆ ಮಾಡಲಾಗಿತ್ತು. ಆದರೆ ಇನ್ಮುಂದೆ ಬೇಕಾಬಿಟ್ಟಿ ಸುತ್ತಿದರೆ ದಂಡ ಕಟ್ಟೋಕೆ ರೆಡಿಯಾಗಿರಿ ಎಂದು ಕರ್ನಾಟಕ ಪೊಲೀಸ್‌ ಮಹಾನಿರ್ದೇಶಕ ಪ್ರವೀಣ್ ಸೂದ್ ಎಚ್ಚರಿಕೆ ನೀಡಿದ್ದಾರೆ.

ಪೊಲೀಸ್​ ಮಹಾ ನಿರ್ದೇಶಕ ಪ್ರವೀಣ್ ಸೂದ್​​

ಈ ಬಗ್ಗೆ ಟ್ವೀಟ್​ ಮಾಡಿರುವ ಸೂದ್​, ಇನ್ನು ಮುಂದೆ ಯಾವುದಕ್ಕೂ ಪಾಸ್ ಕೊಡುವುದಿಲ್ಲ. ಈಗಾಗಲೇ ನೀಡಿರುವ ಪಾಸ್ ಮೇ 3 ವರೆಗೆ ಚಾಲ್ತಿಯಲ್ಲಿರುತ್ತದೆ. ಅಗತ್ಯ ಸೇವೆಗಳಿಗೆ ಓಡಾಟ ಮಾಡುವವರೆಗೆ ಪೊಲೀಸ್ ಇಲಾಖೆಯ ಡಿಸಿಪಿ ಅಥವಾ ಇನ್ಸ್​ಪೆಕ್ಟರ್​ ಮಟ್ಟದಲ್ಲಿ ಪಾಸ್ ತೆಗೆದುಕೊಳ್ಳುವಂತೆ ಸೂಚನೆ ನೀಡಲಾಗಿತ್ತು.

ಸಧ್ಯ ಸಿಲಿಕಾನ್ ಸಿಟಿಯಲ್ಲಿ ಒಂದುವರೆ ಲಕ್ಷ ಮಂದಿ ಪಾಸ್ ಪಡೆದು ಬೇಕಾಬಿಟ್ಟಿ ಓಡಾಡುತ್ತಿದ್ದರು ಎನ್ನಲಾಗಿದೆ. ಸದ್ಯ ಇದಕ್ಕೆಲ್ಲ ಕಡಿವಾಣ ಹಾಕಲು ಡಿ.ಜಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ.

ABOUT THE AUTHOR

...view details