ಕರ್ನಾಟಕ

karnataka

ETV Bharat / state

ಆನಂದ್ ಸಿಂಗ್ ಮೇಲೆ ಹಲ್ಲೆ ಆಕಸ್ಮಿಕ: ಶಾಸಕ ಗಣೇಶ್ ಸಮರ್ಥನೆ

ಶಾಸಕ ಆನಂದ್ ಸಿಂಗ್ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಕಂಪ್ಲಿ ಶಾಸಕ ಗಣೇಶ್ ಕೃತ್ಯವನ್ನು ಸಮರ್ಥಿಸಿಕೊಂಡಿದ್ದು, ಅದು ಆಕಸ್ಮಿಕ ಘಟನೆ ಎಂದು ಪೊಲೀಸ್ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.

By

Published : Feb 21, 2019, 12:24 PM IST

ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿಲ್ಲ, ಅದು ಆಕಸ್ಮಿಕ ಘಟನೆ: ಕಂಪ್ಲಿ ಶಾಸಕ ಗಣೇಶ್ ಸಮರ್ಥನೆ

ರಾಮನಗರ : ಈಗಲ್​​ಟನ್ ರೆಸಾರ್ಟ್​​ನಲ್ಲಿ ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಕಂಪ್ಲಿ ಶಾಸಕ ಗಣೇಶ್, ಇದು ಆಕಸ್ಮಿಕವಾಗಿ ನಡೆದ ಘಟನೆ ಎಂದು ಕೃತ್ಯವನ್ನು ಸಮರ್ಥಿಸಿಕೊಂಡಿದ್ದಾರೆ.

ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿಲ್ಲ, ಅದು ಆಕಸ್ಮಿಕ ಘಟನೆ: ಕಂಪ್ಲಿ ಶಾಸಕ ಗಣೇಶ್ ಸಮರ್ಥನೆ

ಆನಂಗ್ ಸಿಂಗ್ ಮೇಲೆ ನಾನು ಬೇಕಂತ ದೈಹಿಕ ಹಲ್ಲೆ ಮಾಡಿಲ್ಲ, ಅದು ಆಕಸ್ಮಿಕವಾಗಿ ನಡೆದ ಘಟನೆ. ಈ ಸಂದರ್ಭದಲ್ಲಿ ತನ್ವೀರ್ ಶೇಠ್, ಭೀಮಾನಾಯ್ಕ್, ಹರಿಹರ ಕ್ಷೇತ್ರದ ಶಾಸಕ ರಾಮಪ್ಪ ಸ್ಥಳದಲ್ಲಿದ್ದರು.

ವೈಯಕ್ತಿಕವಾಗಿ ನನಗೂ ಆನಂದ್​ಸಿಂಗ್​ಗೂ ಯಾವುದೇ ದ್ವೇಷವಿಲ್ಲ. ನಾನು ಯಾವುದೇ ರೀತಿಯ ಗಂಭೀರ ಹಾಗೂ ಮಾರಣಾಂತಿಕ ಹಲ್ಲೆ ನಡೆಸಿಲ್ಲ ಎಂದು ಪೊಲೀಸ್ ವಿಚಾರಣೆ ವೇಳೆ ಶಾಸಕ ಗಣೇಶ್ ಹೇಳಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ABOUT THE AUTHOR

...view details