ಬಾಗಲಕೋಟೆ:ಕುಡಿದ ಮತ್ತಿನಲ್ಲಿ ಮೊಬೈಲ್ ಟವರ್ ಏರಿದ ವ್ಯಕ್ತಿಯೋರ್ವ ಹೈಡ್ರಾಮಾ ನಡೆಸಿದ ಘಟನೆ ಜಿಲ್ಲೆಯ ಬೀಳಗಿ ತಾಲೂಕಿನ ಗಿರಿಸಾಗರ ಗ್ರಾಮದಲ್ಲಿ ನಡೆದಿದೆ.
ಮೊಬೈಲ್ ಟವರ್ ಏರಿದ ಕುಡುಕ.. 2 ಗಂಟೆಗಳ ಕಾಲ ಮನವೊಲಿಸಿ ರಕ್ಷಣೆ
ಹನಮಂತ ಎಂಬಾತ ಕುಡಿದು ಬಂದು ಮನೆಯಲ್ಲಿ ಜಗಳವಾಡಿ ಕೋಪದಿಂದ ಮೊಬೈಲ್ ಟವರ್ ಏರಿ ಕುಳಿತಿದ್ದ. ಯಾರೇ ಕರೆದರೂ ಬಾರದೇ ಮೇಲೆ ಕುಳಿತು ಆತಂಕ ಸೃಷ್ಟಿಸಿದ್ದ.
ಮೊಬೈಲ್ ಟವರ್
ಹನಮಂತ ಎಂಬಾತ ಕುಡಿದು ಬಂದು ಮನೆಯಲ್ಲಿ ಜಗಳವಾಡಿ ಕೋಪದಿಂದ ಮೊಬೈಲ್ ಟವರ್ ಏರಿ ಕುಳಿತಿದ್ದ. ಯಾರೇ ಕರೆದರೂ ಬಾರದೇ ಮೇಲೆ ಕುಳಿತು ಆತಂಕ ಸೃಷ್ಟಿಸಿದ್ದ.
ಘಟನೆಯ ಹಿನ್ನೆಲೆ ಸ್ಥಳಕ್ಕೆ ಬೀಳಗಿ ಪೊಲೀಸರು ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಜಂಟಿ ಕಾಯಾ೯ಚರಣೆ ನಡೆಸಿ, ಸತತ ಎರಡೂವರೆ ಗಂಟೆಗಳ ಕಾಲ ಆತನ ಮನವೊಲಿಸಿ ಬಳಿಕ ರಕ್ಷಣೆ ಮಾಡಲಾಗಿದೆ.