ಬೆಂಗಳೂರು:ರಾಜ್ಯದ 'ಶಾಸಕರ ಖರೀದಿ'ಯು ದೇಶದಲ್ಲಿ ನಡೆದ ಅತಿದೊಡ್ಡ ಹಗರಣಗಳಲ್ಲೊಂದು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.
'ಶಾಸಕರ ಖರೀದಿ' ದೇಶದ ಅತಿದೊಡ್ಡ ಹಗರಣಗಳಲ್ಲೊಂದು: ದಿನೇಶ್ ಗುಂಡೂರಾವ್
'ಶಾಸಕರ ಖರೀದಿ'ಯು ದೇಶದ ಅತಿದೊಡ್ಡ ಹಗರಣಗಳಲ್ಲೊಂದು. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹಾಗೂ ಪ್ರಧಾನಿ ಮೋದಿಯವರೇ ಈ ಹಣದ ಮೂಲವೇನು? ಎಂದು ಗುಂಡೂರಾವ್ ಪ್ರಶ್ನೆ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಕೇಂದ್ರದ ಬಿಜೆಪಿ ಸರ್ಕಾರದ ನೋಟು ರದ್ದು ಹಗರಣ, ರಫೇಲ್ ಹಗರಣ, ಫಸಲ್ ಭೀಮಾ ಯೋಜನೆಯ ಹಗರಣ ಬಳಿಕ ದೇಶದಲ್ಲಿ ನಡೆದ ಅತಿದೊಡ್ಡ ಹಗರಣವೇ 'ಶಾಸಕರ ಖರೀದಿ'ಯಾಗಿದೆ. ಬಿಜೆಪಿ ನೇತೃತ್ವದ ಸರ್ಕಾರಗಳ ರಚನೆಗೆ ದೇಶದಾದ್ಯಂತ ಶಾಸಕರ ಖರೀದಿಗೆ 1000 ಕೋಟಿ ಹಣ ಖರ್ಚು ಮಾಡಿರುವರೆಂದು ವರದಿಯಾಗಿದೆ. ವ್ಯಾಪಾರಿಗಳಾದ ಅಮಿತ್ ಶಾ ಹಾಗೂ ಪ್ರಧಾನಿ ಮೋದಿಯವರೇ ಈ ಹಣದ ಮೂಲವೇನು? ಎಂದು ಗುಂಡೂರಾವ್ ಆಗ್ರಹಿಸಿದ್ದಾರೆ.
ಹಾಗೆಯೇ ಇನ್ನೊಂದು ಟ್ಟೀಟ್ ಮಾಡಿರುವ ಅವರು, ನಮ್ಮ ಬೆನ್ನಿಗೆ ಇರಿದಿರುವ ಕಾಂಗ್ರೆಸ್ ಶಾಸಕರು ಈ ಎಲ್ಲ ಬೆಳವಣಿಗೆಗಳನ್ನು ಕಂಡು ಭಯಭೀತರಾಗಬೇಕು. ಅವರ ಅದೃಷ್ಟ ಏನೇ ಇರಲಿ, ಒಂದು ವಿಷಯ ಬಹಳ ಸ್ಪಷ್ಟವಾಗಿದೆ, ಎಂದೆಂದಿಗೂ ಕಾಂಗ್ರೆಸ್ ಪಕ್ಷದಲ್ಲಿ ಅವರಿಗೆ ಸ್ಥಾನವಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.