ಬೆಂಗಳೂರು: ಲಾಕ್ಡೌನ್ ಅನುಷ್ಠಾನ ಹಾಗು ಜನರಿಂದ ಲಾಕ್ಡೌನ್ ಪಾಲನೆ ಪರಿಶೀಲನೆ ನಡೆಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಖುದ್ದಾಗಿ ಸಿಟಿ ರೌಂಡ್ಸ್ ಹೊರಟಿದ್ದು ಹಲವು ಪ್ರದೇಶಗಳಿಗೆ ಸರ್ಪೈಸ್ ವಿಸಿಟ್ ಮಾಡುತ್ತಿದ್ದಾರೆ.
ಅಧಿಕೃತ ನಿವಾಸ ಕಾವೇರಿಯಿಂದ ಹೊರಟ ಸಿಎಂ ನಗರದ ಗೊರಗುಂಟೆ ಪಾಳ್ಯ, ಸುಮನಹಳ್ಳಿ ಸಿಗ್ನಲ್, ಜಯದೇವ ಜಂಕ್ಷನ್, ದೇವೇಗೌಡ ಪೆಟ್ರೋಲ್ ಬಂಕ್ ಜಂಕ್ಷನ್, ಯಶವಂತಪುರ ಸೇರಿದಂತೆ ಹಲವು ಪ್ರದೇಶಗಳಿಗೆ ಸರ್ಪ್ರೈಸ್ ವಿಸಿಟ್ ನೀಡಿ ಲಾಕ್ಡೌನ್ ಪರಿಸ್ಥಿತಿ ಅವಲೋಕಿಸುತ್ತಿದ್ದಾರೆ.