ಕರ್ನಾಟಕ

karnataka

ETV Bharat / state

ಪತ್ನಿ ನಟಿಸಿರುವ "ಆದಿಲಕ್ಷ್ಮಿ ಪುರಾಣ" ಟ್ರೈಲರ್​​ ಲಾಂಚ್​​​ ಮಾಡಿದ ಯಶ್

ಬೆಂಗಳೂರಿನ ಕಲಾವಿದರ ಸಂಘದಲ್ಲಿ ನಡೆದ ಟ್ರೇಲರ್​​ ಬಿಡುಗಡೆ ಕಾರ್ಯಕ್ರಮಕ್ಕೆ  ರಾಧಿಕಾ ಪಂಡಿತ್​ರೊಂದಿಗೆ ರಾಕಿಂಗ್ ಸ್ಟಾರ್ ಯಶ್ ಆಗಮಿಸಿ ಚಿತ್ರದ ಟ್ರೇಲರನ್ನು ಲಾಂಚ್ ಮಾಡಿ ಚಿತ್ರತಂಡಕ್ಕೆ ವಿಶ್ ಮಾಡಿದರು.

By

Published : Jul 13, 2019, 9:04 AM IST

Updated : Jul 13, 2019, 12:12 PM IST

ಪತ್ನಿ ನಟಿಸುರುವ "ಆದಿಲಕ್ಷ್ಮಿ ಪುರಾಣ" ಟ್ರೈಲರ್ ಲಾಂಚ್​ ಮಾಡಿದ ಯಶ್

ಸ್ಯಾಂಡಲ್​ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ಮದುವೆಯಾದ ನಂತರ ಅಭಿನಯಿಸಿರುವ ಮೊದಲನೇ ಚಿತ್ರ ಆದಿಲಕ್ಷ್ಮಿ ಪುರಾಣ ಇದೇ ತಿಂಗಳ 19ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

ಪತ್ನಿ ನಟಿಸುರುವ "ಆದಿಲಕ್ಷ್ಮಿ ಪುರಾಣ" ಚಿತ್ರದ ಟ್ರೇಲರ್​ ಲಾಂಚ್​ ಮಾಡಿದ ಯಶ್

ಇನ್ನು ಚಿತ್ರದ ಪ್ರಮೋಷನ್​​ಅಲ್ಲಿ ಚಿತ್ರತಂಡ ಸಖತ್ ಬ್ಯುಸಿಯಾಗಿದ್ದು, ಈ ಗ್ಯಾಪ್​​ನಲ್ಲಿ ಚಿತ್ರದ ಟ್ರೇಲರ್​ ಬಿಡುಗಡೆ ಮಾಡಲಾಗಿದೆ. ನಗರದ ಕಲಾವಿದರ ಸಂಘದಲ್ಲಿ ನಡೆದ ಟ್ರೇಲರ್​ ಬಿಡುಗಡೆ ಕಾರ್ಯಕ್ರಮಕ್ಕೆ ರಾಧಿಕಾ ಪಂಡಿತ್​ರೊಂದಿಗೆ ರಾಕಿಂಗ್ ಸ್ಟಾರ್ ಯಶ್ ಆಗಮಿಸಿ ಚಿತ್ರದ ಟ್ರೇಲರನ್ನು ಲಾಂಚ್ ಮಾಡಿ ಚಿತ್ರತಂಡಕ್ಕೆ ವಿಶ್ ಮಾಡಿದರು. ಅಲ್ಲದೇ, ಆದಿಲಕ್ಷ್ಮಿ ಪುರಾಣ ಚಿತ್ರಕಥೆ ನನಗೆ ತುಂಬಾ ಇಷ್ಟ ಆಗಿತ್ತು. ಕಥೆ ಕೇಳಿದ ರಾಕ್​​ಲೈನ್ ವೆಂಕಟೇಶ್ ಅವರು ತುಂಬಾ ಇಷ್ಟಪಟ್ಟು ಆದಿಲಕ್ಷ್ಮಿ ಪುರಾಣ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಅದರಲ್ಲೂ ಈ ಚಿತ್ರದಲ್ಲಿ ರಾಧಿಕಾ ಪಂಡಿತ್ ಅಭಿನಯಿಸಿರುವುದು ನನಗೆ ತುಂಬಾ ಖುಷಿ ತಂದಿದೆ ಎಂದರು ಯಶ್​.

