ಬೆಂಗಳೂರು :ಪೇಂಟ್ ಶೇಖರಿಸಿದ್ದ ಗೋದಾಮುವಿನಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿರುವ ಘಟನೆ ನಗರದ ಲಕ್ಕಸಂದ್ರದ ಬಳಿ ನೆಡೆದಿದೆ.
ಸುದ್ದಿ ತಿಳಿದ ಕೂಡಲೇ ಐದು ಅಗ್ನಿ ಶಾಮಕ ವಾಹನಗಳ ಘಟನಾ ಸ್ಥಳಕ್ಕೆ ತೆರಳಿ ಕಾರ್ಯಚರಣೆ ಕೈಗೊಂಡಿದ್ದಾವೆ. ಆದ್ರೆ ಥಿನ್ನರ್ ಸ್ಫೋಟಗೊಂಡ ಕಾರಣ ಇಡೀ ಗೋದಾಮುವಿಗೆ ಬೆಂಕಿಯ ಜ್ವಾಲೆ ವ್ಯಾಪಿಸಿದೆ. ಗೊಡೌನ್ನಲ್ಲಿರುವ ಸಾಮಾಗ್ರಿಗಳು ಹೊತ್ತಿ ಉರುತ್ತಿರುವ ದೃಶ್ಯಗಳು ಕಂಡು ಬಂದವು.
ನೋಡುತ್ತಿದ್ದಂತೆ ಹೊತ್ತಿ ಉರಿದ ಗೋದಾಮು ಮೆಟ್ರೋ ಕಾಮಾಗಾರಿ ನೆಡೆಯುವ ಸ್ಥಳದಲ್ಲಿ ಥಿನ್ನರ್, ಪೇಂಟ್ ಡಬ್ಬಗಳನ್ನು ಶೇಕರಿಸಿಟ್ಟಿದ್ದ ಗೋದಾಮುವಿನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಗೆ ಪೇಂಟ್ ಮತ್ತು ಥಿನ್ನರ್ ಡಬ್ಬಗಳು ಸ್ಫೋಟಗೊಂಡಿದ್ದು, ಸ್ಥಳದಲ್ಲಿ ಕೆಲಹೊತ್ತು ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಯಾವುದೇ ಪ್ರಾಣ ಹಾನಿ ಸಂಭವಿಸಿರುವುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.