ಕರ್ನಾಟಕ

karnataka

ದೇಶದ ಬರಗಾಲಕ್ಕೆ ಕಾರಣಗಳೇನು?: ಹೀಗೆ ಹೇಳುತ್ತಿದೆ ಐಐಎಸ್​ಸಿ ಸಂಶೋಧನೆ!

By

Published : Dec 11, 2020, 5:53 PM IST

ಒಂದು ಶತಕೋಟಿಗೂ ಹೆಚ್ಚು ಜನರು ವಾರ್ಷಿಕ ಮಾನ್ಸೂನ್ ಅನ್ನೇ ಅವಲಂಬಿಸಿದ್ದಾರೆ. ಏಕೆಂದರೆ ಇದು ಜೂನ್ ಮತ್ತು ಸೆಪ್ಟೆಂಬರ್ ನಡುವೆ ದೇಶದ ವಿವಿಧ ಪ್ರದೇಶಗಳಲ್ಲಿ ಸುರಿಯುವ ಮಳೆಗೆ ಕಾರಣವಾಗಿದೆ. ಈ ಕಾಲಘಟ್ಟದಲ್ಲಿ ಮಳೆ ಬಾರದೇ ಹೋದಾಗ ದೇಶದ ಬಹುಪಾಲು ಭಾಗ ಬರಗಾಲದಲ್ಲೇ ಮಿಂದೇಳುತ್ತದೆ.

Causes of several droughts in India during the last century?: IISC research
ಭಾರತದಲ್ಲಿ ಕಳೆದ ಶತಮಾನದಲ್ಲಿ ಸಂಭವಿಸಿದ ಹಲವಾರು ಬರಗಳಿಗೆ ಕಾರಣ?: ಐಐಎಸ್​ಸಿ ಸಂಶೋಧನೆ

ಬೆಂಗಳೂರು:ಕಳೆದ ಒಂದು ಶತಮಾನದಲ್ಲಿ ಭಾರತ ದೇಶದಲ್ಲಿ ಮಾನ್ಸೂನು ಕೈಕೊಟ್ಟು ಬರಗಾಲಕ್ಕೆ ಕಾರಣವಾಗಿದೆ. ಹೀಗೆ ಸಂಭವಿಸಿದ ಅರ್ಧದಷ್ಟು ಬರಗಾಲಗಳು ಉತ್ತರ ಅಟ್ಲಾಂಟಿಕ್ ಪ್ರದೇಶದಲ್ಲಿ ಉಂಟಾದ ವಾತಾವರಣದ ಅಡಚಣೆಯಿಂದಾಗಿ ಸಂಭವಿಸಿರಬಹುದು ಎಂದು ವಿಜ್ಞಾನದಲ್ಲಿ ಪ್ರಕಟವಾದ ಹೊಸ ಅಧ್ಯಯನವು ಕಂಡು ಹಿಡಿದಿದೆ. ಇದನ್ನು ಸೆಂಟರ್ ಫಾರ್ ಅಟ್ಮಾಸ್ಫಿಯರಿಕ್ ಅಂಡ್ ಓಷಿಯಾನಿಕ್ ಸೈನ್ಸಸ್ (ಸಿಎಒಎಸ್), ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್ಸಿ) ಸಂಶೋಧಕರು ಕಂಡು ಹಿಡಿದಿದ್ದಾರೆ.

ಒಂದು ಶತಕೋಟಿಗೂ ಹೆಚ್ಚು ಜನರು ವಾರ್ಷಿಕ ಭಾರತೀಯ ಬೇಸಿಗೆ ಮಾನ್ಸೂನ್ ಅನ್ನು ಅವಲಂಬಿಸಿದ್ದಾರೆ. ಏಕೆಂದರೆ ಇದು ಜೂನ್ ಮತ್ತು ಸೆಪ್ಟೆಂಬರ್ ನಡುವೆ ದೇಶದ ವಿವಿಧ ಪ್ರದೇಶಗಳಲ್ಲಿ ಸುರಿಯುವ ಮಳೆಗೆ ಕಾರಣವಾಗಿದೆ. ಈ ಕಾಲಘಟ್ಟದಲ್ಲಿ ಮಳೆ ಬಾರದೇ ಹೋದಾಗ ದೇಶ ಬಹುಪಾಲು ಬರಗಾಲದಲ್ಲಿ ಮುಳುಗುತ್ತದೆ. ಕಳೆದ ಶತಮಾನದಲ್ಲಿ ಭಾರತ ಎದುರಿಸಿದ 23 ಬರಗಾಲಗಳಲ್ಲಿ 10ಕ್ಕೆ ಕಾರಣ ಇಎಲ್​ ಗೈರು ಎಂದು ತಿಳಿದು ಬಂದಿದೆ. ಹಾಗಾದರೆ, ಇನ್ನುಳಿದ ಬರಗಳಿಗೆ ಏನು ಕಾರಣವಿರಬಹುದು?

ಆಗಸ್ಟ್ ಅಂತ್ಯದಲ್ಲಿ ಮಳೆ ಹಠಾತ್ತನೆ ಕುಸಿದಿದ್ದು, ಬರಗಾಲಕ್ಕೆ ಕಾರಣವಾಯ್ತು ಎಂದು ಐಐಎಸ್​ಸಿ ಅಧ್ಯಯನವು ತೋರಿಸುತ್ತದೆ. ಈ ಕುಸಿತವು ಉತ್ತರ ಅಟ್ಲಾಂಟಿಕ್ ಮಹಾಸಾಗರದ ಮಿಡ್‌ಲ್ಯಾಟಿಟ್ಯೂಡ್( ಮಧ್ಯ ಅಕ್ಷಾಂಶ) ಪ್ರದೇಶದಲ್ಲಿನ ವಾತಾವರಣದಲ್ಲಿ ಆದ ಅಡಚಣೆಯಿಂದಾಗಿ ಆಗಿದೆ ಎಂದು ವಿಶ್ಲೇಷಿಸಲಾಗಿದೆ.

"1980ರ ದಶಕದ ಹಿಂದೆಯೇ, ಜನರು ಈ ಬರಗಳನ್ನು ಪ್ರತ್ಯೇಕವಾಗಿ ನೋಡಿದ್ದಾರೆ. ಆದರೆ, ಅವುಗಳು ಒಟ್ಟಿಗೆ ಪರಿಗಣಿಸಿಲ್ಲ. ಈ ಬರಗಳು ಇಎಲ್ ನಿನೋ ಬರಗಳಿಗಿಂತ ವಿಭಿನ್ನ ರೀತಿಯ ವಿಕಾಸಕ್ಕೆ ಕಾರಣವಾಗಿರಬಹುದು ಹಾಗೇ ಅವಕ್ಕೆಲ್ಲ ಸಾಮಾನ್ಯ ಕಾರಣವೂ ಇರಬಹುದು. ಇದು ಈ ಮಿಡ್‌ಲ್ಯಾಟಿಟ್ಯೂಡ್ ವಾತಾವರಣ ಅಡಚಣೆಯ ಪ್ರಭಾವವಾಗಿದೆ” ಎಂದು ಸಿಎಒಎಸ್‌ನ ಸಹಾಯಕ ಪ್ರಾಧ್ಯಾಪಕ ವಿ. ವೇಣುಗೋಪಾಲ್ ಹೇಳುತ್ತಾರೆ.

ABOUT THE AUTHOR

...view details