ಕರ್ನಾಟಕ

karnataka

ETV Bharat / state

ಗನ್ ಮ್ಯಾನ್ ನೀಡುವಂತೆ ಗೃಹ ಸಚಿವರಿಗೆ ನಟ ಚೇತನ್ ಮನವಿ

ವಿವಾದಾತ್ಮಕ ಟ್ವೀಟ್​ ಹಿನ್ನೆಲೆಯಲ್ಲಿ ನ್ಯಾಯಾಂಗ ಬಂಧನದ ಬಳಿಕ ನಟ ಚೇತನ್ ಅವರಿಗೆ ನೀಡಲಾಗಿದ್ದ ಗನ್​ ಮ್ಯಾನ್ ವಾಪಸ್ ಪಡೆಯಲಾಗಿದೆ. ಆದರೆ ತಮಗೆ ಜೀವ ಬೆದರಿಕೆ ಇರುವುದರಿಂದ ಇಬ್ಬರು ಗನ್ ಮ್ಯಾನ್ ಅಗತ್ಯವಿದ್ದು, ವ್ಯವಸ್ಥೆ ಕಲ್ಪಿಸುವಂತೆ ನಟ ಚೇತನ್ ಗೃಹ ಸಚಿವರಿಗೆ ಮನವಿ ಮಾಡಿದ್ದಾರೆ.

By

Published : Mar 15, 2022, 11:13 AM IST

Actor Chetan appeals to Home Minister
ನಟ ಚೇತನ್ ಹಾಗೂ ಆರಗ ಜ್ಞಾನೇಂದ್ರ

ಬೆಂಗಳೂರು:ನ್ಯಾಯಾಂಗ ಬಂಧನದಿಂದ ಜಾಮೀನಿನ ಮೇಲೆ ಹೊರ ಬಂದ ಮೇಲೆ ತಮಗೆ ನೀಡಲಾಗಿದ್ದ ಗನ್ ಮ್ಯಾನ್ ಹಿಂಪಡೆದಿರುವುದರಿಂದ, ಪುನಃ ಗನ್ ಮ್ಯಾನ್ ಭದ್ರತೆ ನೀಡುವಂತೆ ನಟ ಚೇತನ್ ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಭೇಟಿಯಾಗಿ ಮನವಿ ಮಾಡಿದ್ದಾರೆ.

ಗೌರಿ ಲಂಕೇಶ್ ಹತ್ಯೆಯ ಬಳಿಕ ಚೇತನ್ ಅವರಿಗೆ ಗನ್‌ ಮ್ಯಾನ್ ವ್ಯವಸ್ಥೆ ನೀಡಲಾಗಿತ್ತು. ಇತ್ತೀಚೆಗೆ ತಮ್ಮ ಆಕ್ಷೇಪಾರ್ಹ ಟ್ವೀಟ್ ಕಾರಣದಿಂದ ನ್ಯಾಯಾಂಗ ಬಂಧನಕ್ಕೊಳಗಾಗಿದ್ದ ಚೇತನ್ ಜಾಮೀನು ಪಡೆದು ಹೊರಬಂದಿದ್ದಾರೆ. ಆದರೆ, ಚೇತನ್​​ಗೆ ನೀಡಲಾಗಿದ್ದ ಗನ್ ಮ್ಯಾನ್ ಸೌಲಭ್ಯವನ್ನ ಗೃಹ ಇಲಾಖೆ ಹಿಂಪಡೆದಿದೆ. ತಮಗೆ ಜೀವ ಬೆದರಿಕೆಯಿರುವುದರಿಂದ ಇಬ್ಬರು ಗನ್ ಮ್ಯಾನ್ ಅಗತ್ಯವಿದ್ದು, ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿರುವುದಾಗಿ ಚೇತನ್ ತಿಳಿಸಿದ್ದಾರೆ.

ಇದನ್ನೂ ಓದಿ:ಅವಹೇಳನಕಾರಿ ಹೇಳಿಕೆ: ನಟ ಚೇತನ್ ವಿರುದ್ಧ ಚಾರ್ಜ್​​​​ಶೀಟ್ ಸಲ್ಲಿಕೆಗೆ ಅನುಮತಿ ಕೇಳಿದ ಪೊಲೀಸರು

ABOUT THE AUTHOR

...view details