ಬೆಂಗಳೂರು :ಅದು ಇಡೀ ಬೆಂಗಳೂರನ್ನೇ ಬೆಚ್ಚಿ ಬೀಳಿಸಿದ್ದ ಭೀಕರ ಕೊಲೆ. ಆರೋಪಿಗಳ ಪತ್ತೆಗಾಗಿ ಮೂರು ವರ್ಷ ಶೋಧ ನಡೆಸಿ, ಕಿಡಿಗೇಡಿಗಳು ಸಿಗಲಿಲ್ಲ ಅನ್ನೋ ಕಾರಣಕ್ಕೆ ಕೇಸ್ ಕ್ಲೋಸ್ ಮಾಡಲಾಗಿತ್ತು. ಇದಾದ 15 ವರ್ಷಗಳ ಬಳಿಕ ಹಂತಕರು ಸಿಕ್ಕಿಬಿದ್ದಿದ್ದಾರೆ. ಆ ರಕ್ಕಸರು ಸಿಕ್ಕಿ ಬೀಳೋಕೆ ಕಾರಣ ಫಿಂಗರ್ ಪ್ರಿಂಟ್.
ಇತ್ತೀಚೆಗೆ ಪ್ರವಾಸಿಗರ ಸೋಗಿನಲ್ಲಿ ನಂದಿ ಗಿರಿಧಾಮದಲ್ಲಿ ದರೋಡೆಗೆ ಯತ್ನಿಸಿದ್ದ ಪ್ರಕರಣದಡಿ ಚಿಕ್ಕಬಳ್ಳಾಪುರ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದರು. ವಿಚಾರಣೆ ವೇಳೆ ಫಿಂಗರ್ ಪ್ರಿಂಟ್ ತೆಗೆದುಕೊಂಡಾಗ 15 ವರ್ಷಗಳ ಹಿಂದೆ ಶಶಿಧರ್ ಎಂಬುವರ ಕೊಲೆ ಕೇಸ್ನಲ್ಲಿ ತೆಗೆದುಕೊಂಡಿದ್ದ ಫಿಂಗರ್ ಪ್ರಿಂಟ್ ಹೋಲಿಕೆ ಕಂಡು ಬಂದಿದೆ. ಈ ವೇಳೆ ಚಿಕ್ಕಬಳ್ಳಾಪುರ ಪೊಲೀಸರು, ಯಶವಂತಪುರ ಪೊಲೀಸರಿಗೆ ಮಾಹಿತಿ ನೀಡಿದ ಮೇರೆಗೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಪ್ರಕರಣದ ಮಾಹಿತಿ ತಿಳಿಸಿದ ಉತ್ತರ ವಿಭಾಗದ ಡಿಸಿಪಿ ಧರ್ಮೆಂದ್ರ ಕುಮಾರ್ ಮೀನಾ ಉದ್ಯಮಿ ಶಶಿಧರನ್ ಹತ್ಯೆ ಈ ಬಗ್ಗೆ ಪ್ರತಿಕ್ರಿಯಿಸಿರುವಉತ್ತರ ವಿಭಾಗದ ಡಿಸಿಪಿ ಧರ್ಮೆಂದ್ರ ಕುಮಾರ್ ಮೀನಾ, ಬೆಂಗಳೂರಿನ ಯಶವಂತಪುರದ ಬಿಕೆ ನಗರದ 11ನೇ ಕ್ರಾಸ್ನಲ್ಲಿ ಶಶಿಧರನ್, ತಮ್ಮ ಮನೆಯಲ್ಲಿಯೇ ವಿಡಿಯೋ ಗೇಮ್ ಸೆಂಟರ್ ಬ್ಯುಸಿನೆಸ್ ನಡೆಸುತ್ತಿದ್ದರು. ಪ್ರತಿದಿನ ನೂರಾರು ಶಾಲಾ ಮಕ್ಕಳು, ಯುವಕರು ಇಲ್ಲಿ ವಿಡಿಯೋ ಗೇಮ್ ಆಡೋಕೆ ಬರುತ್ತಿದ್ದರು. ಹೀಗಿದ್ದ ಶಶಿಧರನ್ 2006ರ ನವೆಂಬರ್ 5ರಂದು ನಿಗೂಢವಾಗಿ ಹತ್ಯೆಯಾಗಿದ್ರು. ಕೈ-ಕಾಲುಗಳನ್ನು ಕಟ್ಟಿ, ಬಾಯಿಗೆ ಟೇಪ್ ಅಂಟಿಸಿ ಕೊಲೆ ಮಾಡಲಾಗಿತ್ತು. ಸ್ಥಳಕ್ಕೆ ಬಂದ ಯಶವಂತಪುರ ಪೊಲೀಸರು ಕ್ರೈಂ ಸೀನ್ ಹಾಳಾಗದಂತೆ ರಕ್ಷಿಸಿ, ಸಾಕ್ಷ್ಯಗಳನ್ನು ಸಂಗ್ರಹಿಸಿದ್ದರು ಎಂದಿದ್ದಾರೆ.
