ಕರ್ನಾಟಕ

karnataka

ವಿಜಯನಗರ ಪ್ರತ್ಯೇಕ ಜಿಲ್ಲೆ: ಶಾಸಕರು ಸಂಸದರ ಜೊತೆ ಇಂದು ಸಿಎಂ ಸಭೆ, ಆನಂದ್​ ಸಿಂಗ್​ಗೂ ಆಹ್ವಾನ

ವಿಜಯನಗರವನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಘೋಷಣೆ ಮಾಡುವ ವಿಚಾರ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಬಳ್ಳಾರಿ ಜಿಲ್ಲೆಯ ಶಾಸಕರು, ಪರಿಷತ್ ಸದಸ್ಯರು ಹಾಗೂ ಸಂಸದರ ಜೊತೆ ಇಂದು ಮಧ್ಯಾಹ್ನ ಸಭೆ ನಡೆಸಲಿದ್ದಾರೆ.

By

Published : Oct 2, 2019, 10:32 AM IST

Published : Oct 2, 2019, 10:32 AM IST

ಸಿಎಂ

ಬೆಂಗಳೂರು: ವಿಜಯನಗರವನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಘೋಷಣೆ ಮಾಡುವ ವಿಚಾರ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಬಳ್ಳಾರಿ ಜಿಲ್ಲೆಯ ಶಾಸಕರು, ಪರಿಷತ್ ಸದಸ್ಯರು ಹಾಗೂ ಸಂಸದರ ಸಭೆ ಕರೆದಿದ್ದು ಅನರ್ಹ ಶಾಸಕ ಆನಂದ್ ಸಿಂಗ್​ಗೂ ಆಹ್ವಾನ ನೀಡಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿ ಮಧ್ಯಾಹ್ನ 3.30ಕ್ಕೆ ಸಭೆ ನಡೆಸಲಿರುವ ಸಿಎಂ ಬಳ್ಳಾರಿ ಜಿಲ್ಲೆಯ ವಿಜಯನಗರವನ್ನು ಹೊಸ ಜಿಲ್ಲೆಯನ್ನಾಗಿ ಘೋಷಣೆ ಮಾಡುವ ಕುರಿತು ಮಹತ್ವದ ತೀರ್ಮಾನ‌ ಕೈಗೊಳ್ಳಲಿದ್ದಾರೆ.

ಬಳ್ಳಾರಿಯನ್ನು ಎರಡು ಭಾಗ ಮಾಡುವ ನಿರ್ಧಾರಕ್ಕೆ ವಿರೋಧ ವ್ಯಕ್ತವಾಗಿದೆ. ಬಳ್ಳಾರಿಯ ಕೆಲ ಶಾಸಕರು ವಿರೋಧ ವ್ಯಕ್ತಪಡಿಸಿದ್ದಾರೆ‌‌‌ ಹೀಗಾಗಿ ಜಿಲ್ಲೆಯ ಎಲ್ಲಾ ಶಾಸಕರ ಜೊತೆ ಸಭೆ ನಡೆಸಿ, ವಿಜಯನಗರವನ್ನು ಜಿಲ್ಲೆಯನ್ನಾಗಿ ಘೋಷಣೆ ಮಾಡುವ ಬಗ್ಗೆ ಸಿಎಂ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ.

ಅನರ್ಹ ಶಾಸಕ‌ ಆನಂದ್ ಸಿಂಗ್​ಗೂ ಆಹ್ವಾನ: ಸಂಸದ ದೇವೇಂದ್ರಪ್ಪ,ರಾಜ್ಯಸಭಾ ಸದಸ್ಯ ಸೈಯದ್ ನಾಸಿರ್ ಹುಸೇನ್, ಶಾಸಕರಾದ ಪಿ.ಟಿ ಪರಮೇಶ್ವರ ನಾಯ್ಕ,ಭೀಮಾನಾಯ್ಕ್, ಗಣೇಶ್, ಸೋಮಲಿಂಗಪ್ಪ, ನಾಗೇಂದ್ರ,ಸೋಮಶೇಖರ ರೆಡ್ಡಿ,ತುಕಾರಾಂ, ಗೋಪಾಲಕೃಷ್ಣ, ಕರುಣಾಕರರೆಡ್ಡಿ ಹಾಗು ಅನರ್ಹ ಶಾಸಕ ಆನಂದ್ ಸಿಂಗ್,ಪರಿಷತ್ ಸದಸ್ಯರಾದ ಕೊಂಡಯ್ಯ,ಅಲ್ಲಂ ವೀರಭದ್ರಪ್ಪ,ಶರಣಪ್ಪ ಮಟ್ಟೂರು ಹಾಗು ಚಂದ್ರಶೇಖರ್ ಪಾಟೀಲ್ ಗೂ ಸಭೆಯಲ್ಲಿ ಭಾಗಿಯಾಗುವಂತೆ ಆಹ್ವಾನ ನೀಡಲಾಗಿದೆ.

ಜಿಲ್ಲೆಯ ಹಿತಾಸಕ್ತಿ ವಿಷಯವಾಗಿರುವ ಕಾರಣ ಪಕ್ಷಾತೀತವಾಗಿ ಎಲ್ಲಾ ಆಹ್ವಾನಿತ‌‌ ಶಾಸಕರು,ಸಂಸದರು ಸಭೆಗೆ ಆಗಮಿಸಲಿದ್ದಾರೆ ಎಂದು ತಿಳಿದುಬಂದಿದೆ.

ABOUT THE AUTHOR

...view details