ಕರ್ನಾಟಕ

karnataka

By

Published : Oct 31, 2019, 4:38 PM IST

ETV Bharat / state

ಮುಂದೊಂದು ದಿನ ಮುರುಗೇಶ್​​ ನಿರಾಣಿ ಸಿಎಂ ಆಗ್ತಾರೆ: ಭವಿಷ್ಯ ನುಡಿದ ಸಹೋದರ ಸಂಗಮೇಶ್​

ಬಿಜೆಪಿ ಶಾಸಕರಾದ ಮುರಗೇಶ ನಿರಾಣಿ ಅವರು ಮುಂದೊಂದು ದಿನ ಈ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಉದ್ಯಮಿ ಹಾಗೂ ಮುರಗೇಶ್ ನಿರಾಣಿ ಸಹೋದರ ಸಂಗಮೇಶ ನಿರಾಣಿ ಭವಿಷ್ಯ ನುಡಿದಿದ್ದಾರೆ.

ಮುರುಗೇಶ್ ನಿರಾಣಿ ಮುಂದಿನ ಸಿಎಂ

ಬಾಗಲಕೋಟೆ: ಬಿಜೆಪಿ ಶಾಸಕರಾದ ಮುರಗೇಶ ನಿರಾಣಿ ಮುಂದೊಂದು ದಿನ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಉದ್ಯಮಿ ಹಾಗೂ ಮುರಗೇಶ್ ನಿರಾಣಿ ಸಹೋದರ ಸಂಗಮೇಶ ನಿರಾಣಿ ಭವಿಷ್ಯ ನುಡಿದಿದ್ದಾರೆ.

ಸಂಗಮೇಶ್​ ನಿರಾಣಿ, ಉದ್ಯಮಿ

ನಗರದ ಪ್ರೆಸ್​ ಕ್ಲಬ್​​ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುರಗೇಶ್​ ನಿರಾಣಿ ರಾಜ್ಯವನ್ನು ಅಭಿವೃದ್ಧಿ ಮಾಡಬೇಕು. ರೈತರ ಆದಾಯ ಹೆಚ್ಚಿಸಬೇಕು. ರಾಜ್ಯದ ಆರ್ಥಿಕ ಉತ್ಪಾದನೆ ಹೆಚ್ಚಾಗಬೇಕು ಎಂಬ ಸಂಕಲ್ಪ ಹೊತ್ತು ರಾಜಕೀಯದಲ್ಲಿ ಧುಮುಕಿದ್ದಾರೆ. ನಾಲ್ವಡಿ ಕೃಷ್ಣರಾಜ ಒಡೆಯರ್ ರಾಜ್ಯಕ್ಕೆ ಮಾದರಿ ಆಡಳಿತ ನೀಡಿದರು. ಅದೇ ರೀತಿಯಲ್ಲಿ ಮುರಗೇಶ್​ ನಿರಾಣಿ ಕೆಲಸ ಮಾಡಲಿದ್ದಾರೆ. ಮುಂದಿನ ದಿನಮಾನದಲ್ಲಿ ಮುಖ್ಯಮಂತ್ರಿ ಆಗುವ ಅರ್ಹತೆ ಇದ್ದು, ಮಾದರಿ ರಾಜ್ಯವನ್ನಾಗಿ ಮಾಡಲಿದ್ದಾರೆ ಎಂದರು.

ಬಾದಾಮಿಯಲ್ಲಿ ನಾಳೆ ನೂತನ ಸಕ್ಕರೆ ಕಾರ್ಖಾನೆ ಉದ್ಘಾಟನೆ ಆಗಲಿದ್ದು, ಸುಮಾರು 500 ಕೋಟಿಗೂ ಅಧಿಕ ವೆಚ್ಚದ ಆಧುನಿಕ ತಂತ್ರಜ್ಞಾನ ಒಳಗೊಂಡ ಸಕ್ಕರೆ ಕಾರ್ಖಾನೆ ಇದಾಗಿದೆ. ಇದರಿಂದ ಈ ಭಾಗದ ರೈತರಿಗೆ ಇನ್ನಷ್ಟು ಅನುಕೂಲವಾಗಲಿದೆ ಎಂದರು.

ABOUT THE AUTHOR

...view details