ಈ ಸಾಕ್ಷಿಗಳ ಪೈಕಿ ಪ್ರಮುಖವಾಗಿ, ಟೇಪ್ ಮೇಲೆ ಹಂತಕರ ಫಿಂಗರ್ ಪ್ರಿಂಟ್ ಇರೋದನ್ನು ಪತ್ತೆ ಹಚ್ಚಿ ಅದನ್ನು ಆಟೋಮ್ಯಾಟಿಕ್ ಫಿಂಗರ್ ಪ್ರಿವೆಂಟ್ ಐಡೆಂಟಿಫೈಯ್ಡ್ ಸಿಸ್ಟಮ್ನಲ್ಲಿ ದಾಖಲಿಸಲಾಗಿತ್ತು. ಆದರೂ ಆರೋಪಿಗಳು ಪತ್ತೆಯಾಗದ ಹಿನ್ನೆಲೆ, 2006ರಲ್ಲಿ ಪೊಲೀಸರು ಕೋರ್ಟ್ಗೆ 'ಸಿ' ರಿಪೋರ್ಟ್ ಸಲ್ಲಿಸಿದ್ದರು.
ಬೇರೊಂದು ಕೇಸ್ ಫಿಂಗರ್ ಪ್ರಿಂಟ್ ಪರಿಶೀಲನೆ ವೇಳೆ ಲಾಕ್..!
2010ರ ಮೇನಲ್ಲಿ ಚಿಕ್ಕಬಳ್ಳಾಪುರದ ನಂದಿ ಗಿರಿಧಾಮದಲ್ಲಿ ನಾಲ್ವರು ದುಷ್ಕರ್ಮಿಗಳಿಂದ ಸುಲಿಗೆ ನಡೆದಿತ್ತು. ಈ ಕೇಸ್ನಲ್ಲಿ ಬಂಧಿತರಾಗಿದ್ದ ಆರೋಪಿಗಳ ಪೈಕಿ ಜೈ ವೀರು ಪ್ರಮುಖನಾಗಿದ್ದ. ಹೀಗಾಗಿ, ಪೊಲೀಸರು ಆತನ ಫಿಂಗರ್ ಪ್ರಿಂಟ್ ಸಂಗ್ರಹಿಸಿಟ್ಟುಕೊಂಡಿದ್ದರು. ಆದರೆ, ಇತ್ತೀಚೆಗೆ ಚಿಕ್ಕಬಳ್ಳಾಪುರದ ಬೆರಳಚ್ಚು ಘಟಕದಲ್ಲಿ ಕೆಲ ಮೋಸ್ಟ್ ವಾಂಟೆಡ್ಗಳ ಫಿಂಗರ್ ಪ್ರಿಂಟ್ ಪರಿಶೀಲಿಸಲಾಗುತ್ತಿತ್ತು.
