ಕರ್ನಾಟಕ

karnataka

ETV Bharat / state

ಬೆಂಗಳೂರಿನ ಲುಂಬಿನಿಗಾರ್ಡನ್‌ನಲ್ಲಿದ್ದ ರಾಜ್ ಪುತ್ಥಳಿ ಕದ್ದ ಖದೀಮರು

ಚಿನ್ನಾಭರಣ, ವಾಹನ ಹೀಗೆ‌ ದುಬಾರಿ ಬೆಲೆಯ ವಸ್ತುಗಳನ್ನ ಕಳ್ಳರು ಕಳ್ಳತನ ಮಾಡೋದನ್ನ ನೋಡಿದ್ದೇವೆ. ಆದ್ರೆ ಎಂದಾದರೂ ಪುತ್ಥಳಿ ಕಳ್ಳತನ ಮಾಡೋದು ನೋಡಿದ್ದೀರಾ. ಬಹುಶಃ ಈ ಬಗ್ಗೆ ಎಲ್ಲಿಯೂ ಕೇಳಿರೋದಕ್ಕೆ‌ ಸಾಧ್ಯವಿಲ್ಲ. ಅಪರೂಪದಲ್ಲಿ ಅಪರೂಪವೆಂಬಂತೆ ಸಿಲಿಕಾನ್ ಸಿಟಿಯಲ್ಲಿ ಮಹನೀಯ ಪುರುಷ ಕನ್ನಡಿಗರ ಆರಾಧ್ಯ ದೈವ ಎನ್ನಿಸಿಕೊಂಡಿರುವ ಡಾ.ರಾಜ್ ಕುಮಾರ್ ಪುತ್ಥಳಿ ಕದ್ದಿರುವ ಘಟನೆ ಬೆಳಕಿಗೆ ಬಂದಿದೆ..

By

Published : Feb 6, 2022, 5:24 PM IST

ಪೊಲೀಸ್​ ಠಾಣೆ
ಪೊಲೀಸ್​ ಠಾಣೆ

ಬೆಂಗಳೂರು :ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಲುಂಬಿನಿ ಗಾರ್ಡನ್​​​ನಲ್ಲಿ ನಿರ್ಮಿಸಲಾಗಿದ್ದ ಡಾ. ರಾಜ್‌ ಕುಮಾರ್​​ ಅವರ ಕಂಚಿನ ಪುತ್ಥಳಿಯನ್ನು ಯಾರೋ ದುಷ್ಕರ್ಮಿಗಳು ಕಳ್ಳತನ ಮಾಡಿದ್ದಾರೆ.

ಈ ಸಂಬಂಧ ಅರಣ್ಯ ಅಧಿಕಾರಿ ಯೋಗೇಶ್ ಎಂಬುವರು ಪೊಲೀಸರಿಗೆ ದೂರು ನೀಡಿದ್ದಾರೆ.‌ ಲುಂಬಿನಿ ಗಾರ್ಡನ್ ಅರಣ್ಯ ಇಲಾಖೆಯ ವ್ಯಾಪ್ತಿಗೆ ಬರಲಿದ್ದು ರಾಜು ಎಂಬುವರು ನೋಡಿಕೊಳ್ಳುತ್ತಿದ್ದರು.

ಇದನ್ನೂ ಓದಿ:ರಾಜ್ಯದಲ್ಲೂ ಎರಡು ದಿನ ಶೋಕಾಚರಣೆ : ಹಲವೆಡೆ ಶ್ರದ್ಧಾಂಜಲಿ ಸಲ್ಲಿಕೆ

ಕಳೆದ‌ ತಿಂಗಳು 24 ರಂದು ರಾಜ್ ಪುತ್ಥಳಿ ಕಾಣೆಯಾಗಿದೆ.ಎಲ್ಲಾ‌ ಕಡೆ ಹುಡುಕಾಡಿದರೂ ಪುತ್ಥಳಿ‌ ಸಿಕ್ಕಿರಲಿಲ್ಲ. ದುಷ್ಕರ್ಮಿಗಳು‌‌ ಪುತ್ಥಳಿಯನ್ನು ಕದ್ದಿರುವ ಅನುಮಾನದ‌ ಮೇರೆಗೆ ಪೊಲೀಸರು ದೂರನ್ನು ದಾಖಲಿಸಿಕೊಂಡು, ಇಬ್ಬರು ಶಂಕಿತ ಆರೋಪಿಗಳನ್ನು ವಶಕ್ಕೆ‌‌ ಪಡೆದಿದ್ದಾರೆ. ಅವರನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದ್ದು, ಕದ್ದ ಪುತ್ಥಳಿಯನ್ನು ಗುಜರಿ ಅಂಗಡಿಗೆ ನೀಡಿದ್ದಾರೆ ಎಂದು ತಿಳಿದುಬಂದಿದೆ‌.

ABOUT THE AUTHOR

...view details