ಬೆಂಗಳೂರು: ನಿನ್ನೆ ರಾತ್ರಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಮಧ್ಯಾಹ್ನದಿಂದ ನಿಷೇಧಾಜ್ಞೆ ಜಾರಿಗೊಳಿಸಲಾಗುವುದು ಎಂದು ತಿಳಿಸಿದ್ದು, ಈ ರೀತಿ ದಿನಕ್ಕೊಂದು ನಿಯಮ ಬದಲಾವಣೆ ಮಾಡುತ್ತಿರುವುದು ಶೋಚನೀಯ ಎಂದು ನಗರ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ. ರಾವ್ ಪ್ರತಿಕ್ರಿಯೆ ನೀಡಿದರು.
ಇಂದು ಮಧ್ಯಾಹ್ನ 12 ರಿಂದ ಸೆಕ್ಷನ್ 144 ಜಾರಿ ಮಾಡುವ ಅಗತ್ಯತೆ ಏನಿತ್ತು ಎಂದು ಯಾರಿಗೂ ತಿಳಿಯದು. ಯಾವುದೇ ಆದೇಶ ಹೊರಡಿಸುವಾಗ ಚಿಂತನೆ ಮಾಡಬೇಕು, ಜೊತೆಗೆ ಚರ್ಚೆ ಮಾಡಬೇಕು ಎಂದರು.