ಕರ್ನಾಟಕ

karnataka

ETV Bharat / state

ಸರ ಕಸಿದು ಪರಾರಿಯಾಗಲು ಯತ್ನ: ಕಳ್ಳನ್ನ ಹಿಡಿದು ಪೊಲೀಸರಿಗೊಪ್ಪಿಸಿದ ಸ್ಥಳೀಯರು

ಸರಗಳ್ಳತನಕ್ಕೆ ಯತ್ನಿಸಿದ ಖದೀಮನಿಗೆ ಸ್ಥಳೀಯರು ಸಖತ್​ ಗೂಸಾ ಕೊಟ್ಟಿದ್ದಾರೆ.

By

Published : Apr 5, 2019, 12:58 PM IST

ಸರಗಳ್ಳನಿಗೆ ಸಖತ್​ ಗೂಸಾ

ಬೆಂಗಳೂರು:ವೃದ್ಧೆಯ ಸರ‌ಗಳ್ಳತನ ಮಾಡಲು ಯತ್ನಿಸುತ್ತಿದ್ದ ಕಳ್ಳನೊಬ್ಬ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಆರೊಪಿಯನ್ನ ಹಿಡಿದು ಥಳಿಸಿದ ಸ್ಥಳೀಯರು‌ ವಿಜಯನಗರ ಪೊಲೀಸರಿಗೆ ಒಪ್ಪಿಸಿದ್ದಾರೆ.

ಸರಗಳ್ಳನಿಗೆ ಸಖತ್​ ಗೂಸಾ

ವಿಜಯನಗರದ ಎಂಸಿ ಬಡಾವಣೆಯ ಪಾರ್ಕ್​ನಲ್ಲಿ ಶಾರದಮ್ಮ ಎಂಬುವರು ವಾಕಿಂಗ್‌‌‌ ಮುಗಿಸಿ ‌‌ಕುಳಿತುಕೊಂಡಿರುವಾಗ ಸರಗಳ್ಳ ಪ್ರದೀಪ್ ಎಂಬಾತ ಪಾರ್ಕ್​ಗೆ ಬಂದಿದ್ದಾನೆ.‌ ಸೂಕ್ತ ಸಮಯ‌ ನೋಡಿಕೊಂಡು ವೃದ್ಧೆ ಶಾರದಮ್ಮಳ ತಲೆಗೆ ಗುದ್ದಿ ಸರ ಕಿತ್ತುಕೊಳ್ಳಲು ಪ್ರಯತ್ನಿಸಿದ್ದಾನೆ. ಈ ವೇಳೆ ಶಾರದಮ್ಮ ಅವರ ಕಿರುಚಾಟ ಕೇಳಿ ಯುವಕನನ್ನ ಬೆನ್ನತ್ತಿದ ಸ್ಥಳೀಯರು, ಪಲ್ಸರ್ ಬೈಕ್ ಹತ್ತಿ ಪರಾರಿಯಾಗುತ್ತಿದ್ದವನನ್ನ ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಸಂಬಂಧ ವಿಜಯನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

For All Latest Updates

TAGGED:

ABOUT THE AUTHOR

...view details