ದೊಡ್ಡಬಳ್ಳಾಪುರ : ಗಾರ್ಮೆಂಟ್ಸ್ ಕೆಲಸ ಹೋಗುತ್ತಿದ್ದ ವ್ಯಕ್ತಿಯೊಬ್ಬರು ಅಲ್ಲಿನ ವೇತನ ತಾರತಮ್ಯದಿಂದ ಬೇಸತ್ತು ಕೃಷಿ ಪ್ರಾರಂಭಿಸಿದ್ದು, ಸದ್ಯ ಸೌತೆಕಾಯಿ ಕೃಷಿಯಲ್ಲಿ ತೊಡಗಿಸಿಕೊಂಡು ಯಶಸ್ಸು ಕಂಡಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ಗುಂಡಮಗೆರೆ ಗ್ರಾಮದ ಸಾಮಾನ್ಯ ರೈತ ನವೀನ್ ಕುಮಾರ್, ಒಂದು ಎಕರೆಯಲ್ಲಿ ಬೆಳೆದಿರುವ ಸೌತೆಕಾಯಿ ಬೆಳೆ ಅವರ ಜೀವನ ಶೈಲಿಯನ್ನು ಬದಲಾಯಿಸಿದೆ. ಪ್ರತಿ ಕೊಯ್ಲಿನಲ್ಲಿ ಸರಾಸರಿ 2 ಟನ್ ಸೌತೆಕಾಯಿ ಇಳುವರಿ ತೆಗೆಯುತ್ತಿದ್ದಾರೆ. ಪ್ರತಿಕೂಲ ವಾತಾವರಣದಲ್ಲೂ ಉತ್ತಮ ಇಳುವರಿ ಬಂದಿರುವುದು, ಜೊತೆಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ದೊರೆತಿರುವುದರಿಂದ ಇಂದು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಕೃಷಿಯಲ್ಲಿ ಬಂದ ಲಾಭದಲ್ಲಿ ಡ್ಯೂಪ್ಲೆಕ್ಸ್ ಮನೆ ಕಟ್ಟಿದ್ದಲ್ಲದೆ, ಕಾರು ಮತ್ತು ತರಕಾರಿ ಸಾಗಾಟಕ್ಕೆ ವಾಹನವನ್ನು ಖರೀದಿ ಮಾಡಿದ್ದಾರೆ.
ಗಾರ್ಮೆಂಟ್ಸ್ ಕೆಲಸ ಬಿಟ್ಟು ಸೌತೆ ಕೃಷಿ :ನವೀನ್ ಕುಮಾರ್ ಮೊದಲಿಗೆ ಗಾರ್ಮೆಂಟ್ಸ್ ಕೆಲಸಕ್ಕೆ ಹೋಗುತ್ತಿದ್ದರು. ಆದರೆ ಅಲ್ಲಿನ ವೇತನ ತಾರತಮ್ಯಕ್ಕೆ ಬೇಸತ್ತು ಅಪ್ಪ ಮಾಡುತ್ತಿದ್ದ ಬೇಸಾಯ ಪ್ರಾರಂಭಿಸಿದರು. ತರಕಾರಿ ಬೆಳೆಗಳಾದ ಟೊಮೆಟೊ, ಬದನೆಕಾಯಿ, ಎಲೆಕೋಸು, ಸೌತೆಕಾಯಿ ಬೆಳೆಯುತ್ತಿದ್ದರು.