ಬೆಂಗಳೂರು: 5ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆ ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಹಾಗೂ ಆಯುಷ್ ಇಲಾಖೆ ವತಿಯಿಂದ ಯೋಗ ದಿನವನ್ನ ಆಚರಿಸಲಾಗುತ್ತಿದೆ. ಸಾವಿರಾರು ಸಂಖ್ಯೆಯಲ್ಲಿ ಯೋಗಾಸನ ಆಸಕ್ತರು ಆಗಮಿಸಿ ನಾನಾ ಬಗೆಯ ಯೋಗಾಸನ ಮಾಡುತ್ತಿದ್ದ ದೃಶ್ಯ ಕಂಡು ಬಂತು.
ಸೂರ್ಯರಶ್ಮಿಯೊಂದಿಗೆ ಯೋಗದಲ್ಲಿ ಮಿಂದೆದ್ದ ಸಿಲಿಕಾನ್ ಸಿಟಿ..!
ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಇಂದು ಯೋಗಾಸನದ ಕಸರತ್ತು ಜೋರಾಗಿತ್ತು. ಡಿಸಿಎಂ ಪರಮೇಶ್ವರ್, ಆರೋಗ್ಯ ಸಚಿವ ಶಿವಾನಂದ ಎಸ್. ಪಾಟೀಲ್ ಭಾಗಿಯಾಗಿ ಯೋಗದ ಹಲವು ಭಂಗಿಗಳನ್ನು ಮಾಡಿದರು.
ಸೂರ್ಯ ರಶ್ಮಿಯೊಂದಿಗೆ ಯೋಗದಲ್ಲಿ ಮಿಂದೆದ್ದ ಸಿಲಿಕಾನ್ ಸಿಟಿ
ಸರ್ಕಾರದ ವತಿಯಿಂದ ಡಿಸಿಎಂ ಪರಮೇಶ್ವರ್ ಹಾಗೂ ಆರೋಗ್ಯ ಸಚಿವ ಶಿವಾನಂದ ಎಸ್. ಪಾಟೀಲ್ ಭಾಗಿಯಾಗಿದ್ದರು. ಇನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಕೂಡ ಪಾಲ್ಗೊಳ್ಳಬೇಕಿತ್ತು. ಆದರೆ, ಗ್ರಾಮ ವಾಸ್ತವ್ಯ ಹಿನ್ನೆಲೆ ಯೋಗ ಕಾರ್ಯಕ್ರಮದಲ್ಲಿ ಗೈರಾಗಿದ್ದರು.
ಶ್ವಾಸ ಗುರೂಜಿ ವಚನಾನಂದ ಸ್ವಾಮೀಜಿ, ಪಂತಂಜಲಿಯ ಪ್ರಕಾಶ್ ಗುರೂಜಿ, ಶ್ರೀರಕ್ಷಾ ಯೋಗ ಫೌಂಡೇಷನ್ ಸೇರಿದಂತೆ 8 ಸಂಸ್ಥೆಗಳು ಭಾಗಿಯಾಗಿವೆ. ಸಂಸ್ಕಾರ ಸಂಘಟನೆ, ಯೋಗ ಜೀವನ ಯೋಗ ಪಟುಗಳು ಭಾಗಿಯಾಗಿ, ಹಲವು ಭಂಗಿಗಳಲ್ಲಿ ಯೋಗ ಮಾಡುತ್ತಿದ್ದ ದೃಶ್ಯ ಕಂಡು ಬಂತು..