ಕರ್ನಾಟಕ

karnataka

By

Published : Dec 6, 2021, 4:52 PM IST

ETV Bharat / sports

ಹೊಸ ಕೋಚ್​ಗಳು ಬಂದರೂ ನಮ್ಮ ಮನಸ್ಥಿತಿ ಮತ್ತು ಉದ್ದೇಶ ಬದಲಾಗಿಲ್ಲ: ವಿರಾಟ್​ ಕೊಹ್ಲಿ

ರವಿಶಾಸ್ತ್ರಿ ಕೋಚ್​ ಅವಧಿ ಮುಗಿಯುತ್ತಿದ್ದಂತೆ ರಾಹುಲ್ ದ್ರಾವಿಡ್​ ಟೀಮ್ ಇಂಡಿಯಾ ಮುಖ್ಯ ಕೋಚ್​ ಹುದ್ದೆಗೇರಿದರು. ಪರಾಸ್​ ಮಾಂಬ್ರೆ ಮತ್ತು ಟಿ ದಿಲೀಪ್​ ಕ್ರಮವಾಗಿ ಬೌಲಿಂಗ್ ಮತ್ತು ಫೀಲ್ಡಿಂಗ್ ಕೋಚ್​ ಆಗಿ ಭರತ್​ ಅರುಣ್​ ಮತ್ತು ಆರ್​ ಶ್ರೀಧರ್​ ಸ್ಥಾನವನ್ನ ಅಲಂಕರಿಸಿದ್ದಾರೆ..

Virat Kohli
ವಿರಾಟ್ ಕೊಹ್ಲಿ

ಮುಂಬೈ: ವಿರಾಟ್ ಕೊಹ್ಲಿ​-ರಾಹುಲ್​ ದ್ರಾವಿಡ್​ ಸಂಯೋಜನೆಯಲ್ಲಿ ನ್ಯೂಜಿಲ್ಯಾಂಡ್​ ವಿರುದ್ಧ ಟೆಸ್ಟ್​ ಸರಣಿ ಗೆಲ್ಲುವ ಮೂಲಕ ಭಾರತ ತಂಡ ಶುಭಾರಂಭ ಮಾಡಿದೆ. ಹೊಸ ಕೋಚ್​ಗಳ ಅಡಿಯಲ್ಲೂ ನಮ್ಮ ಮನಸ್ಥಿತಿ ಮತ್ತು ಉದ್ದೇಶ ಹಿಂದಿನಂತೆಯೇ ಉಳಿಯಲಿದೆ ಎಂದು ಭಾರತ ತಂಡದ ನಾಯಕ ವಿರಾಟ್​ ಹೇಳಿದ್ದಾರೆ.

ರವಿಶಾಸ್ತ್ರಿ ಕೋಚ್​ ಅವಧಿ ಮುಗಿಯುತ್ತಿದ್ದಂತೆ ರಾಹುಲ್ ದ್ರಾವಿಡ್​ ಟೀಂ ಇಂಡಿಯಾ ಮುಖ್ಯ ಕೋಚ್​ ಹುದ್ದೆಗೇರಿದರು. ಪರಾಸ್​ ಮಾಂಬ್ರೆ ಮತ್ತು ಟಿ ದಿಲೀಪ್​ ಕ್ರಮವಾಗಿ ಬೌಲಿಂಗ್ ಮತ್ತು ಫೀಲ್ಡಿಂಗ್ ಕೋಚ್​ ಆಗಿ ಭರತ್​ ಅರುಣ್​ ಮತ್ತು ಆರ್​ ಶ್ರೀಧರ್​ ಸ್ಥಾನವನ್ನ ಅಲಂಕರಿಸಿದ್ದಾರೆ.

