ಕರ್ನಾಟಕ

karnataka

ETV Bharat / state

ಈಶ್ವರಪ್ಪ ಕೈ‌ ತಪ್ಪಿದ‌ ಡಿಸಿಎಂ... ಬಿಜೆಪಿ ಹೈಕಮಾಂಡ್​ಗೆ ರಾಯಣ್ಣ ಬ್ರಿಗೇಡ್ ಎಚ್ಚರಿಕೆ

ಕೆ.ಎಸ್.ಈಶ್ವರಪ್ಪಗೆ ಡಿಸಿಎಂ ಹುದ್ದೆ ನೀಡದಿದ್ದರೆ ತಕ್ಕ ಪಾಠ ಕಲಿಸಲಿದ್ದೇವೆ ಎಂದು ಬಿಜೆಪಿ ಹೈಕಮಾಂಡ್​ಗೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಎಚ್ಚರಿಕೆ ನೀಡಿದೆ.

By

Published : Aug 27, 2019, 2:32 AM IST

ಬಿಜೆಪಿ ಹೈಕಮಾಂಡ್​ಗೆ ರಾಯಣ್ಣ ಬ್ರಿಗೆಡ್ ಎಚ್ಚರಿಕೆ

ಬೆಂಗಳೂರು:ಕೆ.ಎಸ್.ಈಶ್ವರಪ್ಪಗೆ ಉಪಮುಖ್ಯಮಂತ್ರಿ ಹುದ್ದೆ ನೀಡದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಸಂಗೊಳ್ಳಿ ರಾಯಣ್ಣ ಬ್ರಿಗೇಡ್, ಕೂಡಲೇ ಡಿಸಿಎಂ‌ ಸ್ಥಾನ ನೀಡಿ ಇಲ್ಲವೇ ತಕ್ಕ ಪಾಠ ಕಲಿಸಲಿದ್ದೇವೆ ಎಂದು ಬಿಜೆಪಿ ಹೈಕಮಾಂಡ್ ಗೆ ಎಚ್ಚರಿಕೆ ನೀಡಿದೆ.

ಇಷ್ಟು ದಿನ ತೆರೆಮರೆಗೆ ಸರಿದಿದ್ದ ಸಂಗೊಳ್ಳಿ‌ರಾಯಣ್ಣ ಬ್ರಿಗೇಡ್ ಡಿಸಿಎಂ ಹುದ್ದೆ ಸೃಷ್ಠಿಸುತ್ತಿದ್ದಂತೆ ಮತ್ತೆ ಮುನ್ನೆಲೆಗೆ ಬಂದಿದೆ. ಖಾತೆ ಹಂಚಿಕೆ ಸಂದರ್ಭದಲ್ಲಿ ಹಿರಿತನವನ್ನು ಮತ್ತು ರಾಜ್ಯಾದ್ಯಂತ ಇರುವ ಜನಪ್ರಿಯತೆ ಪರಿಗಣಿಸಿಲ್ಲ. ಈಶ್ವರಪ್ಪಗೆ ಉಪಮುಖ್ಯಮಂತ್ರಿ ಹುದ್ದೆ ನೀಡದಿರುವುದು ಹಿಂದುಳಿದ ವರ್ಗಗಳಿಗೆ ಮಾಡಿದ ಅನ್ಯಾಯ, ಅಪಮಾನ. ಇದನ್ನು ಹಿಂದುಳಿದ ವರ್ಗದ ಸಮುದಾಯ ತೀವ್ರವಾಗಿ ಖಂಡಿಸುತ್ತದೆ.

ಬಿಜೆಪಿ ಹೈಕಮಾಂಡ್​ಗೆ ರಾಯಣ್ಣ ಬ್ರಿಗೆಡ್ ಎಚ್ಚರಿಕೆ

ಈ ಕೂಡಲೇ ಆಗಿರುವ ತಪ್ಪನ್ನು ಸರಿಪಡಿಸಿ ಶೀಘ್ರ ಅವರನ್ನು ಉಪಮುಖ್ಯಮಂತ್ರಿ ಎಂದು ಘೋಷಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಬಿಜೆಪಿಗೆ ಭಾರೀ ಹೊಡೆತ ನೀಡಲಾಗುವುದು ಎಂದು ಬಿಜೆಪಿ ಹೈಕಮಾಂಡ್, ಯಡಿಯೂರಪ್ಪಗೆ ರಾಯಣ್ಣ ಬ್ರಿಗೇಡ್ ಅಧ್ಯಕ್ಷ ಎಂ ದೊಡ್ಡಯ್ಯ ಆನೇಕಲ್ ನೇರ ಎಚ್ಚರಿಕೆ ನೀಡಿದ್ದಾರೆ.

ಈ ಹಿಂದೆ ಯಡಿಯೂರಪ್ಪ ವಿರುದ್ಧದ ಅಸಮಧಾನದ ವೇಳೆ ಈಶ್ವರಪ್ಪ ಅವರೇ ಹುಟ್ಟು ಹಾಕಿದ್ದ ಸಂಗೊಳ್ಳಿ ರಾಯಣ್ಣ ಬ್ರಿಗೇಡ್, ಬಿಜೆಪಿಯಲ್ಲಿ ಎಲ್ಲವೂ‌ ಸರಿಯಾಯಿತು ಎನ್ನುತ್ತಿದ್ದಂತೆ ತೆರೆ ಮರೆಗೆ ಸರಿದಿತ್ತು. ಇದೀಗ ಈಶ್ವರಪ್ಪಗೆ ಡಿಸಿಎಂ ಹುದ್ದೆ ಕೈ ತಪ್ಪುತ್ತಿದ್ದಂತೆ ಮತ್ತೆ ಮುನ್ನೆಲೆಗೆ ಬಂದಿದೆ.

ABOUT THE AUTHOR

...view details