ಬೆಂಗಳೂರು: ದ್ರೌಪದಿ ಕರಗ ಅಥವಾ ಬೆಂಗಳೂರು ಕರಗ ಬೆಂಗಳೂರಿನ ಚಾರಿತ್ರಿಕ ಹಾಗೂ ಸಾಂಸ್ಕಂತಿಕ ಹಬ್ಬ. ಚೈತ್ರ ಪೂರ್ಣಿಮಾ ದಿನದಂದು ನಡೆಯುವ ಕರಗ ಉತ್ಸವಕ್ಕೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಬೆಂಗಳೂರು ಕರಗ ತನ್ನದೇ ಆದ ಧಾರ್ಮಿಕ ಹಿನ್ನೆಲೆ, ಪಾವಿತ್ರ್ಯತೆ ಹೊಂದಿದೆ. 11 ದಿನಗಳ ಕಾಲ ನಡೆಯುವ ಈ ಉತ್ಸವದಲ್ಲಿ ಹೂವಿನ ಕರಗವೇ ಮುಖ್ಯ ಕೇಂದ್ರ ಬಿಂದುವಾಗಿದ್ದು, ಈಗಾಗಲೇ ತಯಾರಿಗಳು ನಡೆದಿವೆ. ನಾಳೆಯಿಂದ ಶುರುವಾಗುವ ಬೆಂಗಳೂರು ಕರಗ ಪ್ರಕ್ರಿಯೆ ಏಪ್ರಿಲ್ 21ರವರೆಗೆ ನಡೆಯಲಿದೆ. ಈ ಬಾರಿ ಕರಗದ ಪೂಜಾರಿಯಾಗಿ ಮನು ನಾಗರಾಜ್ ಅವರನ್ನ ಸರ್ಕಾರ ಆಯ್ಕೆ ಮಾಡಿದೆ.
ನಾಳೆ ರಾತ್ರಿ ದೇವರ ರಥೋತ್ಸವ ಮತ್ತು ಅದೇ ದಿನ ಬೆಳಗಿನ ಜಾವ 4 ಗಂಟೆಗೆ ಧ್ವಜಾರೋಹಣ ನೆರವೇರಿಸಲಿದೆ. ಈ 11 ದಿನಗಳಲ್ಲಿ ಪ್ರತಿ ದಿನ ಸಂಜೆ 7:30ಕ್ಕೆ ಮಹಾಮಂಗಳಾರತಿ ನಡೆಯಲಿದೆ. ದಿನಾಂಕ 19ರಂದು ಕರಗ ಶಕ್ತ್ಯೋತ್ಸವ ನಡೆಯಲಿದೆ.