ಹೊಸ ಮ್ಯಾನೇಜ್​ಮೆಂಟ್​ ಬಂದ ಬಳಿಕವೂ ನಾವು ಹಿಂದಿನ ಮನಸ್ಥಿತಿ ಮತ್ತು ಉದ್ದೇಶದೊಂದಿಗೆ ಮುಂದುವರಿಯಲಿದ್ದೇವೆ. ಭಾರತೀಯ ಕ್ರಿಕೆಟ್​ನ ಗುಣಮಟ್ಟವನ್ನು ಕಾಪಾಡಿಕೊಳ್ಳುವುದಕ್ಕೆ ಇದು ಮಹತ್ವದಾಗಿದೆ ಮತ್ತು ಇದನ್ನು ಅನುಸರಿಸುವುದರಿಂದ ಭಾರತ ಕ್ರಿಕೆಟ್ ಬೆಳವಣಿಗೆ ಮುಂದುವರಿಯಲಿದೆ ಎಂದು ಕಿವೀಸ್ ವಿರುದ್ಧ 372 ರನ್​ಗಳ ಜಯ ಸಾಧಿಸಿದ ನಂತರ ಕೊಹ್ಲಿ ಹೇಳಿದ್ದಾರೆ.

ವಿರಾಟ್​ ಕೊಹ್ಲಿ ಮತ್ತು ರವಿ ಶಾಸ್ತ್ರಿ ನಾಯಕ-ಕೋಚ್​ ಸಂಯೋಜನೆಯಲ್ಲಿ ಭಾರತ ಕೆಲವು ಐತಿಹಾಸಿಕ ಟೆಸ್ಟ್​ ಸರಣಿಗಳನ್ನು ಗೆದ್ದಿವೆ. ಇಂಗ್ಲೆಂಡ್​ ಮತ್ತು ಆಸ್ಟ್ರೇಲಿಯಾದಲ್ಲಿ ಟೆಸ್ಟ್​ ಸರಣಿ ಗೆದ್ದಿರುವುದನ್ನು ಕೊಹ್ಲಿ ದೊಡ್ಡ ಯಶಸ್ಸು ಎಂದು ಕರೆದಿದ್ದಾರೆ. ಈ ಯಶಸ್ಸು ಮುಂಬರುವ ದಕ್ಷಿಣ ಆಫ್ರಿಕಾದ ಪ್ರವಾಸದಲ್ಲಿ ಮೊದಲ ಟೆಸ್ಟ್​ ಸರಣಿ ಗೆಲ್ಲುವುದಕ್ಕೆ ನೆರವಾಗಲಿದೆ ಎಂದು ಕೊಹ್ಲಿ ಹೇಳಿದ್ದಾರೆ.

ದಕ್ಷಿಣ ಆಫ್ರಿಕಾದಲ್ಲಿ ನಮಗೆ ಒಳ್ಳೆಯ ಸವಾಲು ಎದುರಾಗಲಿದೆ. ಕಳೆದ ಆಸ್ಟ್ರೇಲಿಯಾದಲ್ಲಿನ ಸರಣಿ ಜಯ ನಮಗೆ ವಿಶ್ವದ ಎಲ್ಲಿ ಬೇಕಾದರೂ ಸರಣಿ ಗೆಲ್ಲುವ ನಂಬಿಕೆಯನ್ನು ಹುಟ್ಟಿಸಿದೆ. ನಾವು ಸಾಧಿಸಬೇಕೆಂದುಕೊಂಡಿರುವ ಈ ಸಾಧನೆ ದೊಡ್ಡ ಚಾಲೆಂಜ್​ ಆಗಿದೆ. ಆಶಾದಾಯಕವಾಗಿ ದಕ್ಷಿಣ ಆಫ್ರಿಕಾದಲ್ಲೂ ನಮಗೆ ಗೊತ್ತಿರುವ ಆಟವನ್ನು ಆಡಿ ಸರಣಿ ಗೆಲ್ಲಲಿದ್ದೇವೆ ಎಂದು ಕೊಹ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಯಾರೋ ಟೀಕಿಸುತ್ತಿದ್ದಾರೆಂದು ನಮ್ಮ ಆಟಗಾರರನ್ನ ಬಿಡುವುದಿಲ್ಲ, ಇಡೀ ತಂಡದ ಬೆಂಬಲ ಅವರಿಗಿರುತ್ತೆ: ರಹಾನೆ ಪರ ನಿಂತ ಕೊಹ್ಲಿ

ABOUT THE AUTHOR

...view details