ಕರ್ನಾಟಕ

karnataka

ETV Bharat / sports

ಶೀಘ್ರವೇ ಪಂತ್​ ಆಸ್ಪತ್ರೆಯಿಂದ ಡಿಸ್ಚಾರ್ಜ್​: ಅಂಗಳಕ್ಕೆ ಇಳಿಯೋದು ಯಾವಾಗ ಸಿಡಿಲ ಮರಿ?

ಸದ್ಯದಲ್ಲೇ ಆಸ್ಪತ್ರೆಯಿಂದ ಬಿಡುಗಡೆಯಾಗಲಿರುವ ಪಂತ್​ - ಎರಡು ವಾರಗಳ ನಂತರ ಡಿಸ್ಚಾರ್ಜ್​ ಮಾಡಬಹುದು ಎಂದಿರುವ ವೈದ್ಯರು - ನಾಲ್ಕರಿಂದ ಆರು ತಿಂಗಳ ನಂತರ ಕೀಪಿಂಗ್​ ಗ್ಲೌಸ್​ ತೊಡಲಿದ್ದಾರೆ ಪಂತ್​.

By

Published : Jan 18, 2023, 6:25 PM IST

rishabh pant
ರಿಷಬ್​ ಪಂತ್

ನವದೆಹಲಿ:ಡಿಸೆಂಬರ್​ 30ರಂದುಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಭಾರತ ತಂಡದ ಬ್ಯಾಟರ್ ಮತ್ತು ವಿಕೆಟ್​ ಕೀಪರ್​ ರಿಷಭ್​ ಪಂತ್ ಶೀಘ್ರದಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ ಎಂಬ ಸಿಹಿ ಸುದ್ದಿ ಬಂದಿದೆ. ಎರಡು ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಪಂತ್​ ಅಪಘಾತ ಸ್ಥಳದಲ್ಲಿ ಸಹಕರಿಸಿದ ಬಸ್​​ ಚಾಲಕ ಮತ್ತು ನಿರ್ವಾಹಕ ಇಬ್ಬರಿಗೆ, ಉತ್ತರಾಖಂಡ ಸರ್ಕಾರ, ಬಿಸಿಸಿಐ ಹಾಗೂ ಅಭಿಮಾನಿಗಲಿಗೆ ಧನ್ಯವಾದ ಹೇಳಿದ್ದರು.

ರೂರ್ಕಿಯಲ್ಲಿ ರಸ್ತೆ ಅಪಘಾತದಲ್ಲಿ ಗಾಯಗೊಂಡ ಕ್ರಿಕೆಟಿಗ ರಿಷಭ್​ ಪಂತ್ ಅವರನ್ನು ತಕ್ಷಣಕ್ಕೆ ಡೆಹ್ರಾಡೂನ್‌ನ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಜನವರಿ ನಾಲ್ಕರಂದು ಜಾಲಿಗ್ರಾಂಟ್ ವಿಮಾನ ನಿಲ್ದಾಣದಿಂದ ಮುಂಬೈಗೆ ಏರ್​ಶಿಫ್ಟ್ ಮಾಡಿ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಸಂಸ್ಥೆಗೆ ದಾಖಲಿಸಲಾಗಿತ್ತು. ಇಲ್ಲಿ ಸ್ಪೋರ್ಟ್ಸ್ ಮೆಡಿಸಿನ್ ಕೇಂದ್ರದ ಮುಖ್ಯಸ್ಥ ಮತ್ತು ನಿರ್ದೇಶಕ, ಆರ್ತ್ರೋಸ್ಕೊಪಿ ಮತ್ತು ಭುಜದ ತಜ್ಞ ಡಾ.ದಿನ್‌ಶಾ ಪರ್ದಿವಾಲಾ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು.

ಅಪಘಾತದಲ್ಲಿ ಪಂತ್​ ಅವರ ಮೂರು ಅಸ್ಥಿರಜ್ಜುಗಳಿಗೆ ಏಟು ಬಿದ್ದಿತ್ತು. ಜನವರಿ 6 ರಂದು ಮುಂಬೈನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಯಲ್ಲಿ ಅಸ್ಥಿರಜ್ಜು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಶಸ್ತ್ರಚಿಕಿತ್ಸೆಯ ನಂತರ ಮಾಹಿತಿ ನೀಡಿದ್ದ ವೈದ್ಯರು ವೇಗವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದರು.

ಎರಡು ವಾರದಲ್ಲಿ ಆಸ್ಪತ್ರೆಯಿಂದ ಬಿಡುಗಡೆ:ಪಂತ್ ಅವರನ್ನು ಸುಮಾರು ಎರಡು ವಾರಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಮಾಡಬಹುದು. ರಿಷಭ್​ ಪಂತ್​ ಎರಡು ತಿಂಗಳೊಳಗೆ ಮತ್ತೆ ಸಾಮಾನ್ಯ ಸ್ಥಿತಿಗೆ ಮರಳಲಿದ್ದಾರೆ. ಮೈದಾನಕ್ಕಿಳಿದು ಆಡಲು ಇನ್ನೂ ನಾಲ್ಕರಿಂದ ಆರು ತಿಂಗಳು ಕಾಲ ತೆಗೆದು ಕೊಳ್ಳಬಹುದು ಹಾಗೂ ಅವರು ಸಂಪೂರ್ಣ ಚೇತರಿಸಿಕೊಂಡ ನಂತರ ಆಟಕ್ಕೆ ಮರಳಿದರೆ ಸೂಕ್ತ ಎಂದು ವೈದ್ಯರು ತಿಳಿಸಿದ್ದಾರೆ.

