ಕರ್ನಾಟಕ

karnataka

ETV Bharat / state

ಲಾಕ್​ಡೌನ್ ಎಫೆಕ್ಟ್: ರೈತರಿಂದ ತರಕಾರಿ ಖರೀದಿಸಿ ಬಡವರಿಗೆ ಹಂಚಿದ ಜಮಖಂಡಿ ಶಾಸಕ

ರೈತರು ಬೆಳೆದ ಬೆಳೆ ಹಾನಿ ಆಗಬಾರದು ಹಾಗೂ ಉಪವಾಸದಿಂದ ಯಾರೂ ಇರಬಾರದು ಎಂಬ ದೃಷ್ಟಿಯಿಂದ ಜಮಖಂಡಿ ಕ್ಷೇತ್ರದ ಶಾಸಕ ಆನಂದ ನ್ಯಾಮಗೌಡ ರೈತರು ಬೆಳೆದ ತರಕಾರಿ ಖರೀದಿ ಮಾಡಿದ್ದಾರೆ.

By

Published : Apr 15, 2020, 4:32 PM IST

Updated : Apr 15, 2020, 6:04 PM IST

Lockdown Effect: Jamakhandi mla buys a farmer's crop and distributes it to the poor
ಲಾಕ್ ಡೌನ್ ಎಫೆಕ್ಟ್: ರೈತರ ಬೆಳೆ ಖರೀದಿಸಿ ಬಡವರಿಗೆ ಹಂಚಿದ ಜಮಖಂಡಿ ಶಾಸಕ

ಬಾಗಲಕೋಟೆ: ರೈತರು ಬೆಳೆದ ಬೆಳೆ ಹಾನಿ ಆಗಬಾರದು ಹಾಗೂ ಉಪವಾಸದಿಂದ ಯಾರೂ ಇರಬಾರದು ಎಂಬ ದೃಷ್ಟಿಯಿಂದ ಜಮಖಂಡಿ ಕ್ಷೇತ್ರದ ಶಾಸಕ ಆನಂದ‌ ನ್ಯಾಮಗೌಡ ರೈತರು ಬೆಳೆದ ತರಕಾರಿಯನ್ನು ನೇರವಾಗಿ ಖರೀದಿ ಮಾಡಿ ನೆರವಾಗಿದ್ದಾರೆ.

ಲಾಕ್​ಡೌನ್ ಎಫೆಕ್ಟ್: ರೈತರಿಂದ ತರಕಾರಿ ಖರೀದಿಸಿ ಬಡವರಿಗೆ ಹಂಚಿದ ಜಮಖಂಡಿ ಶಾಸಕ

ಜಮಖಂಡಿ ಮತಕ್ಷೇತ್ರದ ರೈತರ ಸಮಸ್ಯೆಗಳನ್ನು ವಿಚಾರಿಸಿ ಅವರ ಸಂಕಷ್ಟಗಳನ್ನು ಆಲಿಸಿ ನಂತರ ರೈತರು ಬೆಳೆದ ಸೊಪ್ಪು, ತರಕಾರಿಗಳನ್ನು ಖರೀದಿಸಿದರು. ಈ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತರುತ್ತೇನೆ ಎಂದು ರೈತರಿಗೆ ಭರವಸೆ ನೀಡಿದರು.

ರೈತರು ಬೆಳೆದ ಬೆಳೆಗಳು ಮಾರುಕಟ್ಟೆಯಲ್ಲಿ ಮಾರಟವಾಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಬೆಳೆಗಳನ್ನು ರೈತರಿಂದ ನೇರವಾಗಿ ಖರೀದಿ ಮಾಡಿ ಜಮಖಂಡಿಯ ಬಡಜನರಿಗೆ ಮತ್ತು ಪ್ರತಿಯೊಂದು ಮನೆಗೆ ಉಚಿತವಾಗಿ ಕೊಡುವ ಯೋಜನೆಯನ್ನು ಹಮ್ಮಿಕೊಂಡಿದ್ದಾರೆ. ಈ ಯೋಜನೆ ರೈತರಿಗೆ ಹಾಗೂ ಬಡವರಿಗೆ ಅನುಕೂಲವಾಗುತ್ತದೆ ಎಂದು ಶಾಸಕ ಆನಂದ ನ್ಯಾಮಗೌಡ ತಿಳಿಸಿದ್ದಾರೆ.

Last Updated : Apr 15, 2020, 6:04 PM IST

ABOUT THE AUTHOR

...view details