ಆಗ ಅಲ್ಲಿದ್ದ ಆರೋಪಿ ಜೈವೀರು ಫಿಂಗರ್ ಪ್ರಿಂಟ್ಗೂ, ಯಶವಂತಪುರದ ಶಶಿಧರನ್ ಕೊಲೆ ಕೇಸ್ನಲ್ಲಿ ಸಂಗ್ರಹಿಸಲಾಗಿದ್ದ ಫಿಂಗರ್ ಪ್ರಿಂಟ್ಗೂ ಮ್ಯಾಚ್ ಆಗಿತ್ತು. ಕೂಡಲೇ ಅಲರ್ಟ್ ಆದ ಚಿಕ್ಕಬಳ್ಳಾಪುರ ಪೊಲೀಸರು, ಯಶವಂತಪುರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಆಗ ಯಶವಂತಪುರ ಪೊಲೀಸರು ಆರೋಪಿ ವೀರುನನ್ನು ವಶಕ್ಕೆ ಪಡೆದು, ಶಶಿಧರನ್ ಕೊಲೆ ಕೇಸ್ ಸಂಬಂಧ ವಿಚಾರಣೆ ನಡೆಸಿದಾಗ, ಸತ್ಯ ಹೊರ ಬಿದ್ದಿದೆ.
ವಿಡಿಯೋ ಗೇಮ್ಗಾಗಿ ಹತ್ಯೆ
ಪ್ರಕರಣದಲ್ಲಿ ಆರೋಪಿ ವೀರು ಜೊತೆ ಅವಿನಾಶ್ ಹಾಗೂ ಮೋಸಿನ್ ಖಾನ್ ಎಂಬುವರನ್ನೂ ಬಂಧಿಸಲಾಗಿದೆ. ಈ ಮೂವರು 2006ರಲ್ಲಿ ಸ್ಕೂಲ್ ಸ್ಟೂಡೆಂಟ್ಸ್ ಆಗಿದ್ದರು. ವಿಡಿಯೋ ಗೇಮ್ ಹುಚ್ಚು ಬೆಳೆಸಿಕೊಂಡಿದ್ದರು. ಹತ್ಯೆಯಾದ ಶಶಿಧರನ್ ಶಾಪ್ನಲ್ಲಿ ವಿಡಿಯೋ ಗೇಮ್ ಆಡುತ್ತಿದ್ದರು. ಈ ಮಧ್ಯೆ ಆರೋಪಿಗಳ ಪೈಕಿ ಓರ್ವನ ಮನೆಯಲ್ಲಿ ಕಂಪ್ಯೂಟರ್ ಇತ್ತು.
ಶಾಪ್ನಲ್ಲಿ ಆಟ ಆಡಲು ಪದೇಪದೆ ಹಣ ಇರಲಿಲ್ಲ. ಹಾಗಾಗಿ, ಶಶಿಧರನ್ ಶಾಪ್ನಿಂದ ಸಾಫ್ಟ್ ಕಾಪಿ ಡೌನ್ಲೋಡ್ ಮಾಡಿಕೊಳ್ಳೋಕೆ ಮುಂದಾಗಿದ್ದರು. 2006ರ ನವೆಂಬರ್ 5ರಂದು ಆರೋಪಿಗಳಿಗೆ ಶಶಿಧರನ್ ಗೇಮ್ನ ಸಾಫ್ಟ್ ಕಾಪಿ ಡೌನ್ಲೋಡ್ ಮಾಡಿಕೊಳ್ಳಲು ಬಿಟ್ಟಿರಲಿಲ್ಲ.
ಇದೇ ಕಾರಣಕ್ಕೆ, ಮೂವರು ಸೇರಿ ಮೊದಲೇ ಪ್ಲ್ಯಾನ್ ಮಾಡಿದಂತೆ ತಾವು ಮನೆಯಿಂದ ತಂದಿದ್ದ ಹಗ್ಗದಿಂದ ಶಶಿಧರನ್ ಕಾಲು ಕಟ್ಟಿ, ಮುಖಕ್ಕೆ ಟೇಪ್ ಅಂಟಿಸಿ ಹತ್ಯೆಗೈದಿದ್ದರು ಎಂಬುವುದು ತನಿಖೆ ವೇಳೆ ಗೊತ್ತಾಗಿದೆ.