ಬೆಂಗಳೂರು: ಸಿಬ್ಬಂದಿಗೆ ಕೊರೊನಾ ವೈರಸ್ ಕಾಣಿಸಿಕೊಂಡಿದ್ದರ ಹಿನ್ನೆಲೆಯಲ್ಲಿಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿ ಆವರಣದಲ್ಲಿ ಒಂದೂವರೆ ಗಂಟೆ ಕಾಲ ವೈರಾಣು ನಿರೋಧಕ ದ್ರಾವಣ ಸಿಂಪಡಣೆ ಮಾಡಲಾಯಿತು.
ಸಿಎಂ ನಿವಾಸಕ್ಕೆ ವೈರಾಣು ನಿರೋಧಕ ದ್ರಾವಣ ಸಿಂಪಡಣೆ
ಸಿಎಂ ಗೃಹ ಕಚೇರಿ ಕೃಷ್ಣಾ ಹಾಗೂ ಕಾವೇರಿಯಲ್ಲಿ ಕೆಲ ಸಿಬ್ಬಂದಿಯಲ್ಲಿ ಕೊರೊನಾ ಪತ್ತೆಯಾಗಿತ್ತು. ಈ ಹಿನ್ನೆಲೆ ಇತ್ತೀಚೆಗೆ ಸಂಪೂರ್ಣ ಸ್ಯಾನಿಟೈಸ್ ಮಾಡಲಾಗಿತ್ತು..
ವೈರಾಣು ನಿರೋಧಕ ದ್ರಾವಣ ಸಿಂಪಡಣೆ
ಬೆಳಗ್ಗೆಯೇ ಬಿಬಿಎಂಪಿ ನಿಯೋಜಿಸಿದ್ದ ವೈರಲ್ ಎಂಬ ಸಂಸ್ಥೆಯ ತಂಡ, ಸಿಎಂ ನಿವಾಸಕ್ಕೆ ಆಗಮಿಸಿ ನಿವಾಸದ ಆವರಣ, ನಿವಾಸದ ಮುಂದಿರುವ ಬ್ಯಾರಿಕೇಡ್ಗಳು, ಸಿಬ್ಬಂದಿ ವಿಶ್ರಾಂತಿ ಸ್ಥಳ, ಪೊಲೀಸ್ ಚೌಕಿ ಹಾಗೂ ವಾಹನಗಳಿಗೂ ರಾಸಾಯನಿಕ ದ್ರಾವಣ ಸಿಂಪಡಿಸಿತು.
ಸಿಎಂ ಗೃಹ ಕಚೇರಿ ಕೃಷ್ಣಾ ಹಾಗೂ ಕಾವೇರಿಯಲ್ಲಿ ಕೆಲ ಸಿಬ್ಬಂದಿಯಲ್ಲಿ ಕೊರೊನಾ ಪತ್ತೆಯಾಗಿತ್ತು. ಈ ಹಿನ್ನೆಲೆ ಇತ್ತೀಚೆಗೆ ಸಂಪೂರ್ಣ ಸ್ಯಾನಿಟೈಸ್ ಮಾಡಲಾಗಿತ್ತು. ಆದರೂ ಮುಂಜಾಗ್ರತಾ ಕ್ರಮವಾಗಿ ಇಂದು ಮತ್ತೊಮ್ಮೆ ಸ್ಯಾನಿಟೈಸ್ ಮಾಡಲಾಯಿತು.