ಕರ್ನಾಟಕ

karnataka

By

Published : Nov 11, 2019, 1:14 PM IST

ETV Bharat / sports

ಟಿ-20 ಇತಿಹಾಸದಲ್ಲಿ ಇದು ಭಾರತಕ್ಕೆ ಸಿಕ್ಕ ಅಪರೂಪದ ಜಯ... ರೋಹಿತ್​ ಶರ್ಮಾ ಹೀಗಂದಿದ್ದೇಕೆ?

ಭಾರತ ತಂಡ ಬಾಂಗ್ಲಾದೇಶದ ವಿರುದ್ಧ ಮೂರನೇ ಪಂದ್ಯದಲ್ಲಿ ದೀಪಕ್​ ಚಹಾರ್​ ಅವರ ಅದ್ಭುತ ಬೌಲಿಂಗ್​ ಪ್ರದರ್ಶನದ ನೆರವಿನಿಂದ ಜಯ ಸಾಧಿಸಿತ್ತು. ಈ ಪಂದ್ಯವನ್ನು ನಾಯಕ, ಟಿ-20 ಚರಿತ್ರಯಲ್ಲಿ ನೆನಪುಳಿಯುವಂತೆ ಜಯ ಎಂದು ವರ್ಣಿಸಿದ್ದಾರೆ.

India vs bangladesh news

ನಾಗ್ಪುರ: ಬಾಂಗ್ಲಾದೇಶದ ವಿರುದ್ಧ ನಡೆದ ಮೂರನೇ ಟಿ-20 ಪಂದ್ಯದಲ್ಲಿ ಭಾರತ ತಂಡ 30 ರನ್​ಗಳಿಂದ ಗೆದ್ದು ಬೀಗಿದೆ. ನಾಯಕ ಈ ಪಂದ್ಯವನ್ನು ಟಿ-20 ಇತಿಹಾಸದಲ್ಲೇ ಅತ್ಯಂತ ಅಪರೂಪದ ಜಯ ಎಂದಿದ್ದಾರೆ.

ಹೌದು, ಬಾಂಗ್ಲಾದೇಶ ಗೆಲುವಿಗೆ 8 ಓವರ್​ಗಳಲ್ಲಿ 69 ರನ್​ಗಳ ಅವಶ್ಯಕತೆಯಿತ್ತು. ಈ ಹಂತದಲ್ಲಿ ಬಾಂಗ್ಲಾದೇಶದ ಆರಂಭಿಕ ಬ್ಯಾಟ್ಸ್​ಮನ್​ ಮೊಹಮ್ಮದ್​ ನಯೀಮ್​ ಅಬ್ಬರದ ಬ್ಯಾಟಿಂಗ್​ ನಡೆಸುತ್ತಿದ್ದರೆ ಅವರಿಗೆ ಸಾಥ್​​ ನೀಡಿದ್ದ ಮೊಹಮ್ಮದ್​ ಮಿಥುನ್​ 27 ರನ್​ ಗಳಿಸಿ 3ನೇ ವಿಕೆಟ್​ಗೆ 98 ರನ್​ಗಳ ಜೊತೆಯಾಟ ನೀಡಿದ್ದರು.

ಕೈಯಲ್ಲಿ ಇನ್ನು 8 ವಿಕೆಟ್​ ಇದ್ದ ಬಾಂಗ್ಲಾದೇಶ ನಿಜಕ್ಕೂ ಐತಿಹಾಸಿಕ ಗೆಲುವಿನ ಕನಸು ಕಾಣುತ್ತಿತ್ತು. ಇದರ ಮಧ್ಯೆ ತಮ್ಮ ಎರಡನೇ ಸ್ಪೆಲ್​ ಎಸೆಯಲು ಬಂದ ಚಹಾರ್​ ಮಿಥುನ್​ ವಿಕೆಟ್​ ಪಡೆದರು. ನಂತರದ ಓವರ್​ನಲ್ಲಿ ಶಿವಂ ದುಬೆ 81 ರನ್​ ಗಳಿಸಿದ್ದ ನಯೀಮ್​ ವಿಕೆಟ್​ ಪಡೆದರು. ಇಲ್ಲಿಂದ ಚೇತರಿಸಿಕೊಳ್ಳಲಾಗದ ಬಾಂಗ್ಲಾ, ಚಹಾರ್​ ಹಾಗೂ ದುಬೆ ಬೌಲಿಂಗ್​ ದಾಳಿಗೆ ಸಿಲುಕಿ 144 ರನ್​ಗಳಿಗೆ ಆಲೌಟ್​ ಆಗುವ ಮೂಲಕ 30 ರನ್​ಗಳಿಂದ ಸೋಲೊಪ್ಪಿಕೊಂಡಿತು.

ಪಂದ್ಯದ ನಂತರ ಮಾತನಾಡಿದ ನಾಯಕ ರೋಹಿತ್​ ಶರ್ಮಾ," ಈ ಪಂದ್ಯವನ್ನು ಬೌಲರ್​ಗಳು ಗೆಲ್ಲಿಸಿಕೊಟ್ಟರು. ಹಿಮ ಬೀಳುವ ಸಂದರ್ಭದಲ್ಲಿ ಬೌಲಿಂಗ್​ ಮಾಡುವುದು ಕಷ್ಟ ಎಂಬುದು ನನಗೆ ಗೊತ್ತಿದೆ. ಈ ದಿನ ಭಾರತ ಚರಿತ್ರೆಯಲ್ಲಿ ಸೋಲುವ ಪಂದ್ಯವನ್ನು ಬೌಲರ್​ಗಳು ಗೆಲ್ಲುವ ಪಂದ್ಯವಾಗಿ ಮಾರ್ಪಡಿಸಿದರು. ಇದು ಬಾಂಗ್ಲಾಕ್ಕೆ ಸುಲಭದ ಜಯವಾಗಿತ್ತು. ಆದರೆ ನಮ್ಮ ಬೌಲರ್​ಗಳು ಜವಾಬ್ದಾರಿ ತೆಗೆದುಕೊಂಡು ತಮ್ಮ ಚಾಣಾಕ್ಷತನ ಪ್ರದರ್ಶಿಸಿದರು. ಯುವ ಆಟಗಾರರ ಸಾಮರ್ಥ್ಯ ನೋಡಿ ಬಹಳ ಖುಷಿಯಾಗಿದೆ" ಎಂದು ತಿಳಿಸಿದ್ದಾರೆ.

ಆರಂಭದಲ್ಲಿ ಭಾರತ ತಂಡ ರೋಹಿತ್​ ಹಾಗೂ ಧವನ್​ ವಿಕೆಟ್​ ಕಳೆದುಕೊಂಡರೂ ಯುವ ಆಟಗಾರರಾದ ರಾಹುಲ್​(52), ಶ್ರೇಯಸ್​ ಅಯ್ಯರ್​(62) ತಂಡಕ್ಕೆ ಉತ್ತಮ ಜೊತೆಯಾಟ ನೀಡಿ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ನೆರವಾದರು.

ಇನ್ನು ಬೌಲಿಂಗ್​ನಲ್ಲಿ ದೀಪಕ್​ ಚಹಾರ್​ ಚಮತ್ಕಾರ ಮಾಡಿ ಕೇವಲ 7 ರನ್​ ನೀಡಿ ವಿಶ್ವದಾಖಲೆಯ 6 ವಿಕೆಟ್​ ಪಡೆದು ಭಾರತಕ್ಕೆ ಸರಣಿ ಜಯ ತಂದುಕೊಟ್ಟರು.

ABOUT THE AUTHOR

...view details