ಮುಂಬೈ:18ರಿಂದ ಆರಂಭವಾಗಲಿರುವ ನ್ಯೂಜಿಲ್ಯಾಂಡ್ ವಿರುದ್ಧದ ಏಕದಿನ, ಟಿ 20 ಸರಣಿ ಮತ್ತು ಆಸ್ಟ್ರೇಲಿಯಾದ ಮೇಲೆ ಆಡಲಿರುವ ಬಾರ್ಡರ್ ಗವಾಸ್ಕರ್ ಟ್ರೋಫಿಯ ಎರಡು ಪಂದ್ಯಗಳಿಗೆ ಬಿಸಿಸಿಐ ತಂಡವನ್ನು ಪ್ರಕಟಿಸಿದೆ. ನ್ಯೂಜಿಲ್ಯಾಂಡ್ ವಿರುದ್ಧದ ಟಿ20 ಪಂದ್ಯಕ್ಕೆ ಹಾರ್ದಿಕ್ ಪಾಂಡ್ಯಗೆ ನಾಯಕತ್ವ ಮುಂದುವರೆದಿದೆ. ಲಂಕಾ ಎದುರು ಯಶಸ್ವಿಯಾಗಿ ಚುಟುಕು ಕ್ರಿಕೆಟ್ ಉತ್ತಮವಾಗಿ ಹಾರ್ದಿಕ್ ಮುನ್ನಡೆಸಿದ್ದು, ಹೆಚ್ಚು ಕಮ್ಮಿ ಅದೇ ತಂಡವನ್ನೇ ನ್ಯೂಜಿಲ್ಯಾಂಡ್ ವಿರುದ್ಧವೂ ಆಡಿಸಲಾಗುತ್ತಿದೆ.
ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಿಂದ ಕೆಎಲ್ ರಾಹುಲ್ ಮತ್ತು ಅಕ್ಷರ್ ಪಟೇಲ್ ಹೊರಗುಳಿದಿದ್ದಾರೆ. ರಾಹುಲ್ಗೆ ಮತ್ತು ಅಕ್ಷರ್ ಕೌಟುಂಬಿಕ ಹಿನ್ನೆಲೆಯಿಂದಾಗಿ ಪಂದ್ಯದಿಂದ ಹೊರಗುಳಿದಿದ್ದಾರೆ ಎಂದು ಬಿಸಿಐ ತಿಳಿಸಿದೆ. ರಾಹುಲ್ ಮತ್ತು ಅಥಿಯಾ ಶೆಟ್ಟಿ ವಿವಾಹ ಇದೇ 21 ರಿಂದ 23ರ ವರೆಗೆ ನಡೆಯಲಿದೆ ಎನ್ನಲಾಗಿದೆ. ಈ ಟೂರ್ನಿಯಿಂದ ರಾಹುಲ್ ಹೊರಗುಳಿದಿರುವುದು ಇದೇ ಕಾರಣಕ್ಕೆ ಎಂದು ಹೇಳಲಾಗುತ್ತಿದೆ. ಅಕ್ಷರ್ ಮತ್ತು ರಾಹುಲ್ ಬದಲಿಗೆ ತಂಡದಲ್ಲಿ ರಣಜಿಯಲ್ಲಿ 379 ರನ್ ದಾಖಲಿಸಿದ ಪೃಥ್ವಿ ಶಾಗೆ ಅವಕಾಶ ಸಿಕ್ಕಿದೆ. ಹಾಗೇ ಮುಖೇಶ್ ಕುಮಾರ್ ಮತ್ತು ಜಿತೇಶ್ ಶರ್ಮಾ ತಂಡಕ್ಕೆ ಪದಾರ್ಪಣೆ ಆಗಲಿದ್ದಾರೆ.
ಆಸ್ಟ್ರೇಲೀಯಾ ಎದುರಿನ ಬಾರ್ಡರ್ ಗವಾಸ್ಕರ್ ಟ್ರೋಪೀಗೂ ತಂಡ ಪ್ರಕಟಿಸಲಾಗಿದೆ. ಆದರೆ ಕೇವಲ ಎರಡು ಪಂದ್ಯಗಳಿಗೆ ತಂಡಗಳನ್ನು ಘೋಷಿಸಿದ್ದಾರೆ. ಫೆಬ್ರುವರಿ 9ರಿಂದ ಪಂದ್ಯಗಳು ಆರಂಭವಾಗಲಿದೆ. ರವೀಂದ್ರ ಜಡೇಜಾ ಅವರು ಫಿಟ್ ಆದಲ್ಲಿ ಅವರನ್ನು ಆಸ್ಟ್ರೇಲಿಯಾ ಎದುರಿನ ಟೆಸ್ಟ್ಗೆ ಆಡಿಸಲಾಗುವುದು ಎಂದು ತಿಳಿಸಿದ್ದಾರೆ.