ಬೆಂಗಳೂರು:ಗಣೇಶ ಹಬ್ಬದ ಪ್ರಯುಕ್ತ ಸಿಎಂ ಯಡಿಯೂರಪ್ಪ ಇಂದು ತಮ್ಮ ಕಾವೇರಿ ನಿವಾಸದಲ್ಲಿ ವಿನಾಯಕನಿಗೆ ಪೂಜೆ ಸಲ್ಲಿಸಿದರು.
ಕಾವೇರಿ ನಿವಾಸದಲ್ಲಿ ಕುಟುಂಬ ಸಮೇತ ಗಣೇಶ ಚತುರ್ಥಿ ಆಚರಿಸಿದ ಸಿಎಂ
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕುಟುಂಬ ಸಮೇತರಾಗಿ ಕಾವೇರಿ ನಿವಾಸದಲ್ಲಿ ಗಣೇಶ ಹಬ್ಬವನ್ನು ಆಚರಿಸಿದರು.
Ganesha festival
ಕುಟುಂಬಸ್ಥರ ಜೊತೆ ಕಾವೇರಿ ನಿವಾಸದಲ್ಲಿ ಸಿಎಂ ಗೌರಿ-ಗಣೇಶ ಹಬ್ಬವನ್ನು ಆಚರಿಸಿದರು. ಸರ್ವರ ಒಳಿತಿಗಾಗಿ ಹಾಗೂ ಅನ್ನದಾತರ ಬದುಕು ಹಸನಾಗಿಸಲೆಂದು ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.
ಈ ವೇಳೆ ಪುತ್ರ ಬಿ.ವೈ.ವಿಜಯೇಂದ್ರ ಸೇರಿದಂತೆ ಸಿಎಂ ಪುತ್ರಿಯರು, ಮೊಮ್ಮಕ್ಕಳು ಗಣೇಶ ಚತುರ್ಥಿ ಹಬ್ಬದಲ್ಲಿ ಪಾಲ್ಗೊಂಡಿದ್ದರು.