ಬೆಂಗಳೂರು: ರಾಜಕೀಯ ಜಂಜಡ ಬದಿಗೊತ್ತಿ ನಿರಾಳರಾಗಿರುವ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಪುತ್ರ ವಿಜಯೇಂದ್ರ ಜೊತೆಗೆ ಯೂರೋಪ್ ಪ್ರವಾಸಕ್ಕೆ ತೆರಳಿದ್ದು, ಪ್ರವಾಸದ ಅಂತಿಮ ಭಾಗವಾಗಿ ಇಟಲಿಗೆ ಭೇಟಿ ನೀಡಿದ್ದಾರೆ. ಕಳೆದ ಎರಡು ವಾರಗಳಿಂದ ವಿದೇಶ ಪ್ರವಾಸದಲ್ಲಿರುವ ಅವರು ಪ್ರವಾಸಿ ತಾಣಗಳನ್ನು ವೀಕ್ಷಿಸುತ್ತಿದ್ದಾರೆ.
ಬಿಎಸ್ವೈ ಯೂರೋಪ್ ಟ್ರಿಪ್: ಪುತ್ರನ ಜೊತೆಗೆ ಇಟಲಿಯ ಪ್ರವಾಸಿ ತಾಣಗಳ ವೀಕ್ಷಣೆ
ಕಳೆದ ಎರಡು ವಾರದಿಂದ ಯೂರೋಪ್ ಪ್ರವಾಸದಲ್ಲಿರುವ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಇದೀಗ ಇಟಲಿಯಲ್ಲಿದ್ದಾರೆ.
ಲಂಡನ್ ನಂತರ ಇಟಲಿ ಸುತ್ತಾಡಿದ ಮಾಜಿ ಸಿಎಂ ಬಿಎಸ್ವೈ
ಇಟಲಿ ಕನ್ನಡ ಸಂಘದ ಅಧ್ಯಕ್ಷರು ಹಾಗೂ ಇಟಲಿ ಸರ್ಕಾರದಲ್ಲಿ ನರ್ಸ್ ನೌಕರಿ ಪಡೆದ ಮೊದಲ ಕನ್ನಡಿಗ ಹೇಮೆ ಗೌಡ ಅವರು ಬಿ.ಎಸ್.ಯಡಿಯೂರಪ್ಪ ಹಾಗೂ ಬಿ.ವೈ.ವಿಜಯೇಂದ್ರ ಅವರನ್ನು ಭೇಟಿಯಾಗಿ ಅಭಿನಂದಿಸಿದ್ದಾರೆ. ಇದಕ್ಕೂ ಮುನ್ನ ಶನಿವಾರ ಲಂಡನ್ನ ಲ್ಯಾಂಬೆತ್ನಲ್ಲಿ ಥೇಮ್ಸ್ ನದಿ ತೀರದಲ್ಲಿರುವ ಬಸವೇಶ್ವರ ಪ್ರತಿಮೆ ಇರುವ ಸ್ಥಳಕ್ಕೆ ಭೇಟಿ ನೀಡಿ ನಮನ ಸಲ್ಲಿಸಿದ್ದರು.
ಇದನ್ನೂ ಓದಿ:ಪಿಎಸ್ಐ ಅಕ್ರಮದ ಬಗ್ಗೆ ನಾನು ಗಾಳಿಯಲ್ಲಿ ಗುಂಡು ಹೊಡೆದಿಲ್ಲ, ಇದ್ದದ್ದನ್ನು ಹೇಳಿದ್ದೇನೆ: ಹೆಚ್ಡಿಕೆ