ಕರ್ನಾಟಕ

karnataka

ETV Bharat / state

ಫೇಸ್​​ಬುಕ್ ಮೂಲಕ ಹಿರಿಯ ನಾಗರಿಕರ ಸಮಸ್ಯೆ ಆಲಿಸಲಿದ್ದಾರೆ ಭಾಸ್ಕರ್​​ ರಾವ್​​​

ದಕ್ಷಿಣ ವಿಭಾಗದ ಡಿಸಿಪಿ ‌ರೋಹಿಣಿ‌ ಕಟೋಚ್, 'ನಮ್ಮ ಹಿರಿಯರು' ಎಂಬ ಟೈಟಲ್ ಸಿದ್ಧಪಡಿಸಿದ್ದು, ಹಿರಿಯ ಜೀವಿಗಳ ಸಂಕಷ್ಟವನ್ನು ಇಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಫೇಸ್​​ಬುಕ್​ ಲೈವ್​ ಮೂಲಕ ಆಲಿಸಲಿದ್ದಾರೆ.

By

Published : May 28, 2020, 1:48 PM IST

Bhaskar Rao
ಪೊಲೀಸ್​ ಆಯುಕ್ತ ಭಾಸ್ಕರ್​ ರಾವ್​

ಬೆಂಗಳೂರು:ನಗರದ ಹಿರಿಯ ಜೀವಿಗಳ ಆರೋಗ್ಯ, ಆರೈಕೆ ಮತ್ತು ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಇಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ 3:30ಕ್ಕೆ ಫೇಸ್​​ಬುಕ್ ಲೈವ್​ನಲ್ಲಿ ಸಮಸ್ಯೆ ಆಲಿಸಲಿದ್ದಾರೆ.

ದಕ್ಷಿಣಾ ವಿಭಾಗದ ಡಿಸಿಪಿ ‌ರೋಹಿಣಿ‌ ಕಟೋಚ್ ಇದಕ್ಕಾಗಿ ನಮ್ಮ ಹಿರಿಯರು ಎಂಬ ಟೈಟಲ್ ರೆಡಿ ಮಾಡಿದ್ದು, ಹಿರಿಯ ಜೀವಿಗಳ ಸಂಕಷ್ಟವನ್ನು ಇಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಫೇಸ್​ಬುಕ್​ ಲೈವ್​ನಲ್ಲಿ ಆಲಿಸಲಿದ್ದಾರೆ.

ಹಿರಿಯರು ತಮಗೆ ಆಗುವ ಸಮಸ್ಯೆಗಳ ಕುರಿತು ಇಲ್ಲಿ‌ ಮಾತಾನಾಡಬಹುದು.‌ ಫೇಸ್​ಬುಕ್ ಮುಖಾಂತರ ಸಮಸ್ಯೆಗಳನ್ನು ಆಲಿಸಿ ಧೈರ್ಯ ತುಂಬಲಿದ್ದಾರೆ. ಲೈವ್​ನಲ್ಲಿ ಜಂಟಿ ಪೊಲಿಸ್ ಆಯುಕ್ತ ಸೌಮೇಂದ್ರ ಮುಖರ್ಜಿ, ಡಿಸಿಪಿ ರೋಹಿಣಿ ಕಟೋಚ್ ಕೂಡ ಭಾಗಿಯಾಗಲಿದ್ದಾರೆ‌.

ABOUT THE AUTHOR

...view details