ಕರ್ನಾಟಕ

karnataka

By

Published : Apr 9, 2021, 9:43 PM IST

ETV Bharat / state

ಬಿಎಂಟಿಸಿಯ 120 ನೌಕರರ ಅಮಾನತು: ಕೆಎಸ್​​ಆರ್​​ಟಿಸಿ 244 ಚಾಲಕರು, ಸಿಬ್ಬಂದಿ ವರ್ಗಾವಣೆ

ಕರ್ತವ್ಯಕ್ಕೆ ಹಾಜರಾದ ಕೆಲ ಸಾರಿಗೆ ಸಿಬ್ಬಂದಿಯ ಭಾವಚಿತ್ರಗಳಿಗೆ ಶ್ರದ್ಧಾಂಜಲಿ ಸಲ್ಲಿಸುವ ರೀತಿಯ ಪೋಸ್ಟ್​​ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಿರುವವರ ಮೇಲೆ ಪ್ರಕರಣ ದಾಖಲಿಸಿ ಕಾನೂನುರೀತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಇಲಾಖೆ ಎಚ್ಚರಿಸಿದ್ದಾರೆ.

suspension-of-120-employees-of-bmtc
ಬಿಎಂಟಿಸಿಯ 120 ನೌಕರರ ಅಮಾನತು

ಬೆಂಗಳೂರು:ಸಾರಿಗೆ ನೌಕರರ ಮುಷ್ಕರದಲ್ಲಿ ಭಾಗಿಯಾದ 60 ತರಬೇತಿ ನಿರತ ನೌಕರರು ಹಾಗೂ ಪ್ರೊಬೇಷನರಿ ಅವಧಿಯ 60 ನೌಕರರು ಸೇರಿ ಒಟ್ಟು 120 ನೌಕರರನ್ನು ವಜಾ ಮಾಡಲಾಗಿದೆ.

ಪ್ರಕಟಣೆ

ಇನ್ನೊಂದೆಡೆ ಕ.ರಾ.ರ.ಸಾ ನಿಗಮವು ಮುಷ್ಕರದಲ್ಲಿ ಪಾಲ್ಗೊಳ್ಳಲು ಇತರ ನೌಕರರನ್ನು ಪ್ರಚೋದಿಸಿ, ಕರ್ತವ್ಯಕ್ಕೆ ಹಾಜರಾಗದಂತೆ ಸಿಬ್ಬಂದಿಗೆ ಬೆದರಿಕೆ ಒಡ್ಡಿ, ಸಾರ್ವಜನಿಕ ಪ್ರಯಾಣಿಕರಿಗೆ ತೊಂದರೆ ಉಂಟುಮಾಡಿರುವ ಸಂಸ್ಥೆಯ 244 ಚಾಲಕರು ಮತ್ತು ನಿರ್ವಾಹಕರು, 5 ಜನ ಸಂಚಾರ ಮೇಲ್ವಿಚಾರಕ ಸಿಬ್ಬಂದಿ, 34 ತಾಂತ್ರಿಕ ಸಿಬ್ಬಂದಿ ಹಾಗೂ 9 ಮಂದಿ ಇತರ ಸಿಬ್ಬಂದಿಯನ್ನು ಕರ್ತವ್ಯ ನಿರ್ವಹಿಸುತ್ತಿದ್ದ ವಿಭಾಗಗಳಿಂದ ಬೇರೆ ವಿಭಾಗಗಳಿಗೆ ವರ್ಗಾಯಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಕೆಎಸ್​ಆರ್​ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ ತಿಳಿಸಿದ್ದಾರೆ.

ಪ್ರಕಟಣೆ

ಅಲ್ಲದೇ ಕರ್ತವ್ಯಕ್ಕೆ ಹಾಜರಾದ ಕೆಲ ಸಿಬ್ಬಂದಿಯ ಭಾವಚಿತ್ರಗಳಿಗೆ ಶ್ರದ್ಧಾಂಜಲಿ ಸಲ್ಲಿಸುವ ರೀತಿಯ ಪೋಸ್ಟ್​​ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಿರುವವರ ಮೇಲೆ ಪ್ರಕರಣ ದಾಖಲಿಸಿ ಕಾನೂನುರೀತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ನಿರ್ದೇಶಕರು ಎಚ್ಚರಿಸಿದ್ದಾರೆ.

ABOUT THE AUTHOR

...view details