ಕರ್ನಾಟಕ

karnataka

By

Published : Mar 20, 2020, 2:31 PM IST

ETV Bharat / sports

ಈ ದಿನ: ಮೈದಾನದಲ್ಲೇ ರಕ್ತ ವಾಂತಿ ಮಾಡಿಕೊಂಡಿದ್ದರೂ ದೇಶಕ್ಕಾಗಿ ಶತಕ ಸಿಡಿಸಿದ್ದ ಯುವಿ​..!

2011ರ ಇದೇ ದಿನ ಏಕದಿನ ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಆಲ್​ರೌಂಡರ್ ಯುವರಾಜ್ ಸಿಂಗ್ ಅನಾರೋಗ್ಯದ ಕಾರಣ ಮೈದಾನದಲ್ಲಿಯೇ ಕುಸಿದು ಬಿದ್ದು, ಹಲವು ಭಾರಿ ರಕ್ತ ವಾಂತಿ ಮಾಡಿಕೊಂಡಿದ್ದಲ್ಲದೇ ಪಂದ್ಯ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

On this day: Yuvraj Singh overcame illness to play match-winning knock in 2011 WC, ಈ ದಿನ: ಮೈದಾನದಲ್ಲೇ ಕುಸಿದು ಬಿದ್ದು ಶತಕ ಸಿಡಿಸಿದ್ದ ಯುವರಾಜ್​ ಸಿಂಗ್​..!
ಮೈದಾನದಲ್ಲೇ ಕುಸಿದು ಬಿದ್ದು ಶತಕ ಸಿಡಿಸಿದ್ದ ಯುವರಾಜ್​ ಸಿಂಗ್​..!

ಭಾರತ ಕ್ರಿಕೆಟ್ ತಂಡ 2011ರ ವಿಶ್ವಕಪ್​ ಎತ್ತಿಹಿಡಿಯುವಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದ ಸ್ಟಾರ್ ಆಲ್​​ ರೌಂಡರ್​ ಯುವರಾಜ್​ ಸಿಂಗ್​ ಹಲವು ಏಳುಬೀಳುಗಳನ್ನು ಕಂಡಿದ್ದರು. ಕ್ಯಾನ್ಸರ್​​​ನಿಂದಾಗಿ ಕ್ರಿಕೆಟ್​​ ಲೋಕದಿಂದ ದೂರಾಗಿದ್ದ ಯುವಿ, ಬಳಿಕ ಕ್ರಿಕೆಟ್​​ ಜೀವನಕ್ಕೆ ಗುಡ್​ ಬೈ ಹೇಳಿದ್ದರು.

ಆದರೆ ಯುವರಾಜ್ ಸಿಂಗ್​ ಜೀವನದ ಕ್ರಿಕೆಟ್​​ ಇತಿಹಾಸದಲ್ಲಿ ಈ ಒಂದು ದಿನ ಎಂದೂ ಮರೆಯಲಾಗದ ದಿನವಾಗಿದೆ. ಕೇವಲ ಯುವರಾಜ್ ಸಿಂಗ್​ ಮಾತ್ರವಲ್ಲ ಕೋಟ್ಯಂತರ ಕ್ರಿಕೆಟ್​​ ಅಭಿಮಾನಿಗಳು ಮೆರೆಯಲಾಗದ ದಿನವಾಗಿದೆ. 2011ರ ವಿಶ್ವಕಪ್ ಪಂದ್ಯದ ವೇಳೆ ಯುವರಾಜ್ ಸಿಂಗ್ ಸಿಡಿಸಿದ್ದ ಶತಕ ಭಾರತ ವಿಶ್ವಕಪ್ ಗೆಲುವಿಗೂ ಕಾರಣವಾಗಿತ್ತು. ಆದರೆ ಈ ಶತಕದ ಹಿಂದೆ ಯುವರಾಜ್​​ ಸಿಂಗ್​ ಜೀವನದ ಕಹಿ ಘಟನೆಯೊಂದು ನಡೆದಿತ್ತು.

2011ರ ಮಾರ್ಚ್​ 20ರಂದು ನಡೆದಿದ್ದ ವೆಸ್ಟ್ ಇಂಡೀಸ್ ವಿರುದ್ಧದ ಲೀಗ್ ಹಂತದ ಪಂದ್ಯದಲ್ಲಿ ಭಾರತ 112 ರನ್​​ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಕ್ರೀಸ್​​​​​​ಗಿಳಿದ ವಿರಾಟ್​ ಕೊಹ್ಲಿ ಹಾಗೂ ಯುವರಾಜ್​ ಸಿಂಗ್​ ಭಾರತವನ್ನು ಸುಭದ್ರ ಸ್ಥಿತಿಗೆ ತಂದಿದ್ದರು. ಕೊಹ್ಲಿ ಅರ್ಧ ಶತಕ ಗಳಿಸಿ ವಿಕೆಟ್​ ಒಪ್ಪಿಸಿದ್ರೆ, ಯುವರಾಜ್​ ಸಿಂಗ್​ ಬರೋಬ್ಬರಿ 113 ರನ್​​​​ ಗಳಿಸಿದಲ್ಲದೆ ಬೌಲಿಂಗ್​ನಲ್ಲಿ 2 ವಿಕೆಟ್​ ಪಡೆದು ಭಾರತಕ್ಕೆ ಆಸರೆಯಾಗಿದ್ರು.

ಇದೇ ಪಂದ್ಯದಲ್ಲಿ ಯುವರಾಜ್​ ಬ್ಯಾಟಿಂಗ್ ನಡೆಸುತ್ತಿದ್ದ ವೇಳೆ ಅನಾರೋಗ್ಯದ ಕಾರಣ ಮೈದಾನದಲ್ಲೇ ಕುಸಿದು ಬಿದ್ದಿದ್ದರು. ಅಲ್ಲದೆ ಹಲವು ಬಾರಿ ರಕ್ತ ವಾಂತಿ ಮಾಡಿಕೊಂಡಿದ್ದರು, ಬಳಿಕ ಚೇತರಿಸಿಕೊಂಡು ದೇಶಕ್ಕಾಗಿ ಬ್ಯಾಟ್​ ಹಿಡಿದು ಶತಕ ಸಿಡಿಸಿದ್ದರು. ಭಾರತ ಕ್ರಿಕೆಟ್​ ಇತಿಹಾಸದಲ್ಲಿ ಈ ಪಂದ್ಯ ಮರೆಯಲಾಗದ ಹೊಸ ಅಧ್ಯಾಯ ಬರೆದಿತ್ತು.

ABOUT THE AUTHOR

...view details