ಕರ್ನಾಟಕ

karnataka

By

Published : Oct 19, 2020, 12:42 PM IST

ETV Bharat / state

ಬೆಂಗಳೂರು: ಸುರಿಯುತ್ತಿರುವ ಮಳೆಯನ್ನೂ ಲೆಕ್ಕಿಸದೆ ಪಿಯು ಉಪನ್ಯಾಸಕರ ಮುಷ್ಕರ

ನಡುಗಿಸುವ ಚಳಿ, ನಿರಂತರವಾಗಿ ಸುರಿಯುವ ಮಳೆಯನ್ನು ಲೆಕ್ಕಿಸದೇ ಪಿಯು ಉಪನ್ಯಾಸಕರು ಮುಷ್ಕರ ನಡೆಸುತ್ತಿದ್ದು, ನೇಮಕಾತಿ ಪತ್ರ ಕೊಡುವವರೆಗೂ ಪ್ರತಿಭಟನೆ ಮುಂದುವರೆಸುತ್ತೇವೆ ಎಂನ್ನುತ್ತಿದ್ದಾರೆ.

PU lecturer's strike for appointment letter at bengalore
ಸುರಿಯುತ್ತಿರುವ ಮಳೆಯನ್ನೂ ಲೆಕ್ಕಿಸದೆ ಮುಂದುವರೆದ ಪಿಯು ಉಪನ್ಯಾಸಕರ ಧರಣಿ

ಬೆಂಗಳೂರು: ಪಿಯು ಉಪನ್ಯಾಸಕರ ಅಹೋರಾತ್ರಿ ಧರಣಿ 8ನೇ ದಿನಕ್ಕೆ ಕಾಲಿಟ್ಟಿದ್ದು, ಇತ್ತ ಸುರಿಯುತ್ತಿರುವ ಧಾರಾಕಾರ ಮಳೆ ನಡುವೆಯೂ ಪಿಯು ಬೋರ್ಡ್ ಮುಂದೆ ನಿಂತು ಮೌನವಾಗಿ ಪ್ರತಿಭಟಿಸುತ್ತಿದ್ದಾರೆ.

ಸುರಿಯುತ್ತಿರುವ ಮಳೆಯನ್ನೂ ಲೆಕ್ಕಿಸದೆ ಪಿಯು ಉಪನ್ಯಾಸಕರು ಧರಣಿ ಮುಂದುವರೆಸಿದರು

ನಡುಗಿಸುವ ಚಳಿ, ನಿರಂತರವಾಗಿ ಸುರಿಯುವ ಮಳೆಯನ್ನು ಲೆಕ್ಕಿಸದೇ ಉಪನ್ಯಾಸಕರು ಮುಷ್ಕರ ನಡೆಸುತ್ತಿದ್ದು, ನೇಮಕಾತಿ ಪತ್ರ ಕೊಡುವವರೆಗೂ ಪ್ರತಿಭಟನೆ ಮುಂದುವರೆಸುತ್ತೇವೆ ಎಂದಿದ್ದಾರೆ.

ನಾವು ಹೆಣ್ಣು ಮಕ್ಕಳು ಬೀದಿಯಲ್ಲಿ ಇಷ್ಟು ದಿನ ಕೂತಿದ್ದೇವೆ. ಸರ್ಕಾರಕ್ಕೆ ಕೊಂಚವೂ ಮನಕರಗಲಿಲ್ಲವಾ? ಎಂದು ಪ್ರಶ್ನಿಸಿರುವ ಅವರು, ನಮ್ಮ ಮೇಲೆ ಕೊಂಚವಾದರೂ ಕರುಣೆ ತೋರಿಸಿ, ನ್ಯಾಯ ಕೊಡಿಸಿ ಎಂದು ಬೇಡಿಕೊಂಡಿದ್ದಾರೆ.

ABOUT THE AUTHOR

...view details