ಬೆಂಗಳೂರು:ವೃದ್ಧೆಯ ಸರಗಳ್ಳತನ ಮಾಡಲು ಯತ್ನಿಸುತ್ತಿದ್ದ ಕಳ್ಳನೊಬ್ಬ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಆರೊಪಿಯನ್ನ ಹಿಡಿದು ಥಳಿಸಿದ ಸ್ಥಳೀಯರು ವಿಜಯನಗರ ಪೊಲೀಸರಿಗೆ ಒಪ್ಪಿಸಿದ್ದಾರೆ.
ಸರ ಕಸಿದು ಪರಾರಿಯಾಗಲು ಯತ್ನ: ಕಳ್ಳನ್ನ ಹಿಡಿದು ಪೊಲೀಸರಿಗೊಪ್ಪಿಸಿದ ಸ್ಥಳೀಯರು
ಸರಗಳ್ಳತನಕ್ಕೆ ಯತ್ನಿಸಿದ ಖದೀಮನಿಗೆ ಸ್ಥಳೀಯರು ಸಖತ್ ಗೂಸಾ ಕೊಟ್ಟಿದ್ದಾರೆ.
ಸರಗಳ್ಳನಿಗೆ ಸಖತ್ ಗೂಸಾ
ವಿಜಯನಗರದ ಎಂಸಿ ಬಡಾವಣೆಯ ಪಾರ್ಕ್ನಲ್ಲಿ ಶಾರದಮ್ಮ ಎಂಬುವರು ವಾಕಿಂಗ್ ಮುಗಿಸಿ ಕುಳಿತುಕೊಂಡಿರುವಾಗ ಸರಗಳ್ಳ ಪ್ರದೀಪ್ ಎಂಬಾತ ಪಾರ್ಕ್ಗೆ ಬಂದಿದ್ದಾನೆ. ಸೂಕ್ತ ಸಮಯ ನೋಡಿಕೊಂಡು ವೃದ್ಧೆ ಶಾರದಮ್ಮಳ ತಲೆಗೆ ಗುದ್ದಿ ಸರ ಕಿತ್ತುಕೊಳ್ಳಲು ಪ್ರಯತ್ನಿಸಿದ್ದಾನೆ. ಈ ವೇಳೆ ಶಾರದಮ್ಮ ಅವರ ಕಿರುಚಾಟ ಕೇಳಿ ಯುವಕನನ್ನ ಬೆನ್ನತ್ತಿದ ಸ್ಥಳೀಯರು, ಪಲ್ಸರ್ ಬೈಕ್ ಹತ್ತಿ ಪರಾರಿಯಾಗುತ್ತಿದ್ದವನನ್ನ ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಸಂಬಂಧ ವಿಜಯನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.