ಕರ್ನಾಟಕ

karnataka

ಸಿಲಿಕಾನ್​ ಸಿಟಿ ರೌಡಿಗಳಿಗೆ ಸಿಸಿಬಿ ಶಾಕ್​​​​: 7 ಮಂದಿ ಮೇಲೆ ಗೂಂಡಾ ಕಾಯ್ದೆ

ರಾಜಧಾನಿಯಲ್ಲಿ ರಾಜಾರೋಷವಾಗಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ 7 ಮಂದಿ ರೌಡಿಗಳಿಗೆ ಸಿಸಿಬಿ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಇವರೆಲ್ಲರನ್ನೂ ಗೂಂಡಾ ಕಾಯ್ದೆಯಡಿ ಬಂಧಿಸಲಾಗಿದ್ದು, ವಿಚಾರಣೆ ನಡೆಸಿದ್ದಾರೆ.

By

Published : Oct 1, 2020, 12:48 PM IST

Published : Oct 1, 2020, 12:48 PM IST

7 rowdies Arrested in Bangalore in goonda act by CCB Police
7 ಮಂದಿ ಗೂಂಡಾ ಕಾಯ್ದೆಯಡಿ ಬಂಧನ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ರೌಡಿ ಚಟುವಟಿಕೆ ನಿಯಂತ್ರಣಕ್ಕೆ ತರಲು ನಗರ ಪೊಲೀಸರು ಮುಂದಾಗಿದ್ದು, ಒಂದೇ ತಿಂಗಳಲ್ಲಿ 7 ರೌಡಿಗಳ ಮೇಲೆ ಗೂಂಡಾ ಕಾಯ್ದೆ ಹಾಕಿ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ವಿನಯ್ ಕುಮಾರ್ ಮಿಂಡ, ದಯಾನಂದ್ ಅಮಿಯಾಸ್‌ನಂದ, ಶ್ರೀಕಾಂತ ಅಲಿಯಾಸ್ ಊಸ, ಖಲೀಲ್ ಅಹಮ್ಮದ್ ಅಲಿಯಾಸ್​​​ ಡೈನಮೆಂಟ್ ಖಲೀಲ್, ಸುಹೇಲ್ ಅಲಿಯಾಸ್ ಗಾರ್ಡನ್, ರಿಜ್ವಾನ್ ಕುಳ್ಳ ಅಲಿಯಾಸ್ ರಿಜ್ವಾ, ಅನಿಸ್ ಅಹಮ್ಮ ಗೂಂಡಾ ಕಾಯ್ದೆಯಡಿ ಉಲ್ಲೇಖವಾದ ಹೆಸರುಗಳು.

ನಗರದಲ್ಲಿ ರೌಡಿಗಳು ಕಾನೂನು ಬಾಹಿರ ಚಟುವಟಿಕೆಗಳನ್ನು ಮುಂದುವರೆಸಬಾರದೆಂದು ಕೇಂದ್ರ ವಿಭಾಗ, ಉತ್ತರ ವಿಭಾಗ, ದಕ್ಷಿಣ ವಿಭಾಗದಲ್ಲಿ ಕಾನೂನು ಬಾಹಿರ ಚಟುವಟಿಕೆ ನಡೆಸುತ್ತಿದ್ದ ಆರೋಪದ ಮೇರೆಗೆ ಗೂಂಡಾ ಕಾಯ್ದೆಯಡಿಯಲ್ಲಿ ಬಂಧಿಸಿದ್ದಾರೆ.

ವಿನಯ್ ಕುಮಾರ್ ಅಲಿಯಾಸ್ ಮಿಂಡ, ಈತ ಕಳೆದ 10 ವರ್ಷಗಳಿಂದ ಮಹಾಲಕ್ಷ್ಮಿ ಲೇಔಟ್, ರಾಜಗೋಪಲನಗರ, ನಂದಿನಿ ಲೇಔಟ್ ವ್ಯಾಪ್ತಿಯಲ್ಲಿ 17 ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದ್ದ. ಹೀಗಾಗಿ 2015ರಲ್ಲಿ ಒಂದು ವರ್ಷ ಗೂಂಡಾ ಕಾಯ್ದೆಯಡಿ ಬಂಧಿಸಿ ಬಿಡುಗಡೆ ಮಾಡಿದ ನಂತರ ಕಳೆದ 3 ವರ್ಷದಲ್ಲಿ 6 ಗಂಭೀರ ಕೃತ್ಯದಲ್ಲಿ ಭಾಗಿಯಾಗಿದ್ದಾನೆ.

ದಯಾನಂದ್ ಅಲಿಯಾಸ್ ನಂದ, ಈತ ಅಶೋಕನಗರ ಮತ್ತು ಕೋರಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ 7 ವರ್ಷಗಳಿಂದ ನಿರಂತರವಾಗಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಒಟ್ಟು 13 ಪ್ರಕರಣ ಈತನ ಮೇಲಿದೆ.

ಶ್ರೀಕಾಂತ ಅಲಿಯಾಸ್ ಊಸ, ಈತ 2012ರಿಂದ ವೈಯಾಲಿಕಾವಲ್, ಮಲ್ಲೇಶ್ವರ ಸೇರಿ ಹಲವೆಡೆ 15 ಪ್ರಕರಣ ಈತನ ಮೇಲಿದೆ.

ಖಲೀಲ್ ಅಹಮದ್ ಅಲಿಯಾಸ್ ಡೈನಮೆಂಟ್ ಖಲೀಲ್, 2006ರಿಂದ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಸುಲಿಗೆ, ಹಲ್ಲೆ, ಅಪಹರಣ, ಆರ್ಮ್ಸ್ ಆ್ಯಕ್ಟ್ ಅಪರಾಧ ಪ್ರಕರಣ ದಾಖಲಾಗಿದೆ.

ಸುಹೇಲ್ ಅಲಿಯಾಸ್ ಗಾರ್ಡನ್, ಈತ ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಸಾರ್ವಜನಿಕ ಆಸ್ತಿ ಪಾಸ್ತಿಗೆ ಹಾನಿ ಹಾಗೂ ಸುಮಾರು 7 ಪ್ರಕರಣದಲ್ಲಿ ಭಾಗಿಯಾಗಿದ್ದಾನೆ.

ರಿಜ್ವಾನ್ ಅಲಿಯಾಸ್ ಕುಳ್ಳ, 2004ರಿಂದ ಕೊಲೆ ಸುಲಿಗೆ ಒಟ್ಟು 14 ಗಂಭೀರ ಪ್ರಕರಣ ಈತನ ಮೇಲಿದೆ.

ಅನೀಸ್ ಅಹಮ್ಮದ್, ಈತ 2010ರಲ್ಲಿ ಕೊಲೆ, ದರೋಡೆ, ಅಪಹರಣ, ಪೊಲೀಸರ ಕೆಲಸಕ್ಕೆ ಅಡ್ಡಿ ಮಾಡಿರುವ ಆರೋಪ ಈತನ ಮೇಲಿದೆ.

ABOUT THE AUTHOR

...view details