ಕರ್ನಾಟಕ

karnataka

ETV Bharat / state

ಅಂಬೇಡ್ಕರ್ ಚಿಂತನೆ ಸ್ಮರಿಸಿದ ಹೆಚ್​ಡಿಕೆ: ಟ್ವೀಟ್ ಮೂಲಕ ಶುಭ ಕೋರಿದ ಮಾಜಿ ಸಿಎಂ

ವಿವಿಧತೆಗಳ ಈ ದೇಶ ಐಕ್ಯತೆಯಿಂದ ಹೆಜ್ಜೆ ಇಟ್ಟದ್ದು ಅಂಬೇಡ್ಕರ್ ರಚಿತ ಸಂವಿಧಾನದ ದಾರಿದೀವಿಗೆಯಲ್ಲಿ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

By

Published : Apr 14, 2020, 1:11 PM IST

H D Kumaraswamy
ಹೆಚ್.ಡಿ. ಕುಮಾರಸ್ವಾಮಿ

ಬೆಂಗಳೂರು: ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಯೋಜನೆ ರೂಪಿಸಬೇಕು. ಇಲ್ಲವಾದರೆ ಬಡವರಿಗೆ ಫಲವೇ ಸಿಗದು ಎಂಬ ಅಂಬೇಡ್ಕರ್ ಮಾತು ಎಂದಿಗೂ ಪ್ರಸ್ತುತ. ಈ ಚಿಂತನೆಯನ್ನು ನಾನು ಬಲವಾಗಿ ನಂಬಿದ್ದೇನೆ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ವಿವಿಧತೆಗಳ ಈ ದೇಶ ಐಕ್ಯತೆಯಿಂದ ಹೆಜ್ಜೆ ಇಟ್ಟದ್ದು, ಅಂಬೇಡ್ಕರ್ ರಚಿತ ಸಂವಿಧಾನದ ದಾರಿದೀವಿಗೆಯಲ್ಲಿ ಎಂದಿದ್ದಾರೆ.

ದೇಶವೊಂದು ನೆಮ್ಮದಿಯಿಂದ ಪ್ರಗತಿಯ ಕಡೆಗೆ ಹೆಜ್ಜೆ ಇಡಲು ಬೇಕಾದ ಶಿಕ್ಷಣ, ಜ್ಞಾನ, ಸಮಾನತೆ, ಭಾತೃತ್ವ, ಮಾನವೀಯತೆ, ಜಾತ್ಯತೀತತೆ ಇದೆಲ್ಲದಕ್ಕೂ ಮತ್ತೊಂದು ಹೆಸರೇ ಅಂಬೇಡ್ಕರ್ ಎಂದು ಬಣ್ಣಿಸಿದ್ದಾರೆ.

ಅಂಬೇಡ್ಕರ್ ಚಿಕಿತ್ಸಕ ಚಿಂತನೆಗಳು ನಮ್ಮ ಇಂದಿನ ಅಗತ್ಯ. ಜನ್ಮ ಜಯಂತಿಯ ಈ ಹೊತ್ತಲ್ಲಿ ಅಂಬೇಡ್ಕರ್ ಅವರನ್ನು ನಾನು ಸ್ಮರಿಸುತ್ತೇನೆ ಎಂದು ಹೇಳಿದ್ದಾರೆ.

ABOUT THE AUTHOR

...view details