ಕರ್ನಾಟಕ

karnataka

ಸಹೋದರರಿಬ್ಬರ ಅನುಮಾನಸ್ಪಾದ ಸಾವು: ಗಾಂಜಾ ವ್ಯಸನಿಗಳಿಂದ ಕೊಲೆ ಶಂಕೆ

ಹಲಸೂರು ಬಳಿಯ ಗಾಂಜಾ ಸೇವನೆ ಮಾಡುವ ಪುಡಾರಿಗಳು ಮೃತರಿಗೆ ಟಾರ್ಚರ್​ ನೀಡುತ್ತಿದ್ದರು, ಈ ಹಿನ್ನೆಲೆ ನಿನ್ನೆ ಇಬ್ಬರ ಮೇಲೆ ಹಲ್ಲೆ ನಡೆಸಿ ವಿಷ ಕುಡಿಸಿ ಕೊಲೆ ಮಾಡಿದ್ದಾರೆ ಎಂದು ಮೃತರ ಕುಟುಂಬಸ್ಥರು ಆರೋಪಿಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಇಂದಿರಾನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

By

Published : Sep 28, 2019, 9:03 PM IST

Published : Sep 28, 2019, 9:03 PM IST

ಅನುಮಾನಸ್ಪಾದ ಸಾವು

ಬೆಂಗಳೂರು : ನಗರದಲ್ಲಿ ಸಹೋದರರಿಬ್ಬರು ಅನುಮಾನಸ್ಪಾದವಾಗಿ ಸಾವನ್ನಪ್ಪಿರುವ ಘಟನೆ ಇಂದಿರಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಇಂದಿರಾ ನಗರದ ಲಕ್ಷ್ಮೀಪುರ ನಿವಾಸಿ ಮುರುಗೇಶ್​ ಮತ್ತು ಸಹೋದರ ರಾಜೇಶ್​​ ಮೃತರು. ಇಬ್ಬರೂ ಗ್ಯಾಸ್ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದರು. ಲಕ್ಷ್ಮೀಪುರ ಸ್ಮಶಾನ ಬಳಿ ಇಬ್ಬರ ಶವಗಳು ಪತ್ತೆಯಾಗಿದ್ದು ಕೊಲೆ ಶಂಕೆ ವ್ಯಕ್ತವಾಗಿದೆ.

ಇನ್ನೂ ಹಲಸೂರು ಬಳಿಯ ಗಾಂಜಾ ಸೇವನೆ ಮಾಡುವ ಪುಡಾರಿಗಳು ಮೃತರಿಗೆ ಟಾರ್ಚರ್​ ನೀಡುತ್ತಿದ್ದರು, ಈ ಹಿನ್ನೆಲೆ ನಿನ್ನೆ ಇಬ್ಬರ ಮೇಲೆ ಹಲ್ಲೆ ನಡೆಸಿ ವಿಷ ಕುಡಿಸಿ ಕೊಲೆ ಮಾಡಿದ್ದಾರೆ ಎಂದು ಮೃತರ ಕುಟುಂಬಸ್ಥರು ಆರೋಪಿಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಇಂದಿರಾನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಬೌರಿಂಗ್​ ಮೃತದೇಹ ರವಾನಿಸಲಾಗಿದೆ.

ABOUT THE AUTHOR

...view details