ಬೆಂಗಳೂರು:ಬೆಡ್ ಬುಕ್ಕಿಂಗ್ ದಂಧೆ ಬಯಲು ಮಾಡಿದ್ದ ಸಂಸದ ತೇಜಸ್ವಿ ಸೂರ್ಯ ಮೇ 4 ರಂದು ಒಂದೇ ಕೋಮಿನ 17 ಜನ ಸಿಬ್ಬಂದಿಯ ಹೆಸರನ್ನು ಬಹಿರಂಗಪಡಿಸಿದ್ದರು. ಬಳಿಕ ಆ 17 ಜನರನ್ನು ಬಿಬಿಎಂಪಿ ಕೆಲಸದಿಂದ ವಜಾಗೊಳಿಸಿತ್ತು. ಈಗ ಆ 17 ಸಿಬ್ಬಂದಿಯರನ್ನು ಬಿಬಿಎಂಪಿ ಮತ್ತೆ ಮರು ನೇಮಕ ಮಾಡಿಕೊಂಡಿದೆ.
ಗದ್ದಲ ಉಂಟಾದ ಹಿನ್ನಲೆ ಖಾಸಗಿ ಏಜೆನ್ಸಿಯವರು ಆ 17 ಜರನ್ನು ಪೂರ್ವ ಹಾಗೂ ಆರ್ಆರ್ ನಗರ ವಲಯದ ವಾರ್ ರೂಂಗಳಿಗೆ ಸ್ಥಳಾಂತರಿಸಿದ್ದರು. ಸದ್ಯ ಗೊಂದಲಗಳು ನಿವಾರಣೆಯಾಗಿದ್ದು, ಪೊಲೀಸ್ ವಿಚಾರಣೆ ನಡೆಯುತ್ತಿರುವುದರಿಂದ ಈ ಹದಿನೇಳು ಜನ ಸಿಬ್ಬಂದಿಯರನ್ನು ಮತ್ತೆ ದಕ್ಷಿಣ ವಲಯದ 6 ವಿಧಾನಸಭಾ ಕ್ಷೇತ್ರವಾರು ಇರುವ ವಾರ್ ರೂಂಗಳಿಗೆ ನಿಯೋಜನೆ ಮಾಡಲಾಗಿದೆ.
ಓದಿ:ಖಾಸಗಿ ಆ್ಯಂಬುಲೆನ್ಸ್ಗಳ ದುಪ್ಪಟ್ಟು ಹಣ ವಸೂಲಿಗೆ ಕಡಿವಾಣ ಸಂಬಂಧ ಸುಧಾಕರ್, ಸವದಿ ಚರ್ಚೆ
ಬೆಡ್ ಬುಕ್ಕಿಂಗ್, ಖಾಸಗಿ ಬೆಡ್ ಗಳ ಮಾಹಿತಿ, ಭರ್ತಿ ವಿಚಾರಗಳ ಕೆಲಸದ ಬದಲು ಅವರಿಗೆ ಸೋಂಕಿತರ ಕಾಂಟ್ಯಾಕ್ಟ್ ಟ್ರೇಸಿಂಗ್ ಮಾಡುವ ಕೆಲಸಗಳಿಗೆ ಮರುನಿಯೋಜನೆ ಮಾಡಲಾಗಿದೆ.
ಈವರೆಗೆ ದಕ್ಷಿಣ ವಲಯದ ಸೆಂಟ್ರಲ್ ರೂಂನಲ್ಲಿ ಕೆಲಸ ಮಾಡುತ್ತಿದ್ದವರನ್ನು ಅನಗತ್ಯ ಗೊಂದಲ ಅಥವಾ ಗಲಾಟೆ ಬೇಡ ಎಂದು ಕಾಂಟ್ಯಾಕ್ಟ್ ಟ್ರೇಸಿಂಗ್ ಕೆಲಸಕ್ಕೆ ನಿಯೋಜಿಸಲಾಗಿದೆ.