ಬೆಂಗಳೂರು:ನಗರದ ಹಿರಿಯ ಜೀವಿಗಳ ಆರೋಗ್ಯ, ಆರೈಕೆ ಮತ್ತು ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಇಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ 3:30ಕ್ಕೆ ಫೇಸ್ಬುಕ್ ಲೈವ್ನಲ್ಲಿ ಸಮಸ್ಯೆ ಆಲಿಸಲಿದ್ದಾರೆ.
ಫೇಸ್ಬುಕ್ ಮೂಲಕ ಹಿರಿಯ ನಾಗರಿಕರ ಸಮಸ್ಯೆ ಆಲಿಸಲಿದ್ದಾರೆ ಭಾಸ್ಕರ್ ರಾವ್
ದಕ್ಷಿಣ ವಿಭಾಗದ ಡಿಸಿಪಿ ರೋಹಿಣಿ ಕಟೋಚ್, 'ನಮ್ಮ ಹಿರಿಯರು' ಎಂಬ ಟೈಟಲ್ ಸಿದ್ಧಪಡಿಸಿದ್ದು, ಹಿರಿಯ ಜೀವಿಗಳ ಸಂಕಷ್ಟವನ್ನು ಇಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಫೇಸ್ಬುಕ್ ಲೈವ್ ಮೂಲಕ ಆಲಿಸಲಿದ್ದಾರೆ.
ಪೊಲೀಸ್ ಆಯುಕ್ತ ಭಾಸ್ಕರ್ ರಾವ್
ದಕ್ಷಿಣಾ ವಿಭಾಗದ ಡಿಸಿಪಿ ರೋಹಿಣಿ ಕಟೋಚ್ ಇದಕ್ಕಾಗಿ ನಮ್ಮ ಹಿರಿಯರು ಎಂಬ ಟೈಟಲ್ ರೆಡಿ ಮಾಡಿದ್ದು, ಹಿರಿಯ ಜೀವಿಗಳ ಸಂಕಷ್ಟವನ್ನು ಇಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಫೇಸ್ಬುಕ್ ಲೈವ್ನಲ್ಲಿ ಆಲಿಸಲಿದ್ದಾರೆ.
ಹಿರಿಯರು ತಮಗೆ ಆಗುವ ಸಮಸ್ಯೆಗಳ ಕುರಿತು ಇಲ್ಲಿ ಮಾತಾನಾಡಬಹುದು. ಫೇಸ್ಬುಕ್ ಮುಖಾಂತರ ಸಮಸ್ಯೆಗಳನ್ನು ಆಲಿಸಿ ಧೈರ್ಯ ತುಂಬಲಿದ್ದಾರೆ. ಲೈವ್ನಲ್ಲಿ ಜಂಟಿ ಪೊಲಿಸ್ ಆಯುಕ್ತ ಸೌಮೇಂದ್ರ ಮುಖರ್ಜಿ, ಡಿಸಿಪಿ ರೋಹಿಣಿ ಕಟೋಚ್ ಕೂಡ ಭಾಗಿಯಾಗಲಿದ್ದಾರೆ.