ಕರ್ನಾಟಕ

karnataka

ETV Bharat / state

ಮದುವೆಗೆ ಆಹ್ವಾನವಿಲ್ಲದಿದ್ದರೂ ಹಾಜರು ಈ ಅತಿಥಿ: ಇವನ 'ಕೋತಿ'ಯಾಟಕ್ಕೆ ಜನರ ಸ್ಥಿತಿ ಅಧೋಗತಿ

ಬಾಗಲಕೋಟೆ ನಗರದ ಎಪಿಎಂಸಿ ಆವರಣದಲ್ಲಿರುವ ಕಲ್ಯಾಣ ಮಂಟಪದಲ್ಲಿ ಮದುವೆ ಸಂಭ್ರಮವಿದ್ದಾಗ ಬ್ಯಾಂಡ್​ ಸೌಂಡ್​ ಕೇಳುತ್ತಿದ್ದಂತೆ ಕಪಿರಾಯ ಅಲ್ಲಿ ಪ್ರತ್ಯಕ್ಷನಾಗುತ್ತಾನಂತೆ. ಅಷ್ಟೇ ಅಲ್ಲದೆ, ಕುರ್ಚಿಯಿಂದ ಕುರ್ಚಿಗೆ ಜಿಗಿಯುತ್ತಾ ತುಂಟಾಟ ಮಾಡುತ್ತಿರುತ್ತಾನೆ. ಈತನ ತುಂಟಾಟಕ್ಕೆ ಜನರು ಕಂಗಾಲಾಗಿದ್ದಾರೆ.

By

Published : Dec 3, 2019, 12:32 PM IST

bagalakote
'ಕೋತಿ'ಯಾಟಕ್ಕೆ ಜನರ ಸ್ಥಿತಿ ಅಧೋಗತಿ

ಬಾಗಲಕೋಟೆ:ಮದುವೆ ಸಂಭ್ರಮವಿದ್ದರೂ ಕೋತಿಯ ಕಾಟದಿಂದ ಬೇಸತ್ತ ಜನರು ಕಂಗಾಲಾಗಿರುವ ಘಟನೆ ನಗರದ ಎಪಿಎಂಸಿ ಆವರಣದಲ್ಲಿರುವ ಕಲ್ಯಾಣ ಮಂಟಪದಲ್ಲಿ ನಡೆದಿದೆ.

ಕಲ್ಯಾಣ ಮಂಟಪದಲ್ಲಿ ಬ್ಯಾಂಡ್​ ಸೌಂಡ್​ ಕೇಳುತ್ತಿದ್ದಂತೆ ಕಪಿರಾಯ ಅಲ್ಲಿ ಪ್ರತ್ಯಕ್ಷನಾಗುತ್ತಾನಂತೆ. ಅಷ್ಟೇ ಅಲ್ಲದೆ, ಕುರ್ಚಿಯಿಂದ ಕುರ್ಚಿಗೆ ಜಿಗಿಯುತ್ತಾ ತುಂಟಾಟ ಮಾಡುತ್ತಾನೆ. ಇದರಿಂದಾಗಿ ಮದುವೆ ಕಾರ್ಯಕ್ರಮಕ್ಕೆ ಬಂದಿರುವ ಜನರು ಭಯಭೀತರಾಗಿದ್ದಾರೆ.

ಕಲ್ಯಾಣ ಮಂಟಪದ ಹೊರಗೆ ವಿಶಾಲವಾದ ಬೇವಿನ ಮರ ಇದೆ. ಆ ಮರದಲ್ಲಿ ವಾಸ ಇರುವ ಈ ಕಪಿರಾಯ ಮದುವೆ ಗದ್ದಲ ಕೇಳಿದಾಕ್ಷಣ ಮಂಟಪದೊಳಗೆ ನುಗ್ಗಿ ಮದುವೆಯ ಸಂಭ್ರಮ ಸವಿಯುತ್ತದೆಂತೆ. ಆದರೆ ಇದುವರೆಗೂ ಈ ಕೋತಿ ಯಾವುದೇ ರೀತಿಯ ಹಾನಿ ಮಾಡಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ.

ABOUT THE AUTHOR

...view details