ಕರ್ನಾಟಕ

karnataka

ETV Bharat / state

ಪೂಜೆಯ ನೆಪದಲ್ಲಿ ತಾಳಿಯನ್ನೇ ಕದ್ದೊಯ್ಧ ಕಳ್ಳಿ.. ಸಿಸಿಟಿವಿಯಲ್ಲಿ ದೃಶ್ಯ ಸೆರೆ..

ಗಂಡನಿಗೆ ಕಂಟಕವಿದೆ ಎಂದು ಮಹಿಳೆಯನ್ನು ನಂಬಿಸಿ, 80 ಗ್ರಾಂ ಚಿನ್ನದ ಸರವನ್ನ ಕಳ್ಳಿ ಕದ್ದೊಯ್ದಿದ್ದಾಳೆ. ರಾಜಗೋಪಾಲನಗರ ಠಾಣೆಯಲ್ಲಿಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಸಿಸಿಟಿವಿ ದೃಶ್ಯ ಆಧರಿಸಿ ತನಿಖೆ ನಡೆಯುತ್ತಿದೆ.

By

Published : Aug 11, 2019, 1:52 PM IST

thief

ಬೆಂಗಳೂರು: ಪೂಜೆ ನೆಪದಲ್ಲಿ ತಾಳಿಯನ್ನೇ ಕದ್ದೊಯ್ಧ ಘಟನೆ ರಾಜಗೋಪಾಲ ನಗರದ ಕೆಂಪೇಗೌಡ ಲೇಔಟ್ ಬಳಿ ನಡೆದಿದೆ. ಶಾಂತಮ್ಮ ಎಂಬುವರು ಸರ ಕಳೆದುಕೊಂಡ ಮಹಿಳೆ.

ಶಾಂತಮ್ಮ ಒಬ್ಬಳೆ ಮನೆಯಲ್ಲಿರುವಾಗ ಭಿಕ್ಷುಕಿ ಮನೆಗೆ ಬಂದು ಗಂಡನಿಗೆ ಕಂಟಕವಿದೆ ಎಂದು ಶಾಂತಮ್ಮನಿಗೆ ನಂಬಿಸಿ ತಾಳಿ ಪೂಜೆ ಮಾಡು ಸರಿಯಾಗುತ್ತೆ ಎಂದಿದ್ದಾಳೆ.ಈ ವೇಳೆ ಭಿಕ್ಷುಕಿಯ ಮಾತು ಕೇಳಿ 80 ಗ್ರಾಂ ಚಿನ್ನದ ಸರವನ್ನ ಭಿಕ್ಷುಕಿಗೆ ನೀಡಿ ಪೂಜೆ ಮಾಡುವಂತೆ ಸೂಚಿಸಿ, ಮನೆಯೊಳಗೆ ಹೋಗಿ ಚಿಲ್ಲರೆ ತರುವಷ್ಟರಲ್ಲಿ ಗಮನ ಬೇರೆಡೆ ಸೆಳೆದು ಬಾಕ್ಸಿನಲ್ಲಿ ಕಲ್ಲು ಹಾಕಿ ಬಟ್ಟೆಯಿಂದ ಕಟ್ಟಿ ಎರಡು ತಾಸು ಬಿಟ್ಟು ಬಾಕ್ಸ್ ತೆರೆಯುವಂತೆ ಹೇಳಿ ಕಾಲ್ಕಿತ್ತಿದ್ದಾಳೆ.

ಸಿಸಿಟಿವಿ ದೃಶ್ಯದಲ್ಲಿ ತಾಳಿ ಕದ್ದ ಕಳ್ಳಿ..

ಬಾಕ್ಸ್ ತೆರೆದು ನೋಡಿದಾಗ ವಂಚನೆ ಬಯಲಾಗಿದ್ದು, ಸದ್ಯ ರಾಜಗೋಪಾಲನಗರ ಠಾಣೆಯಲ್ಲಿ ಮೋಸಹೋದ ಶಾಂತಮ್ಮ ದೂರು ನೀಡಿದ್ದಾರೆ. ಪೊಲೀಸರು ಸಿಸಿಟಿವಿ ದೃಶ್ಯ ಆಧರಿಸಿ ತನಿಖೆ ಮುಂದುವರೆಸಿದ್ದಾರೆ.

ABOUT THE AUTHOR

...view details