ಪಂತ್ ಶೀಘ್ರದಲ್ಲೇ ಮೈದಾನಕ್ಕೆ ಮರಳಲಿದ್ದಾರೆ:ಅಪಘಾತದಲ್ಲಿ ಮೊಣಕಾಲಿನ ಅಸ್ಥಿರಜ್ಜುಗಳು ತುಂಡಾಗಿದ್ದು ಶಸ್ತ್ರಚಿಕಿತ್ಸೆ ಅಗತ್ಯ. ಎಂಸಿಎಲ್ ಸರ್ಜರಿ ಅತ್ಯಂತ ಮಹತ್ವದ್ದಾಗಿದ್ದು, ಈಗ ಎರಡು ವಾರಗಳಲ್ಲಿ ರಿಷಬ್ ಅವರ ಪಿಸಿಎಲ್ ಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲಾಗುವುದು ಎಂದು ವೈದ್ಯರು ಬಿಸಿಸಿಐ ಮಾಹಿತಿ ನೀಡಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.

ಆಸ್ಪತ್ರೆಯಿಂದ ಪಂತ್​ ಬಿಡುಗಡೆ ಆದ ನಂತರ ಸಂಪೂರ್ಣವಾಗಿ ಚೇತರಿಸಿಕೊಂಡು ಮೈದಾನಕ್ಕೆ ಮರಳಲು ನಾಲ್ಕರಿಂದ ಆರು ತಿಂಗಳು ಬೇಕಾಗಬಹುದು. ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಬಿಸಿಸಿಐ ಅವರ ಪುನರ್ವಸತಿಗೆ ಯೋಜನೆ ಸಿದ್ಧಪಡಿಸಲಿದೆ. ಬೆಂಗಳೂರಿನ ಎನ್​ಸಿಎಯಲ್ಲಿ ಹೆಚ್ಚಿನ ಗಮನಕ್ಕೆ ಬಿಸಿಸಿಐ ಕರೆತರುವ ಸಾಧ್ಯತೆಯೂ ಇದೆ.

ಅಪಘಾತದ ನಂತರ ಮೊದಲ ಪೋಸ್ಟ್​:ಎರಡು ದಿನಗಳ ಹಿಂದೆ ರಿಷಬ್​ ಪಂತ್​ ತಮ್ಮ ಟ್ವಿಟರ್​ ಖಾತೆಯಲ್ಲಿ ಟ್ವೀಟ್​​ ಮಾಡಿದ್ದರು. ಅದುಅಪಘಾತದ ನಂತರ ಪಂತ್​ ಮಾಡಿದ ಮೊದಲ ಪೋಸ್ಟ್​ ಆಗಿದೆ. ಅಂದು ಸರಣಿ ಟ್ವಿಟ್​ ಮಾಡಿದ್ದ ಅವರು ಅಭಿಮಾನಿಗಳಿಗೆ, ಉತ್ತರಾಖಂಡ ಸರ್ಕಾರಕ್ಕೆ ಮತ್ತು ಬಿಸಿಸಿಐಗೆ ಧನ್ಯವಾದ ಹೇಳಿದ್ದರು. ಅಪಘಾತದ ವೇಳೆ ರಕ್ಷಿಸಿದ್ದ ಬಸ್​ ಚಾಲಕ ಮತ್ತು ನಿರ್ವಹಕರ ಫೋಟೋ ಹಂಚಿಕೊಂಡು 'ನಾನು ಎಲ್ಲರಿಗೂ ಪ್ರತ್ಯೇಕವಾಗಿ ಧನ್ಯವಾದ ಹೇಳಲು ಸಾಧ್ಯವಾಗದಿರಬಹುದು. ಆದರೆ, ಈ ಇಬ್ಬರು ವೀರರಿಗೆ ನಾನು ಧನ್ಯವಾದ ಹೇಳದಿರಲಾರೆ. ನನ್ನನ್ನು ರಕ್ಷಿಸಿ, ಅಪಘಾತದ ಸ್ಥಳದಿಂದ ಆಸ್ಪತ್ರೆಗೆ ಸೇರಿಸಿದ ರಜತ್ ಕುಮಾರ್ ಮತ್ತು ನಿಶು ಕುಮಾರ್ ನಾನು ನಿಮಗೆ ಚಿರಋಣಿ' ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದರು.

ಇದನ್ನೂ ಓದಿ:'ನನ್ನ ಜೀವನದ ಉದ್ದಕ್ಕೂ ನಾನು ನಿಮಗೆ ಋಣಿಯಾಗಿದ್ದೇನೆ': ಪಂತ್​ ಹೀಗೆ ಹೇಳಿದ್ದು ಯಾರಿಗೆ?

ABOUT THE AUTHOR

...view details