ಕರ್ನಾಟಕ

karnataka

ಶಾಸಕ ಬೈರತಿ ಬಸವರಾಜುಗೆ ಸೇಬಿನ ಹಾರ ಹಾಕಿ ಅಭಿನಂದಿಸಿದ ಬಿಜೆಪಿ ಕಾರ್ಯಕರ್ತರು

ಬೆಂಗಳೂರಿನ ಕೆಆರ್‌ಪುರಂ ಕ್ಷೇತ್ರದ ನೂತನ ಬಿಜೆಪಿ ಶಾಸಕ ಬೈರತಿ ಬಸವರಾಜ್​ಗೆ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಸೇಬಿನ ಹಾರ ಹಾಕಿ ಅಭಿನಂದನೆ ಸಲ್ಲಿಸಿದರು.

By

Published : Dec 15, 2019, 2:30 PM IST

Published : Dec 15, 2019, 2:30 PM IST

Updated : Dec 15, 2019, 4:48 PM IST

bjp Activists tribute to MLA Birathi Basavaraja k.r.pete
ಶಾಸಕ ಬೈರತಿ ಬಸವರಾಜ

ಬೆಂಗಳೂರು:ಉಪ ಚುನಾವಣೆಯ ಗೆಲುವಿನ ಬಳಿಕ ಶಾಸಕ ಬೈರತಿ ಬಸವರಾಜುಗೆ ರಾಮಮೂರ್ತಿ ನಗರದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಸೇಬುವಿನ ಹಾರ ಹಾಕುವ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.

ಬಳಿಕ ಮಾತನಾಡಿದ ಶಾಸಕ ಬೈರತಿ ಬಸವರಾಜು, ಒಗ್ಗಟ್ಟಿನಲ್ಲಿ ಬಲವಿದೆ ಎಂಬುವುದಕ್ಕೆ ಕಾರ್ಯಕರ್ತರೇ ಸಾಕ್ಷಿ. ಕ್ಷೇತ್ರದ ಅಭಿವೃದ್ಧಿಗೆ ಯೋಜನೆ ರೂಪಿಸಿ, ಹಂತ ಹಂತವಾಗಿ ಅಭಿವೃದ್ಧಿ ಪಡಿಸುತ್ತೇನೆ. ಮುಂದಿನ ಮೂರೂವರೆ ವರ್ಷಗಳಲ್ಲಿ ಮೂಲ ಸೌಕರ್ಯಗಳಿಗೆ ಹೆಚ್ಚು ಒತ್ತು ನೀಡಲಾಗುವುದು. ಉಪಚುನಾವಣೆಯಲ್ಲಿ ಗೆಲುವಿಗೆ ಶ್ರಮಿಸಿದ ಮುಖಂಡರಿಗೆ ಹಾಗೂ ಕಾರ್ಯಕರ್ತರಿಗೆ ಧನ್ಯವಾದ ಎಂದು ಹೇಳಿದರು.

ಶಾಸಕ ಬೈರತಿ ಬಸವರಾಜ

ಮಾಜಿ ಶಾಸಕ ನಂದೀಶ್ ರೆಡ್ಡಿ ಮಾತನಾಡಿ, ಪಕ್ಷದ ತೀರ್ಮಾನದಂತೆ ನಾವಿಬ್ಬರು ಜೊತೆಯಾಗಿ ಚುನಾವಣೆಯಲ್ಲಿ ಕೆಲಸ ಮಾಡಿದ್ದೇವೆ. ಒಂದು ಕುಟುಂಬದ ಸದಸ್ಯರಂತೆ ಅಭಿವೃದ್ಧಿಗೆ ಒಟ್ಟಾಗಿ ಶ್ರಮಿಸಬೇಕು. ರಾಮಮೂರ್ತಿ ನಗರ ವಾರ್ಡ್​ನಲ್ಲಿ 10 ಸಾವಿರ ಅಂತರ ಬರಲು ಎಲ್ಲಾ ಮುಖಂಡರ ಕಾರ್ಯಕರ್ತರ ಶ್ರಮವಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಖಾಲಿ ಮಾಡಿಸಿ, ಬಿಜೆಪಿ ಶಾಶ್ವತವಾಗಬೇಕು. ಬೈರತಿ ಬಸವರಾಜುಗೆ ಸಚಿವ ಸಂಪುಟದಲ್ಲಿ ಉತ್ತಮವಾದ ಖಾತೆ ದೊರಕಲಿ ಎಂದು ಅಭಿನಂದಿಸಿದರು.

ಪಾಲಿಕೆ ಸದಸ್ಯೆ ಪದ್ಮಾವತಿ ಶ್ರೀನಿವಾಸ್, ಮುಖಂಡರಾದ ಶಾಂತ ಕೃಷ್ಣಮೂರ್ತಿ, ಮುನೇಗೌಡ, ಮಧುಗೌಡ, ಹಿಟಾಚಿ ಮಂಜುನಾಥ್ ಇದ್ದರು.

Last Updated : Dec 15, 2019, 4:48 PM IST

ABOUT THE AUTHOR

...view details