ಇನ್ನು ಇದೇ ವೇಳೆ ಮಾತನಾಡಿದ ರಾಧಿಕಾ ಪಂಡಿತ್​, ಆದಿಲಕ್ಷ್ಮಿ ಪುರಾಣ ಚಿತ್ರದ ಟ್ರೇಲರ್​​ ನನಗೆ ತುಂಬಾ ಸ್ಪೆಷಲ್. ಯಾಕಂದ್ರೆ, ನನ್ನ ಹಸ್ಬೆಂಡ್ ಚಿತ್ರದ ಟ್ರೇಲರ್​​ ಬಿಡುಗಡೆ ಮಾಡಿರುವುದು ನನಗೆ ತುಂಬಾ ಖುಷಿ ಕೊಟ್ಟಿದೆ ಎಂದರು. ಇನ್ನು ಚಿತ್ರದಲ್ಲಿ ನನ್ನ ಪಾತ್ರ ತುಂಬಾ ವಿಶೇಷವಾಗಿದೆ. ಇದೊಂದು ಬೇರೆ ತರಹದ ಸಿನಿಮಾವೆನಿಸಲಿದೆ ಎಂದರು.

ಟ್ರೇಲರ್​​ ಬಿಡುಗಡೆ ಕಾರ್ಯಕ್ರಮಕ್ಕೆ ಹಿರಿಯ ನಟ ದೊಡ್ಡಣ್ಣ, ಸುಚೇಂದ್ರ ಪ್ರಸಾದ್, ತಾರಾ ಸೇರಿದಂತೆ ಇಡೀ ಚಿತ್ರತಂಡವೇ ಭಾಗಿಯಾಗಿತ್ತು. ಇನ್ನು ಆದಿಲಕ್ಷ್ಮಿ ಪುರಾಣ ಚಿತ್ರವನ್ನು ಸ್ಟಾರ್ ಡೈರೆಕ್ಟರ್ ಮಣಿರತ್ನಂ ಅವರ ಸಹಾಯಕ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸಿರುವ ಪ್ರಿಯಾ ಅವರು ಮೊದಲ ಬಾರಿಗೆ ಕನ್ನಡದಲ್ಲಿ ನಿರ್ದೇಶನ ಮಾಡಿದ್ದಾರೆ.

ಇನ್ನು ಚಿತ್ರದಲ್ಲಿ ರಾಧಿಕಾ ಪಂಡಿತ್ ನಾಯಕಿಯಾದರೆ, ರಂಗಿತರಂಗ ಖ್ಯಾತಿಯ ಭಂಡಾರಿ ನಾಯಕನಾಗಿ ನಟಿಸಿದ್ದಾರೆ. ಇನ್ನು ಆದಿಲಕ್ಷ್ಮಿ ಪುರಾಣ ಪ್ರಸ್ತುತ ಸಮಾಜದಲ್ಲಿ ಯುವಜನತೆಯ ಮೇಲೆ ಪ್ರಭಾವ ಬೀರಿರುವ ಮಾದಕ ವಸ್ತುಗಳ ಸಮಸ್ಯೆ ಆಧಾರಿತ ಸಿನಿಮಾವಾಗಿದೆ. ಈ ಚಿತ್ರದ ಮೂಲಕ ಸಮಾಜಕ್ಕೆ ಒಂದು ಸಂದೇಶ ಕೊಡಲು ನಿರ್ದೇಶಕಿ ಪ್ರಿಯಾ ಹೊರಟಿದ್ದಾರೆ.

ಈ ಚಿತ್ರದ ಹಾಡುಗಳು ಈಗಾಗಲೇ ಜನರಿಂದ ಮೆಚ್ಚುಗೆ ಪಡೆದಿದ್ದು, ಎಲ್ಲರ ಬಾಯಲ್ಲೂ ಗುನುಗುತ್ತಿವೆ. ರಂಗಿತರಂಗ ಚಿತ್ರದ ನಂತರ ಅನೂಪ್ ಭಂಡಾರಿ ಈ ಚಿತ್ರಕ್ಕೆ ಸಂಗೀತ ನೀಡುವುದರ ಜೊತೆಗೆ ಸಾಹಿತ್ಯವನ್ನು ಬರೆದಿದ್ದು, ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ಇದೇ ತಿಂಗಳ 19ಕ್ಕೆ ಆದಿಲಕ್ಷ್ಮಿ ಪುರಾಣ ಥಿಯೇಟರ್​ಗೆ ಲಗ್ಗೆ ಇಡಲಿದ್ದು, ಬಾಕ್ಸಾಫೀಸ್​​ನಲ್ಲಿ ಕಮಾಲ್ ಮಾಡುತ್ತಾ ಕಾದು ನೋಡಬೇಕಿದೆ.

Last Updated : Jul 13, 2019, 12:12 PM IST

For All Latest Updates

TAGGED:

ABOUT THE AUTHOR

...view details