ಬಾಗಲಕೋಟೆ :ಚುನಾವಣೆ ಇನ್ನೂ ಎರಡು ವರ್ಷ ಇದ್ದಾಗಲೇ, ಕಾಂಗ್ರೆಸ್ ಪಕ್ಷದಲ್ಲಿ ಐದು ಗುಂಪುಗಳಾಗಿ ಒಬ್ಬರಿಗೆ ಒಬ್ಬರೂ ಪೈಪೋಟಿ ಮಾಡುತ್ತಿರುವುದು ಕಾಂಗ್ರೆಸ್ ಪಕ್ಷದ ವಿನಾಶದ ಮುನ್ಸೂಚನೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ತಿಳಿಸಿದ್ದಾರೆ.
ನಗರದಲ್ಲಿ ಈ ಕುರಿತು ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಚುನಾವಣೆ ಮೊದಲೇ ಮುಖ್ಯಮಂತ್ರಿ ಪೈಪೋಟಿ ನಡೆಯುತ್ತಿರುವುದು ಮದುವೆ ಆಗುವ ಮುಂಚೆ ಮಕ್ಕಳ ಮಾಡುವ ಸ್ಥಿತಿ ಆಗಿದೆ ಎಂದು ವ್ಯಂಗ್ಯವಾಡಿದ ಅವರು, ಬಿಜೆಪಿ ಬಂದ ಶಾಸಕರು,ಯಾರೂ ಮರಳಿ ಹೋಗುವುದಿಲ್ಲ. ಯಡಿಯೂರಪ್ಪ ಅವರು ಹಾಗೂ ಪ್ರಧಾನಿ ಮಂತ್ರಿ ಮೋದಿ ಅವರ ನಾಯಕತ್ವ ಬೆಂಬಲಿಸಿ ಬಂದಿದ್ದು, ಮರಳಿ ಕಾಂಗ್ರೆಸ್ ಪಕ್ಷಕ್ಕೆ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಇದೇ ಸಮಯದಲ್ಲಿ ಜಿಲ್ಲಾ ಪಂಚಾಯತ್ ಚುನಾವಣಾ ಮೀಸಲಾತಿ ಪಟ್ಟಿ ಜಾರಿ ಹಿನ್ನೆಲೆ, ಮೀಸಲಾತಿ ಕ್ಷೇತ್ರ ಬದಲಾವಣೆಗೆ ಒತ್ತಾಯಿಸಿ ಡಿಸಿಎಂ ಗೋವಿಂದ ಕಾರಜೋಳ ಅವರಿಗೆ ಮುಧೋಳ ಕ್ಷೇತ್ರದ ಜನರ ನಿಯೋಗ ಭೇಟಿ ಮಾಡಿ, ಬದಲಾವಣೆ ಮಾಡಿಸುವಂತೆ ಮನವಿ ಮಾಡಿಕೊಂಡ ಅವರು, ಮುಧೋಳ ತಾಲೂಕಿನ ಹೆಬ್ಬಾಳ, ಲೋಕಾಪೂರ ಜಿಪಂ ಕ್ಷೇತ್ರದ ಮೀಸಲಾತಿ ಬದಲಾವಣೆ ಮಾಡಿಸುವಂತೆ ಒತ್ತಾಯಿಸಿದರು.