ಕರ್ನಾಟಕ

karnataka

ETV Bharat / state

ಬಾಗಲಕೋಟೆ ಜಿಪಂ ಕಚೇರಿಗೆ ಪಾರದರ್ಶಕತೆ ತರಲು ಸಿಸಿಟಿವಿ ಅಳವಡಿಕೆ..  ಜಿಪಂ ಸಿಇಒ ಮಾನಕರ

ಕಚೇರಿಗೆ ತಮ್ಮ ಅಹವಾಲು, ಸಮಸ್ಯೆಗಳನ್ನು ಹೊತ್ತು ಬರುವ ಸಾರ್ವಜನಿಕರ ಪ್ರಕರಣಗಳು, ಕಚೇರಿ ಕಡತಗಳ ವಿಳಂಬ, ಕೇಸ್ ವರ್ಕರ್ ಕಿರಿಕಿರಿ ತಪ್ಪಿಸಲು ಕಚೇರಿಗಳಿಗೆ ಸಿಸಿಟಿಟಿ ಅಳವಡಿಸಲಾಗಿದೆ ಎಂದು ಜಿಪಂ ಸಿಇಒ ಮಾನಕರ ಹೇಳಿದ್ದಾರೆ.

By

Published : Oct 16, 2019, 9:14 PM IST

ಪಾರದರ್ಶಕತೆಗಾಗಿ ಸಿಸಿಟಿವಿ ಅಳವಡಿಕೆ

ಬಾಗಲಕೋಟೆ:ಜಿಲ್ಲಾ ಪಂಚಾಯತ್​ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಕಚೇರಿ ವ್ಯಾಪ್ತಿಯಲ್ಲಿ ಪಾರದರ್ಶಕತೆ ತರಲು 20 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ ಎಂದು ಜಿಪಂ ಸಿಇಒ ಗಂಗೂಬಾಯಿ ಮಾನಕರ ಹೇಳಿದ್ದಾರೆ.

ಜಿಲ್ಲಾ ಪಂಚಾಯತ್ ಆಡಳಿತದಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಈ ಕ್ರಮವನ್ನು ಅನುಸರಿಸಲಾಗುತ್ತಿದೆ ಎಂದಿರುವ ಸಿಇಒ, ಕಚೇರಿ ವ್ಯಾಪ್ತಿಯ ಎಲ್ಲ ವಿಭಾಗಗಳ ದಿನನಿತ್ಯದ ಕಾರ್ಯಕಲಾಪಗಳನ್ನು ನೇರವಾಗಿ ತಮ್ಮ ಕಚೇರಿಯಿಂದ ವೀಕ್ಷಿಸಲು, ಸಾರ್ವಜನಿಕರ ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಇದರಿಂದ ಅನುಕೂಲವಾಗಲಿದೆ ಎಂದರು.

ಸಿಇಒ ಕಚೇರಿಯಲ್ಲಿಯೂ ಸಹ ಕೆಲಸದ ವೇಳೆ ತಮ್ಮ ಕೆಲಸ ಕಾರ್ಯದ ನೇರ ಪ್ರಸಾರವನ್ನು ಸಹ ಕಾರಿಡಾರ್​ನ ಸ್ಕ್ರೀನ್‍ನಲ್ಲಿ ಸಾರ್ವಜನಿಕರು ಹಾಗೂ ಸಿಬ್ಬಂದಿ ನೇರವಾಗಿ ವೀಕ್ಷಿಸಬಹುದಾಗಿದೆ. ಅಂದಹಾಗೇ ಇದು ರಾಜ್ಯದಲ್ಲೇ ಪ್ರಥಮ ಪ್ರಯೋಗವಾಗಿದೆ ಎಂದು ಸಿಇಒ ಗಂಗೂಬಾಯಿ ಮಾನಕರ ಹೇಳಿದ್ದಾರೆ.

For All Latest Updates

ABOUT THE AUTHOR

...view details