ಬೆಂಗಳೂರು: ಐಎಫ್ಎಸ್ ಅಧಿಕಾರಿ ಅವತಾರ್ ಸಿಂಗ್ ಸಕ್ಕರೆ ಖಾಯಿಲೆ ಹಾಗೂ ಬೆನ್ನು ನೋವಿನಿಂದ ಖಿನ್ನತೆಗೊಳಗಾಗಿ ಸಾವಿಗೆ ಶರಣಾಗಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಹರಿಯಾಣ ಮೂಲದ ಅವತಾರ್ ಸಿಂಗ್ 1990ರಲ್ಲಿ ಭಾರತೀಯ ಅರಣ್ಯ ಇಲಾಖೆಯ ಸೇವೆ ಸೇರಿದ್ದು ರಾಜ್ಯದ ವಿವಿಧೆಡೆ ಸೇವೆ ಸಲ್ಲಿಸಿದ್ದರು. ಮಡಿಕೇರಿ, ಚಿಕ್ಕಮಗಳೂರು, ಕೊಲಾರ ಸೇರಿದಂತೆ ವಿವಿಧ ಅರಣ್ಯ ಇಲಾಖೆಯ ಘಟಕದಲ್ಲಿ ಕರ್ತವ್ಯ ನಿರ್ವಹಿಸಿ ತಿಂಗಳ ಹಿಂದಷ್ಟೇ ನಗರಕ್ಕೆ ವರ್ಗವಣೆಯಾಗಿದ್ದರು. ಸದ್ಯರಾಜ್ಯದ ಕೇಂದ್ರ ಅರಣ್ಯ ಭವನದಲ್ಲಿ ಕೆಲಸ ಮಾಡುತ್ತಿದ್ದರು.